ಪ್ರಮಾಣವಚನದ ಬಳಿಕ ಅನಂತ್ ಕುಮಾರ್ ನೆನೆದ ಪ್ರತಾಪ್ ಸಿಂಹ
ಮೈಸೂರು, ಜೂನ್ 18: ನಿನ್ನೆ ಸಂಸತ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಬಿಜೆಪಿ ಹಿರಿಯ ಮುತ್ಸದ್ದಿ ದಿ.ಅನಂತ್ ಕುಮಾರ್ ರವರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ದಿ.ಅನಂತ್ ಕುಮಾರ್ ಅವರನ್ನು ನೆನೆದ ಸಂಸದ ಪ್ರತಾಪ್ ಸಿಂಹ, ನಾವೆಲ್ಲ ಇಂದು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೆ ಅದಕ್ಕೆ ಮೂಲ ಕಾರಣ ಅನಂತ್ ಕುಮಾರ್ ಅವರು. ಸರ್ ನಿಮ್ಮ ಅನುಪಸ್ಥಿತಿ ನಿಜಕ್ಕೂ ಕಾಡುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಸಂಸತ್ ನಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುತ್ತಿದ್ದ ಸಂಸದ ಅನಂತ್ ಕುಮಾರ್ ಅವರು ನಮಗೆ ಮಾದರಿ ಎಂದು ಟ್ವೀಟ್ ಮಾಡಿದ್ದಾರೆ.











Click it and Unblock the Notifications