ನಟ ನವೀನ್ ಕೊಲೆ : ನಾಲ್ವರು ಆರೋಪಿಗಳು ಶರಣು

ಮೈಸೂರು, ಮಾ. 24 : 'ಹಾಯ್ ಕೃಷ್ಣ' ಚಿತ್ರದ ನಾಯಕ, ನಿರ್ಮಾಪಕ ನವೀನ್ ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಇದುವರೆಗೂ 6 ಆರೋಪಿಗಳು ಸಿಕ್ಕಿಬಿದ್ದಿದ್ದು, ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.

ಸೋಮವಾರ ಬೆಳವಾಡಿ ನಿವಾಸಿಗಳಾದ ದೀಪು, ಲೋಕೇಶ್, ದಿವಾಕರ ಮತ್ತು ಕೃಷ್ಣ ಎಂಬ ಆರೋಪಿಗಳು ವಕೀಲರೊಂದಿಗೆ ಆಗಮಿಸಿ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಶರಣಾದರು. ಎಲ್ಲಾ ಆರೋಪಿಗಳನ್ನು ಕೋರ್ಟ್ ಪೊಲೀಸರ ವಶಕ್ಕೆ ನೀಡಿದೆ. [ನವೀನ್ ಕೊಲೆ ಇಬ್ಬರ ಬಂಧನ]

Naveen

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಣಿ ಮತ್ತು ಶಂಕರ್ ಎಂಬ ಆರೋಪಿಗಳನ್ನು ವಿಜಯನಗರ ಪೊಲೀಸರು ಮಾ.19ರಂದು ಬೋಗಾದಿಯ ತೋಟದ ಮನೆಯಲ್ಲಿ ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು 6 ಆರೋಪಿಗಳು ಸಿಕ್ಕಿಬಿದ್ದಂತಾಗಿದೆ. [ನಟ ನವೀನ್ ಹತ್ಯೆ]

ಒಟ್ಟು 8 ಜನರ ತಂಡ ಹಾಯ್ ಕೃಷ್ಣ' ಚಿತ್ರದ ನಾಯಕ, ನಿರ್ಮಾಪಕ ನವೀನ್ ಅವರನ್ನು ಮಾ.15ರ ಭಾನುವಾರ ರಾತ್ರಿ ಕೊಲೆ ಮಾಡಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದೇವೆ ಎಂದು ವಿಜಯನಗರ ಠಾಣೆ ಇನ್ಸ್‌ಪೆಕ್ಟರ್ ಸಿ.ವಿ.ರವಿ ಹೇಳಿದ್ದಾರೆ.

ಜಾತ್ರೆಗೆ ಬಂದವರು ಕೊಲೆ ಮಾಡಿದ್ದರು : ಮಾ.15ರ ಭಾನುವಾರ ಮೈಸೂರಿನ ಬೆಳವಾಡಿಯ ಮಾರಮ್ಮ ದೇಗುಲದ ಬಳಿ ನವೀನ್ ಹತ್ಯೆ ನಡೆದಿತ್ತು. ನವೀನ್ ನಿವಾಸದ ಬಳಿಯ ಮಾರಮ್ಮ ದೇವಾಲಯದಲ್ಲಿ ಭಾನುವಾರ ಮಾರಮ್ಮ ದೇವಿಯ ಉತ್ಸವವಿತ್ತು. ನವೀನ್ ಇದರಲ್ಲಿ ಪಾಲ್ಗೊಂಡಿದ್ದರು, ಉತ್ಸವ ಮುಗಿದ ಬಳಿಕ ಈ ಕೊಲೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+