Get Updates
Get notified of breaking news, exclusive insights, and must-see stories!

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭೇಟಿಯಾದ ಶರದ್ ಪವಾರ್

ಮುಂಬೈ, ಜೂನ್ 24: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಅವರ ಮನೆಯಲ್ಲಿ ಭೇಟಿಯಾದರು, ಗುವಾಹಟಿಯಲ್ಲಿ ಶಿವಸೇನೆಯ ಮತ್ತೊಬ್ಬ ಶಾಸಕ ಬಂಡಾಯ ಪಾಳಯಕ್ಕೆ ಸೇರಿದ್ದಾರೆ, ಈಗಾಗಲೇ ಹಿಡಿತ ಸಾಧಿಸಲು ಏಕನಾಥ್ ಶಿಂಧೆ ಸಾಕಷ್ಟು ಸದಸ್ಯರನ್ನು ಹೊಂದಿದ್ದಾರೆ ಎನ್ನಲಾಗಿದೆ.

ಶರದ್ ಪವಾರ್, ಉಪಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯ ಕ್ಯಾಬಿನೆಟ್ ಸಚಿವ ಜಯಂತ್ ಪಾಟೀಲ್ ಮತ್ತು ಪಕ್ಷದ ನಾಯಕ ಪ್ರಫುಲ್ ಪಟೇಲ್ ಅವರು ಉದ್ಧವ್ ಠಾಕ್ರೆ ಅವರನ್ನು ಮುಂಬೈನಲ್ಲಿರುವ ಖಾಸಗಿ ನಿವಾಸ 'ಮಾತೋಶ್ರೀ'ಯಲ್ಲಿ ಸಂಜೆ ಭೇಟಿಯಾದರು.

ಇದಕ್ಕೂ ಮುನ್ನ ಪಕ್ಷದ ಸಭೆಯೊಂದರಲ್ಲಿ ಭಾವುಕರಾದ ಉದ್ಧವ್ ಠಾಕ್ರೆ ಪಕ್ಷದ ಕಾರ್ಯಕರ್ತರಿಗೆ ಬಂಡಾಯ ಶಾಸಕರು ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. "ಬಿಟ್ಟು ಹೋದವರ ಬಗ್ಗೆ ನಾನೇಕೆ ಕೆಟ್ಟ ಭಾವನೆ ಹೊಂದುತ್ತೇನೆ? ಶಿವಸೇನೆ ಮತ್ತು ಠಾಕ್ರೆ ಹೆಸರನ್ನು ಬಳಸದೆ, ನೀವು ಹೇಗೆ ಮುಂದುವರಿಯುತ್ತೀರಿ," ಎಂದು ಠಾಕ್ರೆ ಬಂಡಾಯ ಶಾಸಕರನ್ನು ಗುರಿಯಾಗಿಸಿಕೊಂಡು ಹೇಳಿದ್ದಾರೆ.

ಏಕನಾಥ್ ಶಿಂಧೆ ಬಂಡಾಯದ ವಿರುದ್ಧದ ಹೋರಾಟದಲ್ಲಿ ಇನ್ನೂ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಕೋರಿದೆ. ಒಟ್ಟಾರೆಯಾಗಿ, ಬಿಜೆಪಿ ಆಡಳಿತವಿರುವ ಅಸ್ಸಾಂನ ಹೋಟೆಲ್‌ನಲ್ಲಿ ಅಡಗಿರುವ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಶಿವಸೇನೆ ಮನವಿ ಮಾಡಿದೆ.

50ಕ್ಕೂ ಹೆಚ್ಚು ಶಾಸಕರ ಬೆಂಬಲ

50ಕ್ಕೂ ಹೆಚ್ಚು ಶಾಸಕರ ಬೆಂಬಲ

ಉದ್ಧವ್ ಠಾಕ್ರೆ ವಿರುದ್ಧದ ಬಂಡಾಯದ ಕೇಂದ್ರದಲ್ಲಿರುವ ಏಕನಾಥ್ ಶಿಂಧೆ ಗುವಾಹಟಿಯ ದೇವಸ್ಥಾನಕ್ಕೆ ಭೇಟಿ ನೀಡಲು ಹೋಟೆಲ್‌ನಿಂದ ಹೊರಬಂದಿದ್ದರು. ಈ ಹಿಂದೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಶಿಂಧೆ 50 ಕ್ಕೂ ಹೆಚ್ಚು ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದು, ಅವರಲ್ಲಿ ಸುಮಾರು 40 ಮಂದಿ ಶಿವಸೇನೆ ಪಕ್ಷದ ಶಾಸಕರು ಎಂದು ಹೇಳಿದ್ದಾರೆ.

ಸೇನೆಯ ಶಾಸಕ ದಿಲೀಪ್ ಲಾಂಡೆ ಗುವಾಹಟಿ ಹೋಟೆಲ್‌ನಲ್ಲಿ ಬಂಡಾಯ ಶಾಸಕರ ತಂಡವನ್ನು ಸೇರಿದ್ದಾರೆ. ಇನ್ನೂ ಕೆಲವು ಶಾಸಕರು ಗುವಾಹಟಿ ತಲುಪುವ ಸಾಧ್ಯತೆ ಇರುವುದರಿಂದ ಏಕನಾಥ್ ಶಿಂಧೆ ಬೆಂಬಲಿಗ ಶಾಸಕರ ಸಂಖ್ಯೆ 50 ದಾಟಬಹುದು ಎಂದು ಮೂಲಗಳು ತಿಳಿಸಿವೆ.

ಅನರ್ಹತೆ ತೀರ್ಪು ನೀಡದಂತೆ ಶಾಸಕರ ಒತ್ತಾಯ

ಅನರ್ಹತೆ ತೀರ್ಪು ನೀಡದಂತೆ ಶಾಸಕರ ಒತ್ತಾಯ

ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಯಿಂದ ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರನ್ನು ಪದಚ್ಯುತಗೊಳಿಸುವಂತೆ ಏಕನಾಥ್ ಶಿಂಧೆ ಪಾಳೆಯದ ಭಾಗವಾಗಿರುವ ಇಬ್ಬರು ಸ್ವತಂತ್ರ ಶಾಸಕರು ಕರೆ ನೀಡಿದ್ದಾರೆ. ಇಬ್ಬರು ಶಾಸಕರಾದ ಮಹೇಶ್ ಬಾಲ್ಡಿ ಮತ್ತು ವಿನೋದ್ ಅಗರ್ವಾಲ್ ಅರುಣಾಚಲ ಪ್ರದೇಶದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ ಮತ್ತು ಬಂಡಾಯ ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಯ ಬಗ್ಗೆ ತೀರ್ಪು ನೀಡದಂತೆ ಉಪ ಸ್ಪೀಕರ್ ಅವರನ್ನು ಒತ್ತಾಯಿಸಿದ್ದಾರೆ.

ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲು ಸಿದ್ಧತೆ

ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲು ಸಿದ್ಧತೆ

ಶಾಸಕ ಅಜಯ್ ಚೌಧರಿ ಅವರನ್ನು ರಾಜ್ಯ ವಿಧಾನಸಭೆಯಲ್ಲಿ ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸುವ ಶಿವಸೇನೆಯ ಪ್ರಸ್ತಾವನೆಗೆ ಉಪಸಭಾಪತಿ ಅನುಮೋದನೆ ನೀಡಿದ್ದಾರೆ. ಅನರ್ಹತೆ ಅರ್ಜಿ ಸಲ್ಲಿಸಿರುವ ಬಂಡಾಯ ಶಾಸಕರಿಗೆ ಉಪ ಸ್ಪೀಕರ್ ಇಂದು ನೋಟಿಸ್ ಕಳುಹಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಂಡಾಯ ಶಾಸಕರು ತಮಗೆ ನೋಟಿಸ್ ನೀಡಿದ ನಂತರ ಸುಪ್ರೀಂ ಕೋರ್ಟ್‌ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಏಕನಾಥ್ ಶಿಂಧೆ ಶಿಬಿರವು ಚುನಾವಣಾ ಆಯೋಗಕ್ಕೆ ಪಕ್ಷ ಮತ್ತು ಚಿಹ್ನೆಗಾಗಿ ಹಕ್ಕು ಸಲ್ಲಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಶರದ್ ಪವಾರ್‍ ಗೆ ಬೆದರಿಕೆ ಹಾಕಿದ್ರಾ ಕೇಂದ್ರ ಸಚಿವ?

ಶರದ್ ಪವಾರ್‍ ಗೆ ಬೆದರಿಕೆ ಹಾಕಿದ್ರಾ ಕೇಂದ್ರ ಸಚಿವ?

ಶುಕ್ರವಾರ ಮುಂಜಾನೆ, ಮಹಾರಾಷ್ಟ್ರ ಮೈತ್ರಿಕೂಟದ ನಾಯಕ ಶರದ್ ಪವಾರ್ ಅವರಿಗೆ ಕೇಂದ್ರ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವುತ್ ಆರೋಪಿಸಿದ್ದಾರೆ. "ಅವನು ಮಹಾರಾಷ್ಟ್ರದ ಮಗ. ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಮೋದಿ, ಅಮಿತ್ ಶಾ, ನೀವು ಕೇಳಿದ್ದೀರಾ? ನಿಮ್ಮ ಸಚಿವರು ಶರದ್ ಪವಾರ್‌ಗೆ ಬೆದರಿಕೆ ಹಾಕುತ್ತಿದ್ದಾರೆ, ನೀವು ಅಂತಹ ಬೆದರಿಕೆಗಳನ್ನು ಬೆಂಬಲಿಸುತ್ತೀರಾ? ಮಹಾರಾಷ್ಟ್ರ ನಿಮ್ಮಿಂದ ಉತ್ತರ ಬಯಸುತ್ತದೆ," ಎಂದು ರಾವುತ್ ಹೇಳಿದ್ದಾರೆ.

ತಮ್ಮ ಬಣವೇ ನಿಜವಾದ ಶಿವಸೇನೆ ಎಂದು ಹೇಳಿಕೊಂಡಿರುವ ಶಿಂಧೆ 37 ಶಾಸಕರ ಸಹಿ ಹೊಂದಿರುವ ಪತ್ರವನ್ನು ರಾಜ್ಯ ವಿಧಾನಸಭೆಯ ಉಪ ಸ್ಪೀಕರ್, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮತ್ತು ಶಾಸಕಾಂಗ ಕಾರ್ಯದರ್ಶಿ ಅವರಿಗೆ ಶಾಸಕಾಂಗ ಪಕ್ಷವಾಗಿ ನೇಮಕ ಮಾಡುವ ಬಗ್ಗೆ ತಿಳಿಸಲು ಕಳುಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+