ಮೈಸೂರು: 600 ನಿವೇಶನಗಳ ಮಾಹಿತಿ ನಾಪತ್ತೆ; ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್
ಮೈಸೂರು, ಏಪ್ರಿಲ್ 25: ನಿವೇಶನಕ್ಕೆ ಸಂಬಂಧಿಸಿದ ಲೆಡ್ಜರ್ನಲ್ಲಿ 300 ಪುಟಗಳು ನಾಪತ್ತೆಯಾಗಿರುವುದರಿಂದ ಒಟ್ಟು 600 ನಿವೇಶನಗಳ ಮಾಹಿತಿ ನಾಪತ್ತೆಯಾಗಿದ್ದು, ಅವುಗಳ ನೈಜತೆಯನ್ನು ಲೆಕ್ಕಶಾಖೆಯಲ್ಲಿನ ದಾಖಲೆಯೊಂದಿಗೆ ಪರಿಶೀಲಿಸಲಾಗುತ್ತಿದೆ ಎಂದು ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ವಿ. ರಾಜೀವ್, ಮುಡಾ ಕಚೇರಿಯಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಮೂಲ ದಾಖಲೆಗಳ ವಿಶೇಷ ಪರಿಶೀಲನಾ ಕಾರ್ಯದಲ್ಲಿ 300 ಪುಟಗಳು, 216 ನಿವೇಶನಗಳ ದಾಖಲೆಗಳು, ವ್ಯತ್ಯಾಸವಾಗಿರುವ ಕಡತಗಳು ನಾಪತ್ತೆಯಾಗಿದೆ. ಮೇಲ್ನೋಟಕ್ಕೆ ಸಿಎ ನಿವೇಶನ, ಮೂಲ ನಿವೇಶನ, ಬದಲಿ ನಿವೇಶನ, ಹರಾಜು ನಿವೇಶನಗಳಿಗೆ ಸಂಬಂಧಪಟ್ಟಂತೆ ದಾಖಲೆಗಳು ನಾಪತ್ತೆಯಾಗಿರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದರು.
ಮನೆಯವರೇ ಕಳ್ಳರು
ಮನೆಯ ಒಳಗಡೆ ಕೆಲಸ ಮಾಡುವವರೇ ಕಳ್ಳರಾಗಿರುವುದು ಕಂಡು ಬಂದಿದೆ. ಮನೆಯ ಒಳಗಿರುವವರು ಹೊರಗಿನವರಿಗೆ ಕೈ ಜೋಡಿಸಿರುವ ಕಾರಣ ಸುಲಭವಾಗಿ ಇಂತಹ ಅಕ್ರಮಗಳನ್ನು ಮಾಡಲಾಗಿದೆ ಎಂದರು. ಮುಡಾ ಕಾರ್ಯದರ್ಶಿ ಡಾ.ಎನ್.ಸಿ. ವೆಂಕಟರಾಜು ನೇತೃತ್ವದಲ್ಲಿ ಐದು ಜನ ವಿಶೇಷ ತಹಸಿಲ್ದಾರ್, ಒಬ್ಬರು ಸಹಾಯಕ ಕಾರ್ಯದರ್ಶಿ ಆರು ತಂಡಗಳನ್ನು ರಚಿಸಲಾಗಿತ್ತು.

ಈ ತಂಡವು ಎರಡು ದಿನಗಳ ಕಾಲ ನಡೆಸಿದ ವಿಶೇಷ ದಾಖಲೆಗಳ ಪರಿಶೀಲನಾ ವೇಳೆಯಲ್ಲಿ ಸದ್ಯಕ್ಕೆ 300 ಪುಟಗಳು ಕಾಣೆಯಾಗಿವೆ. ಹಾಗಾಗಿ, ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ಬಳಿಕ ಸೂಕ್ತ ತನಿಖೆ ನಡೆಸುವ ಕುರಿತು ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

ಸಿಐಡಿಯಲ್ಲಿ 13 ಪ್ರಕರಣಗಳು ದೃಢ:
2005ರಲ್ಲಿ ಪ್ರಾಧಿಕಾರದಿಂದ ಮಂಜೂರಾದ ಆಶಾಮಂದಿರ ಯೋಜನೆಯಡಿ ಮಂಜೂರಾದ ನಿವೇಶನಗಳಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ವಹಿಸಿದ್ದು, 142 ಪ್ರಕರಣಗಳಲ್ಲಿ 13 ಪ್ರಕರಣಗಳು ಮಾತ್ರ ದೃಢವಾಗಿತ್ತು. ಸಿಐಡಿಯು ಕೇಳಿದ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗದ ಕಾರಣ ಹಲವು ಕೇಸುಗಳು ಮುಕ್ತಾಯವಾಯಿತು. ಹೀಗಾಗಿಯೇ, ಈ ಬಾರಿ ದಾಖಲೆಗಳನ್ನು ಗಣಕೀಕರಣ ಮಾಡುವ ಜತೆಗೆ ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಯಾವ ಏಜೆನ್ಸಿಯಿಂದ ತನಿಖೆ ನಡೆಸಬಹುದು ಎಂಬುದನ್ನು ನಿರ್ಧರಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಡಾ ಸದಸ್ಯರಾದ ಎನ್. ಲಕ್ಷ್ಮೀದೇವಿ, ಜಿ. ಲಿಂಗಯ್ಯ, ಎಂ.ಎಸ್. ನವೀನ್ಕುಮಾರ್, ಕೆ. ಮಾದೇಶ್, ಕಾರ್ಯದರ್ಶಿ ಡಾ.ಎನ್.ಸಿ. ವೆಂಕಟರಾಜು ಇದ್ದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications