ರಾಧೆ ಮಾಳನ್ನು ಕಾಳಿಗೆ ಹೋಲಿಸಿ ಕಷ್ಟಕ್ಕೆ ಸಿಲುಗಿದ ಸೋನು
ಮುಂಬೈ, ಆಗಸ್ಟ್ 18: ಸ್ವಯಂಘೋಷಿತ ದೇವಮಹಿಳೆ, ವಿವಾದಿತ ರಾಧೇ ಮಾ ಪರ ಟ್ವೀಟ್ ಮಾಡಿದ ತಪ್ಪಿಗೆ ಗಾಯಕ ಸೋನು ನಿಗಮ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಕೆಯಾಗಿರುವುದು ಈಗಾಗಲೇ ತಿಳಿದಿರಬಹುದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋನು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಮ್ಮ ದೇಶದಲ್ಲಿ ಕಾಳಿ ಮಾ ಅವರನ್ನು ರಾಧೇ ಮಾ ಅವರಿಗಿಂತ ಕಡಿಮೆ ಬಟ್ಟೆಯಲ್ಲಿ ಚಿತ್ರಿಸಲಾಗುತ್ತಿದೆ. ವಸ್ತ್ರ ಸಂಹಿತೆ ಜಾರಿ ಮಾಡಿ ಒಬ್ಬರನ್ನು ದೂರುವುದು ಅವರ ವಿರುದ್ಧ ಮೊಕದ್ದಮೆ ಹೂಡುವುದು ಎಷ್ಟು ಸರಿ ಎಂದು ಸೋನು ನಿಗಮ್ ಟ್ವೀಟ್ ಮಾಡಿದ್ದರು.
ಕಾಳಿ ದೇವತೆಗೆ ರಾಧೇ ಮಾರನ್ನ್ನು ಸೋನು ನಿಗಮ್ ಅವರು ಹೋಲಿಸಿದ್ದಾರೆ. ಹಿಂದೂ ಧರ್ಮಕ್ಕೆ ಅಪಮಾನ ಎಸಗಿದ್ದಾರೆ ಎಂದು ಹೇಳಿ ಸೋನು ವಿರುದ್ಧ ಸಮತ್ ನಗರ ಹಾಗೂ ಸಾಕಿನಾಕಾ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲಾಗಿದೆ. [ಸನ್ನಿ ಲಿಯೋನ್ ಫ್ಯಾನ್ ರಾಧೇ ಮಾ ಬಗ್ಗೆ ಟ್ವೀಟ್ಸ್ ]
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಸೋನು ವಿರುದ್ಧ ಇನ್ನೂ ಎಫ್ ಐಆರ್ ಹಾಕಿಲ್ಲ ಎಂದು ಡಿಸಿಪಿ ದಹಿಕರ್ ಹೇಳಿದ್ದಾರೆ. ಸೋನು ನಿಗಮ್ ಟ್ವೀಟ್ಸ್ ಹಾಗೂ ಪ್ರತಿಕ್ರಿಯೆಗಳನ್ನು ಮುಂದೆ ಓದಿ...

ನನ್ನನ್ನು ಯಾಕೆ ಟಾರ್ಗೆಟ್ ಮಾಡ್ತಾ ಇದ್ದೀರಾ?: ಸೋನು
ನನ್ನನ್ನು ಯಾಕೆ ಟಾರ್ಗೆಟ್ ಮಾಡ್ತಾ ಇದ್ದೀರಾ?, ಆ ಮಹಿಳೆ ಯಾರು ಎಂಬುದು ನನಗೆ ತಿಳಿದಿಲ್ಲ, ಆಕೆ ಯಾರದ್ದೋ ಪತ್ನಿ, ತಾಯಿ, ಮಗಳು ಆಗಿರಲೇಬೇಕಲ್ಲವೇ, ಮೊದಲು ಗೌರವ ಕೊಡಿ, ಕೆಲವರು ಆಕೆಯನ್ನು ಮಾ ಎಂದು ಕರೆದರೆ ನಾವು ಯಾಕೆ ವಿರೋಧಿಸಬೇಕು.

