ಮೈಲ್ಯಾಂಗ್ ಆಡಿಯೋ ಸ್ಟೋರಿ ಚಾಲೆಂಜ್: ಇಲ್ಲಿದೆ ಸ್ಪರ್ಧೆಯ ಸಂಪೂರ್ಣ ವಿವರ
ಬೆಂಗಳೂರು, ಜುಲೈ 17: ಹೊಸ ಓದುಗರನ್ನು ಆಡಿಯೋ ಮೂಲಕ ಓದಿನತ್ತ ತರುವ ಒಂದು ಕಮ್ಯೂನಿಟಿ ಪ್ರಾಡಕ್ಟ್ ಆಗಿ "ಮೈಲ್ಯಾಂಗ್ ಆಡಿಯೋ" ಅನ್ನು ಮೈಲ್ಯಾಂಗ್ ಸಂಸ್ಥೆ ಹೊರ ತಂದಿದೆ. ಇದು ಕತೆಗಾರರನ್ನು, ದನಿ ಕಲಾವಿದರನ್ನು ಬೆಸೆದು ಆಡಿಯೋ ಕತೆಗಳ ಮಾಧ್ಯಮವನ್ನು ಬಳಸಿ ಹೊಸ ಓದುಗರನ್ನು ಕೇಳುವಿಕೆಯ ಮೂಲಕ ಕನ್ನಡ ಓದಿನತ್ತ ತರುವ ಗುರಿ ಹೊಂದಿದೆ.
"ಮೈಲ್ಯಾಂಗ್ ಆಡಿಯೋ" ಅಪ್ಲಿಕೇಶನ್ ಅಲ್ಲಿ ನೂರಾರು ಕತೆಗಾರರು ಮತ್ತು ಕಥಾ ವಾಚಕರು ಈಗ ದಿನವೂ ಹೊಸ ಕತೆಗಳನ್ನು ಆಡಿಯೋ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಒಂದು ಪ್ರಬಲವಾದ ಸಮುದಾಯ ಇಲ್ಲಿ ನೆಲೆಗೊಳ್ಳುತ್ತಿದೆ. ಈ ನೆಲೆಯನ್ನು ಇನ್ನಷ್ಟು ಹಿಗ್ಗಿಸುವ ಪ್ರಯತ್ನವಾಗಿ ಮೈಲ್ಯಾಂಗ್ ಸಂಸ್ಥೆ ಇದೇ ಮೊದಲ ಬಾರಿ ಆಡಿಯೋ ಸ್ಟೋರಿ ಚಾಲೆಂಜ್ ಒಂದನ್ನು ಕನ್ನಡದಲ್ಲಿ ಹಮ್ಮಿಕೊಂಡಿದ್ದು, ಕೇಳುಗರ ಅತೀ ಹೆಚ್ಚು ಮನ್ನಣೆ ಪಡೆಯುವ ಕತೆಗೆ 10,000 ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ.

ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿರುವ ಯುವ ಕನ್ನಡಿಗರನ್ನು ಕನ್ನಡ ಓದಿನತ್ತ ಸೆಳೆಯುವ ಉದ್ದೇಶದಿಂದ ಮೈಲ್ಯಾಂಗ್ ಸಂಸ್ಥೆ ಕನ್ನಡದ ಮೊಟ್ಟ ಮೊದಲ ಆಡಿಯೋ ಸ್ಟೋರಿ ಚಾಲೆಂಜ್ ಅನ್ನು ಜುಲೈ 16ರಿಂದ ಜುಲೈ 25ರವರೆಗೆ ಮೈಲ್ಯಾಂಗ್ ಆಡಿಯೋ ಅಪ್ಲಿಕೇಶನ್ ಅಲ್ಲಿ ಹಮ್ಮಿಕೊಂಡಿದೆ. ಇದರಡಿ ಲೇಖಕರು ತಮ್ಮ ಕತೆಯನ್ನು ಆ್ಯಪ್ನಲ್ಲಿ ಪ್ರಕಟಿಸಿ, ತಾವೇ ವಾಚಿಸಬಹುದು ಇಲ್ಲವೇ ಗೆಳೆಯರನ್ನೂ ಆಹ್ವಾನಿಸಬಹುದಾಗಿದೆ.
ಕಥಾ ವಾಚಕರು ತಮ್ಮ ಇಷ್ಟದ ಕತೆಯನ್ನು ಆಯ್ದುಕೊಂಡು ವಾಚಿಸಿ, ಪ್ರಕಟಿಸಬಹುದು. ಸ್ಪರ್ಧೆಯ ಕೊನೆಯಲ್ಲಿ ಯಾವ ಆಡಿಯೋ ಕತೆಗೆ ಅತೀ ಹೆಚ್ಚು ಪ್ಲೇ-ಕೌಂಟ್ ದೊರೆಯುತ್ತದೆಯೋ ಆ ಕತೆಗೆ 10,000 ರೂಪಾಯಿ ಬಹುಮಾನ ದೊರೆಯಲಿದ್ದು, ಕನ್ನಡದ ಕತೆಗಾರರು ಮತ್ತು ಕಥಾ ವಾಚಕರು www.mylangaudio.in/kn/challenge ಕೊಂಡಿಯಲ್ಲಿ ಹೆಚ್ಚಿನ ವಿವರಗಳನ್ನು ಪಡೆಯುವಂತೆ ಎಂದು ಮೈಲ್ಯಾಂಗ್ ಸಂಸ್ಥೆ ಮನವಿ ಮಾಡಿಕೊಂಡಿದೆ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್











Click it and Unblock the Notifications