ಚುನಾವಣೆ ಮುಂದಿಟ್ಟುಕೊಂಡು ಇಂದೆಂಥ ಮಾತು!
ಮುಂಬೈ, ಅ.14: ಚುನಾವಣೆ ಸಂದರ್ಭದಲ್ಲಿ ಇಲ್ಲ ಸಲ್ಲದ ಆಶ್ವಾಸನೆ ನೀಡುತ್ತಾ ಜನರ ಓಲೈಕೆಗೆ ತೊಡಗುವ ರಾಜಕಾರಣಿಗಳ ಮಧ್ಯೆ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆ ವಿಭಿನ್ನವಾದ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ರಾಜ್ ಠಾಕ್ರೆ ಅವರ ಕಸಿನ್ ಉದ್ಧವ್ ಅವರು ಬೆಳಗಾವಿ ಗಡಿ ವಿವಾದದಲ್ಲಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಯತ್ನಿಸಿದರೆ ರಾಜ್ ಠಾಕ್ರೆ ಅವರು ಈ ವಿವಾದ ಎಂದಿಗೂ ಬಗೆ ಹರಿಯುವುದಿಲ್ಲ ಎಂದಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದ ಎಂದಿಗೂ ಬಗೆ ಹರಿಯುವುದಿಲ್ಲ, ಬಗೆ ಹರಿಯಲು ರಾಜಕೀಯ ಬಿಡುವುದಿಲ್ಲ. ಸುಮಾರು 55 ವರ್ಷಗಳಿಂದ ನಡೆದು ಬಂದಿರುವ ಗೊಂದಲ ಘರ್ಷಣೆಗೆ ತಕ್ಷಣವೇ ಪರಿಹಾರ ನೀಡುತ್ತೇವೆ ಎಂದು ಯಾವುದಾದರೂ ಪಕ್ಷ ಹೇಳಿದರೆ ಅದು ಪೊಳ್ಳು ಭರವಸೆ ಅಲ್ಲದೆ ಮತ್ತೇನಲ್ಲ.
ಪರಿಹಾರ ಯಾರಿಗೂ ಬೇಕಿಲ್ಲ : ಅಸಲಿಗೆ ಸಮಸ್ಯೆಗೆ ಪರಿಹಾರ ಯಾರಿಗೂ ಬೇಕಿಲ್ಲ. ಗಡಿ ವಿವಾದವನ್ನು ಜೀವಂತ ಇಟ್ಟುಕೊಂಡು ರಾಜಕೀಯ ಲಾಭ ಪಡೆಯುವುದೇ ಎಲ್ಲರ ಉದ್ದೇಶ. ಒಂದು ವೇಳೆ ಬೆಳಗಾವಿಯಲ್ಲಿರುವ ಅಷ್ಟೂ ಮರಾಠಿಗಳು ಮಹಾರಾಷ್ಟ್ರಕ್ಕೆ ಸೇರಿದ ಕೂಡಲೇ ಅವರ ಬದುಕಿನ ಭಾಗ್ಯೋದಯವಾಗುತ್ತದೆ ಎಂದರೆ ಅದು ಮರೀಚಿಕೆಯ ಮಾತು.

ಬೆಳಗಾವಿಯಲ್ಲಿರುವ ಮರಾಠಿಗಳು 24 ತಾಸು ವಿದ್ಯುತ್ ಪಡೆಯುತ್ತಿದ್ದಾರೆ ಎಂದುಕೊಳ್ಳೋಣ. ಇದೇ ವ್ಯವಸ್ಥೆಯನ್ನು ಮಹಾರಾಷ್ಟ್ರದ ಭಾಗಕ್ಕೆ ಬಂದ ಕೂಡಲೇ ನಿರೀಕ್ಷಿಸುವಂತಿಲ್ಲ. ಮಹಾರಾಷ್ಟ್ರದಲ್ಲಿ ವಿದ್ಯುತ್ ಕ್ಷಾಮ ಹೆಚ್ಚಾಗಿದೆ ಎಂದು ರಾಜ್ ಠಾಕ್ರೆ ವಿವರಿಸಿದರು.
ಬೆಳಗಾಂ ಅನ್ನು ಬೆಳಗಾವಿ ಎಂದು ಬದಲಾಯಿಸುವುದು ಕರ್ನಾಟಕ ಸರ್ಕಾರಕ್ಕೆ ಬಿಟ್ಟಿದ್ದು, ಇದರಿಂದ ಮರಾಠಿಗರಿಗೇನು ನಷ್ಟವಿಲ್ಲ. ಮರಾಠಿಗಳು ದೇಶದ ಎಲ್ಲೆಡೆ ನೆಲೆಸಿದ್ದಾರೆ. ವಡೋದರಾದಲ್ಲೂ ಮರಾಠಿಗರು ತಮ್ಮತನವನ್ನು ಉಳಿಸಿಕೊಂಡು ಅಲ್ಲಿನ ಸಂಸ್ಕೃತಿಗೂ ಒಗ್ಗಿಕೊಂಡಿದ್ದಾರೆ. ಹೀಗಾಗಿ ಜನರ ಓಲೈಕೆಗಿಂತ ವಸ್ತುಸ್ಥಿತಿ ಅರಿವು ಮೂಡಿಸುವುದು ಮುಖ್ಯ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಮಹಾ ಚುನಾವಣೆ ಬಗ್ಗೆ: ಮಹಾರಾಷ್ಟ್ರ ಚುನಾವಣೆ ಚತುಷ್ಕೋನ ಸ್ಪರ್ಧೆ ಎಂದೇ ಎಲ್ಲೆಡೆ ಬಿಂಬಿಸಲಾಗುತ್ತಿದೆ. ಅದರೆ, ಬಿಜೆಪಿ, ಕಾಂಗ್ರೆಸ್, ಶಿವ ಸೇನಾ, ಎನ್ ಸಿಪಿಗೆ ತಕ್ಕ ಉತ್ತರ ನೀಡಲು ಎಂಎನ್ ಎಸ್ ಕೂಡಾ ಸಜ್ಜಾಗಿದೆ. ರಾಷ್ಟ್ರೀಯ ಪಕ್ಷಗಳು ಲೋಕಸಭೆ ಚುನಾವಣೆಯತ್ತ ಮಾತ್ರ ಗಮನ ಹರಿಸಿದರೆ ಒಳ್ಳೆಯದು. ರಾಜ್ಯಗಳ ಅಭಿವೃದ್ಧಿ ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟರೆ ಮಾತ್ರ ಏಳಿಗೆ ಸಾಧ್ಯ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ಹೇಳಿ ಕೊಟ್ಟ ಪಾಠ ಈಗ ಮರೆತಿದ್ದಾರೆ ಎಂದರು.
-
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ?












Click it and Unblock the Notifications