ಆಕೆಯನ್ನು ಕಾನೂನು ಅಪರಾಧಿ ಎಂದು ಕರೆದಿದೆಯೇ?
ರಾಧೆ ಮಾ ಅವರನ್ನು ಕಾನೂನು ಅಪರಾಧಿ ಎಂದು ಕರೆದಿದೆಯೇ? ದೇಶದ ಪ್ರಜ್ಞಾವಂತ ನಾಗರೀಕರಾಗಿ ನಾವು ಆಕೆಯ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯೇ? ದೇಶದ ಬಗ್ಗೆ ಈಗಾಗಲೇ ಅತ್ಯಾಚಾರ ಪ್ರಕರಣಗಳು ಹೆಚ್ಚಿರುವ ಸಂದರ್ಭದಲ್ಲಿ ಮಹಿಳೆಯ ಮೇಲೆ ಈ ರೀತಿ ಮುಗಿ ಬೀಳುವುದು ಸರಿಯಲ್ಲ ಎಂದಿದ್ದಾರೆ.

ಕಾಳಿ ಮಾ ರನ್ನು ಒಪ್ಪಿಕೊಂಡಿದ್ದೇವೆ
ನಗ್ನ ಅಥವಾ ಕನಿಷ್ಠ ಉಡುಪುಗಳ ಕಾಳಿ ಮಾ ರನ್ನು ನಾನು ಚಿಕ್ಕಂದಿನಿಂದ ಒಪ್ಪಿಕೊಂಡಿದ್ದೇವೆ. ಆದರೆ, ರಾಧೆ ಮಾ ಅವರ ಆಧಾತ್ಮ ಶಕ್ತಿ ಬಗ್ಗೆ ಅಪನಂಬಿಕೆ ಇದ್ದರೆ ಕಾನೂನಿನ ಪ್ರಕಾರ ಹೋರಾಟ ನಡೆಸಿ, ಅಪಮಾನ ಮಾಡಬೇಡಿ. ಮಿನಿ ಸ್ಕರ್ಟ್ ಧರಿಸಿದ ಮಾತ್ರಕ್ಕೆ ದೂಷಿಸುವುದು ಸರಿಯಲ್ಲ.

ಕುಂಭಮೇಳದ ಬಗ್ಗೆ ಸೋನು
ಕುಂಭಮೇಳದ ಬಗ್ಗೆ ಸೋನು ಟ್ವೀಟ್ ಮಾಡಿ, ನಗ್ನ ಸಾಧುಗಳು, ನಾಗಾಸಾಧುಗಳು, ದಿಗಂಬರ ಮುನಿಗಳ ಬಗ್ಗೆ ಆಕ್ಷೇಪ ಏಕಿಲ್ಲ, ನಿಮ್ಮ ನಂಬಿಕೆಗೆ ಅನುಗುಣವಾಗಿ ಎಲ್ಲರೂ ವರ್ತಿಸಬೇಕು ಎಂದೇಕೆ ಬಯಸುತ್ತೀರಿ. ವಸ್ತ್ರ ಸಂಹಿತೆಯಿಂದ ಆಧಾತ್ಮ ಶಕ್ತಿ ಹೆಚ್ಚು ಕಮ್ಮಿ ಆಗುತ್ತದೆಯೇ?
|
ಹೋಗಿ ಎಲ್ಲರ ಮೇಲೂ ದೂರು ನೀಡಿ
ಹೋಗಿ ಎಲ್ಲರ ಮೇಲೂ ದೂರು ನೀಡಿ ಪುರುಷ-ಮಹಿಳೆ ಎಂದು ವ್ಯತ್ಯಾಸ ಮಾಡಬೇಡಿ.

ಸರಿಯಾದ ನಿಲುವು ಹೊಂದಿ, ಆರಾಮಾಗಿರಿ
ಹೇಮಮಾಲಿನಿ ನೃತ್ಯ ನಿಮಗೆ ರುಚಿಸುತ್ತದೆ. ದೇವ ದೇವತೆಗಳಂತೆ ವೇಷ ಧರಿಸುವವರನ್ನು ನೋಡುತ್ತೀರಿ, ರಾಧೆ ಮಾ ವಸ್ತ್ರ ವಿನ್ಯಾಸದ ಏಕೆ ನಿಮಗೆ ತೊಂದರೆಯಾಗುತ್ತಿದೆ. ಮಹಿಳೆ ವಿರುದ್ಧದ ಶೋಷಣೆ ಖಂಡಿಸಿ ಮೇಣದ ಬತ್ತಿ ಹಚ್ಚಿ ಪ್ರತಿಭಟಿಸುತ್ತೀರಿ, ಅದರೆ, ಮಹಿಳೆಯ ನಗ್ನ ಚಿತ್ರ ಹಂಚಿ ಖುಷಿಪಡುತ್ತೀರಿ, ಸರಿಯಾದ ನಿಲು ತಳೆದು ಆರಾಮಾಗಿರಿ,
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications