ತನ್ನ ಎದೆಯೊಳಗಿಂದ ಟೀಕಪ್ ತೆಗೆದು ಪಾಕಿಸ್ತಾನಕ್ಕೆ ಕೊಟ್ಟ ಪೂನಂ ಪಾಂಡೆ
ಮುಂಬೈ, ಜೂನ್ 14: ಪಾಕಿಸ್ತಾನದ ಮಾಧ್ಯಮ ಗಿರ್ರನೇ ತಿರುಗುವಂತಹ ತಿರುಗೇಟನ್ನು ಬಾಲಿವುಡ್ ನಟಿ ಪೂನಂ ಪಾಂಡೆ ನೀಡಿದ್ದಾರೆ. ಅದೂ ಎಂತಹ ತಿರುಗೇಟು ಅಂತೀರಾ, ಪಾಕಿಸ್ತಾನ ಕೇಳಿದ ಒಂದು ಟೀ ಕಪ್ ಗೆ, ಪೂನಂ ಎರಡೆರಡು ಕಪ್ ಕೊಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೊಲ್ಟೇಜ್ ವಿಶ್ವಕಪ್ ಕ್ರಿಕೆಟ್ ಪಂದ್ಯ, ಇದೇ ಭಾನುವಾರ (ಜೂ 16) ನಡೆಯಲಿದೆ. ಕ್ರಿಕೆಟ್ ಪಂದ್ಯದ ಪ್ರಮೋಷನ್ ಹೆಸರಿನಲ್ಲಿ ಪಾಕಿಸ್ತಾನದ ಮಿಡಿಯೋ ಒಂದು ಯೋಧ ಅಭಿನಂದನ್ ನನ್ನು ಅಣಕಿಸುವ ಜಾಹೀರಾತು ಪ್ರಸಾರ ಮಾಡುತ್ತಿದೆ.
ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡಾ, ಪಾಕ್ ಮಾಧ್ಯಮದ ಈ ಅಧಿಕ ಪ್ರಸಂಗವನ್ನು ಟೀಕಿಸಿದ್ದರು. ಈಗ, ಬಾಲಿವುಡ್ ನಟಿ ಪೂನಂ ಪಾಂಡೆ ಸರದಿ. ತನ್ನದೇ ಶೈಲಿಯಲ್ಲಿ ಕಚಗುಳಿ ಇಡುವ ಅಮೋಘ ಕಲೆಯನ್ನು ಸಿದ್ದಿಸಿಕೊಂಡಿರುವ ಪೂನಂ, ಈ ಬಾರಿ ತನ್ನ ಎದೆಯೊಳಗಿನಿಂದ ಒಳ ಉಡುಪನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ.

ಇನ್ಸ್ಟಾ ಗ್ರಾಂ ನಲ್ಲಿ ಸುಮಾರು ನಲವತ್ತು ಸೆಕೆಂಡಿನ ವಿಡಿಯೋ ಅಪ್ಲೋಡ್ ಮಾಡಿರುವ ಪೂನಂ, ಮೊದಲು ಅಭಿನಂದನ್ ನಂತೆ ಹೋಲುವ ವ್ಯಕ್ತಿಯನ್ನು ಇಟ್ಟುಕೊಂಡು ವಿಚಾರಣೆ ನಡೆಸುವ, ಕೊನೆಗೆ ಚಹಾ ಕಪ್ ಅನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀಯಾ, ಎಂದು ಹೇಳುವ ಪಾಕ್ ಮಾಧ್ಯಮದ ಜಾಹೀರಾತನ್ನು ಹಾಕಿ, ನಂತರ ಅದಕ್ಕೆ ಪೂನಂ ತಿರುಗೇಟು ನೀಡಿದ್ದಾರೆ.
View this post on InstagramMy Answer to the Pakistani AD. #IndvsPak World Cup 2019.
A post shared by Poonam Pandey (@ipoonampandey) on
ಪಾಕಿಸ್ತಾನದ ಈ ಜಾಹೀರಾತನ್ನು ನಾನು ನಿನ್ನೆ ವಾಟ್ಸಾಪ್ ನಲ್ಲಿ ನೋಡಿದೆ. ನಮ್ಮ ಯೋಧನನ್ನು ನೀವು ಅವಮಾನಿಸಿದ್ದು ಸರಿಯಲ್ಲ. ನಿಮ್ಮ ಈ ಜಾಹೀರಾತಿಗೆ ನನ್ನ ಉತ್ತರ ಇದು ಎಂದು, ಎದೆಯೊಳಗಿನಿಂದ ಒಳ ಉಡುಪನ್ನು ತೆಗೆದು, ತೆಗೆದುಕೊಳ್ಳಿ ಡಬಲ್ ಟೀಕಪ್, ನೀವು ಇದರಲ್ಲಿ ಟೀಯನ್ನೂ ಕುಡಿಯಬಹುದು ಎಂದು ಅಣಕಿಸುತ್ತಾರೆ.
ಪೂನಂ ಪಾಂಡೆ ಈ ಹಾಟ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಪಾಕಿಸ್ತಾನದ ಕಡೆಯಿಂದ ಇದು ಟ್ರೋಲ್ ಆಗುತ್ತಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications