"ಪುಟ್ಟ ಮಕ್ಕಳ ಕೆನ್ನೆ ಮುಟ್ಟುವುದು ಅಪರಾಧವಲ್ಲ"; ಷರತ್ತುಗಳು ಅನ್ವಯ!
ಮುಂಬೈ, ಫೆಬ್ರವರಿ.05: ಲೈಂಗಿಕ ದುರುದ್ದೇಶವಿಲ್ಲದೇ ಪುಟ್ಟ ಮಕ್ಕಳ ಕೆನ್ನೆ ಮುಟ್ಟುವುದು ಶಿಕ್ಷಾರ್ಹ ಅಪರಾಧವಲ್ಲ ಎಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಬಗ್ಗೆ ಮುಂಬೈ ವಿಶೇಷ ನ್ಯಾಯಾಲಯವು ಆದೇಶಿಸಿದೆ. ಎರಡು ಪ್ರತ್ಯೇಕ ಪ್ರಕರಣಗಳ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.
ಎರಡು ಪ್ರಕರಣಗಳ ಪೈಕಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆರೋಪಿಗೆ 1 ವರ್ಷ ಜೈಲುಶಿಕ್ಷೆಯನ್ನು ವಿಧಿಸಿದೆ. 33 ವರ್ಷದ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಈ ಅಪರಾಧಕ್ಕೆ ಗರಿಷ್ಠ 5 ವರ್ಷಗಳ ಜೈಲುಶಿಕ್ಷೆ ವಿಧಿಸುವುದಕ್ಕೆ ಅವಕಾಶವಿದೆ.
ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಹೊರತುಪಡಿಸಿ ಆರೋಪಿ ವಿರುದ್ಧ ಬೇರೆ ಯಾವುದೇ ಪ್ರಕರಣಗಳಿಲ್ಲ. ಆರೋಪಿಗೆ ಸಣ್ಣ ವಯಸ್ಸು ಇರುವುದರಿಂದ ತಿದ್ದಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತದೆ. ಈ ಹಿನ್ನೆಲೆ ಆರೋಪಿಗೆ 10,000 ರೂಪಾಯಿ ದಂಡ ಮತ್ತು 1 ವರ್ಷ ಸೆರೆವಾಸ ವಿಧಿಸಲಾಗುತ್ತದೆ ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಕೋರ್ಟ್ ನಲ್ಲಿ ಮಹಿಳೆ ನೀಡಿದ ಹೇಳಿಕೆಯ ವಿವರಣೆ
ಕಳೆದ 2017ರ ಜೂನ್.02ರಂದು ನಡೆದ ಘಟನೆ ಬಗ್ಗೆ ಮಹಿಳೆಯು ಕೋರ್ಟ್ ಗೆ ವಿವರಣೆ ನೀಡಿದ್ದಾರೆ. "ಅಂದು ನನ್ನ ಪತಿ ಕೆಲಸಕ್ಕಾಗಿ ಮನೆಯಿಂದ ಹೊರಹೋಗಿದ್ದರು. ಫ್ರಿಡ್ಜ್ ಹೊಂದಿಸುವುದಕ್ಕಾಗಿ ಎಲೆಕ್ಟ್ರಿಷನ್ ನ್ನು ಕರೆಸುವಂತೆ ವಾಚ್ ಮೆನ್ ಗೆ ಹೇಳಲಾಗಿತ್ತು. ಮಧ್ಯಾಹ್ನ 2.30 ಫ್ರಿಡ್ಜ್ ರಿಪೇರಿ ಮಾಡುವುದಕ್ಕಾಗಿ ಮನೆಗೆ ಬಂದ ಆರೋಪಿ (ಎಲೆಕ್ಟಿಷನ್) ನನ್ನ ಮಗಳ ಹತ್ತಿರ ಹೋಗಿ ಅವಳ ಕೆನ್ನೆಯನ್ನು ಗಿಲ್ಲಿದನು. ಮಗಳ ಹತ್ತಿರ ಹೋಗದೇ ಸುಮ್ಮನೆ ತನ್ನ ಕೆಲಸವನ್ನು ನೋಡಿಕೊಳ್ಳುವಂತೆ ಆರೋಪಿಗೆ ಹೇಳಿದೆ. ತದನಂತರ ನಾನು ಅಡುಗೆ ಮನೆಯಲ್ಲಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಹಿಂಭಾಗದಿಂದ ಬಂದ ಆರೋಪಿ ನನ್ನನ್ನು ಅಪ್ಪಿಕೊಂಡನು. ಆತನಿಂದ ಬಿಡಿಸಿಕೊಂಡು ಅವನನ್ನು ದೂರ ತಳ್ಳಿದೆ" ಎಂದು ಮಹಿಳೆಯು ಕೋರ್ಟ್ ಎದುರು ಹೇಳಿದ್ದಾರೆ.

ಮಹಿಳೆಯ ಕತ್ತು ಹಿಡಿದು ದೌರ್ಜನ್ಯಕ್ಕೆ ಯತ್ನ
ಅಸಭ್ಯವಾಗಿ ವರ್ತಿಸಲು ಮುಂದಾದ ಆರೋಪಿಗೆ ಆ ತಕ್ಷಣಕ್ಕೆ ಮನೆಯಿಂದ ಹೋಗುವಂತೆ ಮಹಿಳೆಯು ಎಚ್ಚರಿಕೆ ನೀಡಿದರು. ಆದರೆ ಅದಕ್ಕೆ ಬೆದರದ ಆರೋಪಿಯು ಮಹಿಳೆಯ ಕುತ್ತಿಗೆ ಹಿಡಿದು ಲೈಂಗಿಕ ದೌರ್ಜನ್ಯಕ್ಕೆ ಮುಂದಾಗುತ್ತಾನೆ. ಮಹಿಳೆಯು ಪ್ರತಿರೋಧ ತೋರಿದ ಸಂದರ್ಭದಲ್ಲಿ ಮತ್ತೆ ಅಲ್ಲಿ ನಿಂತಿದ್ದ ಪುಟ್ಟ ಮಗುವಿಗೆ ಕೆನ್ನೆಯನ್ನು ಗಿಲ್ಲುತ್ತಾನೆ ಎಂದು ತಿಳಿದು ಬಂದಿದೆ.

ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ ಮಹಿಳೆ
ಆರೋಪಿಯು ಲೈಂಗಿಕ ದೌರ್ಜನ್ಯಕ್ಕೆ ಮುಂದಾಗುತ್ತಿದ್ದಂತೆ ಮನೆಯಿಂದ ಹೊರ ಹೋಗುವಂತೆ ಮಹಿಳೆ ಜೋರಾಗಿ ಕೂಗಿಕೊಳ್ಳುತ್ತಾರೆ. ಅದರಿಂದ ಬೆದರಿದ ಆರೋಪಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ತಕ್ಷಣ ಎಲೆಕ್ಟ್ರಿಷನ್ (ಆರೋಪಿ) ಮೇಲಾಧಿಕಾರಿಗೆ ಆತನ ವಿರುದ್ಧ ದೂರು ನೀಡುತ್ತಾರೆ. ಸಹೋದರಿ ಬಳಿ ನಡೆದ ಘಟನೆ ಬಗ್ಗೆ ತಿಳಿಸಿದ ಪೊಲೀಸರಿಗೆ ದೂರು ನೀಡಲಾಗುತ್ತದೆ. ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುತ್ತಾರೆ. ಆದರೆ ಆರೋಪಿಯು ಮತ್ತೆ ಕೋರ್ಟ್ ನಿಂದ ಜಾಮೀನು ಪಡೆದುಕೊಂಡಿರುತ್ತಾನೆ.

ನ್ಯಾಯಾಲಯಕ್ಕೆ ಮಗುವನ್ನು ಕರೆ ತಂದ ತಾಯಿ
ಏಳು ವರ್ಷದ ಮಗುವನ್ನು ಕೂಡಾ ಸಾಕ್ಷ್ಯ ಹೇಳುವುದಕ್ಕಾಗಿ ತಾಯಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಎರಡ್ಮೂರು ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಮಗುವಿಗೆ ಯಾವುದೇ ನೆನಪು ಇರಲಿಲ್ಲ. ಈ ಹಿನ್ನೆಲೆ ಮಗುವಿನ ಹೇಳಿಕೆ ಬದಲು ಮಹಿಳೆಯ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಆರೋಪಿಗೆ ಶಿಕ್ಷೆಯನ್ನು ವಿಧಿಸಲಾಗುತ್ತಿದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ










Click it and Unblock the Notifications