ಮೈಸೂರಿನಲ್ಲಿ ಮನುಷ್ಯನ ಮುಖವನ್ನೇ ಹೋಲುವ ಆಡಿನ ಮರಿ
ಮೈಸೂರು, ಮೇ 26 : ನಮ್ಮ ನಡುವೆ ನಿತ್ಯ ಅಚ್ಚರಿಗಳು ನಡೆಯುತ್ತಿರುತ್ತವೆ. ಆ ಪೈಕಿ ಎಷ್ಟು ಸುಳ್ಳೋ, ಎಷ್ಟು ನಿಜವೋ ಎಂಬ ಬಗ್ಗೆ ಸಂಶೋಧನೆ ಸಹ ನಡೆಯುತ್ತವೆ. ಕಣ್ಣಿನಿಂದ ಕಲ್ಲು ಬರುವುದು, ವಿಚಿತ್ರವಾಗಿ ಪ್ರಾಣಿಗಳ ಹಾಗೆ ಮನುಷ್ಯರು ವರ್ತಿಸುವುದು ಇವೆಲ್ಲವನ್ನು ನೋಡಿರುತ್ತೇವೆ. ಅದೇ ರೀತಿಯಾದ ವಿಸ್ಮಯವೊಂದು ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಸರಗೂರು ತಾಲೂಕಿನ ಹುಲಿಕುರೆ ಗ್ರಾಮದಲ್ಲಿ ಮಾನವನ ಮುಖ ಹೋಲುವ ಆಡು ಮರಿ ಜನಿಸಿದ್ದು, ಅಚ್ಚರಿಗೆ ಕಾರಣವಾಗಿದೆ. ಇದೇ ಗ್ರಾಮದ ದಾಸಯ್ಯ ಎಂಬುವವರ ಮನೆಯಲ್ಲಿ ಜನಿಸಿದ ಆಡು ಮರಿ ಮುಖ ಮಾನವ ಮುಖವನ್ನೇ ಥೇಟ್ ಹೋಲುತ್ತಿದೆ. ಶನಿವಾರದಂದು ದಾಸಯ್ಯ ಅವರ ಆಡು ಮರಿ ಹಾಕಿತ್ತು. ನೋಡಿದರೆ ಅದರ ಮುಖ ಮನುಷ್ಯನ ಮುಖ ಹೋಲುವಂತಿತ್ತು. ಇದನ್ನು ನೋಡಿ ಅವರು ಅಚ್ಚರಿ ವ್ಯಕ್ತಪಡಿಸಿದ್ದರು.

ಆಡು ಮರಿ ನೋಡಲು ಜನ ಮುಗ್ಗಿ ಬಿದ್ದರು. ಇದಾದ ಬಳಿಕ ಆ ಆಡು ಮರಿ ಮೃತಪಟ್ಟಿದೆ. ಈ ವಿಶೇಷ ಆಡು ಮರಿ ಕೇವಲ ಒಂದು ದಿನ ಮಾತ್ರ ಬದುಕುಳಿದಿತ್ತು. ಇನ್ನು ಇದು ದೇವರೆಂದು ಕೆಲವರು ಪೂಜೆ ಸಹ ಮಾಡಿದರು. ಮೃತಪಟ್ಟಿದ್ದಕ್ಕೆ ಕಾರಣ ತಿಳಿದಿಲ್ಲ ಎನ್ನುತ್ತಾರೆ ದಾಸಯ್ಯ ಕುಟುಂಬಸ್ಥರು.
ಜೈವಿಕವಾಗಿ ನಡೆಯುವ ಪ್ರಕ್ರಿಯೆಯಲ್ಲಿ ಏನೋ ಹೆಚ್ಚು- ಕಡಿಮೆ ಆಗಿ ಈ ರೀತಿಯ ಬೆಳವಣಿಗೆಗಳನ್ನು ಕಾಣಬಹುದು ವಿನಾ ಇದರಲ್ಲಿ ವಿಸ್ಮಯ ಅಂತೇನೂ ಇಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications