ಅಮಾನವೀಯ: ಮುಸ್ಲಿಂ ಖೈದಿಗೆ ಓಂ ಚಿಹ್ನೆ ಬರೆ ಹಾಕಿದ ಜೈಲು ಅಧಿಕಾರಿ
ಮುಂಬೈ, ಏಪ್ರಿಲ್ 20: ಉತ್ತಮ ವಾತಾವರಣಕ್ಕೆ, ಖೈದಿಗಳ ಮನಃಪರಿವರ್ತನೆಗೆ ಒಂದು ಕಾಲದಲ್ಲಿ ಹೆಸರಾಗಿದ್ದ ತಿಹಾರ್ ಜೈಲಿನಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದೆ. ಅದೂ ಅಲ್ಲಿನ ಪೊಲೀಸ್ ಅಧಿಕಾರಿಯಿಂದಲೇ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜೈಲು ಅಧಿಕಾರಿಯೊಬ್ಬ ಮುಸ್ಲಿಂ ಖೈದಿಯೊಬ್ಬರಿಗೆ ಮನಸೋಇಚ್ಛೆ ಥಳಿಸಿ ಆ ನಂತರ ಆತನ ಬೆನ್ನಿನ ಮೇಲೆ ಓಂ ಚಿಹ್ನೆಯ ಬರೆ ಹಾಕಿದ್ದಾರೆ.
ಮುಸ್ಲಿಂ ಖೈದಿ ಶಬ್ಬೀರ್ ಅಲಿಯಾಸ್ ನಬೀರ್ ಅವರ ಬೆನ್ನಿನ ಮೇಲೆ ಓಂ ಚಹ್ನೆಯ ಮುದ್ರೆ ಒತ್ತಲಾಗಿದೆ. ಅವರ ಕುಟುಂಬದವರು ಜೈಲು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದು ತನಿಖೆ ಪ್ರಗತಿಯಲ್ಲಿದೆ.

ಶಬ್ಬೀರ್ ಏಪ್ರಿಲ್ 12 ರಂದು ತಮ್ಮ ಬ್ಯಾರಕ್ ನಲ್ಲಿ ಇಂಡಕ್ಷನ್ ಒಲೆ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅದನ್ನು ಬದಲಾಯಿಸ ಬೇಕು ಎಂದು ಜೈಲಿನ ಸೂಪರ್ಇಂಡೆಂಟ್ ಗೆ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಜೈಲು ಅಧಿಕಾರಿಗಳು ಶಬ್ಬೀರ್ನನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಚೆನ್ನಾಗಿ ಬಡಿದು ಆತನ ಬೆನ್ನಿನ ಮೇಲೆ ಓಂ ಎಂದು ಚಿಹ್ನೆ ಬರೆದಿದ್ದಾರೆ. ಅಲ್ಲದೆ ಎರಡು ದಿನ ಊಟ ನೀಡದೇ ಉಪವಾಸ ಶಿಕ್ಷೆ ನೀಡಿದ್ದಾರೆ.
ಶಬ್ಬೀರ್ನ ಕುಟುಂಬ ಸದಸ್ಯರು ಆತನನ್ನು ಕಾಣಲು ಬಂದಾಗ ಅವರಿಗೆ ವಿಷಯ ತಿಳಿದು, ನಂತರ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ತಮ್ಮ ಮಗನ ಜೀವಕ್ಕೆ ಅಪಾಯವಿದೆ ಎಂದು ದೂರು ನೀಡಿದ್ದಾರೆ.
ಪ್ರಸ್ತುತ ಶಬ್ಬೀರ್ನನ್ನು ಬೇರೆ ಜೈಲಿಗೆ ವರ್ಗಾಯಿಸಲಾಗಿದೆ. ಪ್ರಕರಣದ ಬಗ್ಗೆ ಶೀಘ್ರ ತನಿಖೆಗೆ ಆದೇಶಿಸಲಾಗಿದೆ. ಶಬ್ಬೀರ್ ನಿಯಮಿತ ಅಪರಾಧಿ ಮನೋಭಾವದನಾಗಿದ್ದು, ಆತನು ಜೈಲಿನಲ್ಲಿ ಸಹ ಅಪರಾಧ ಚಟುವಟಿಕೆ ಮಾಡುತ್ತಿದ್ದ ಎಂದು ತಿಹಾರ್ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications