ಟಿಆರ್ಪಿ ನಕಲಿ ಜಾಲ: ರಿಪಬ್ಲಿಕ್ ಟಿವಿ ಸೇರಿ 3 ಚಾನೆಲ್ಗಳ ವಿಚಾರಣೆ
ಮುಂಬೈ, ಅಕ್ಟೋಬರ್ 08: ನಕಲಿ ಟಿಆರ್ಪಿ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಹಾಗೂ ಇನ್ನೆರೆಡು ಮರಾಠಿ ವಾಹಿನಿಗಳ ವಿರುದ್ಧ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮುಂಬೈನಲ್ಲಿ ಸ್ಥಾಪಿಸಿರುವ 2 ಸಾವಿರ ಟಿಆರ್ಪಿ ನಿಯಂತ್ರಕ ಯಂತ್ರಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪದ ಮೇಲೆ ಈ ದೂರು ನೀಡಲಾಗಿದೆ.
ಹಂಸ್ ಏಜೆನ್ಸಿಯು ಬಾರ್ಕ್ ನೀಡುವಂತಹ ಟಿಆರ್ಪಿ ಮೇಲೆ ಸಂಶಯವನ್ನು ವ್ಯಕ್ತಪಡಿಸಿ ದೂರನ್ನು ದಾಖಲಿಸಿತ್ತು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮರಾಠಿ ಎರಡು ವಾಹಿನಿಗಳ ಮುಖ್ಯಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.

ರಿಪಬ್ಲಿಕ್ ವಾಹಿನಿ ವಿರುದ್ಧ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.ಇತ್ತೀಚೆಗಷ್ಟೇ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಹಾಗೂ ಮುಂಬೈ ಪೊಲೀಸರ ನಡುವೆ ಶೀತಲ ಸಮರಗಳು ನಡೆದಿದ್ದವು. ಇದರ ಮುಂದಿನ ಭಾಗವಾಗಿ ಈಗ ಮುಂಬೈ ಪೊಲೀಸರು ರಿಪಬ್ಲಿಕ್ ವಾಹಿನಿ ವಿರುದ್ಧ ತನಿಖೆಯನ್ನು ಮುಂದುವರೆಸಿದ್ದಾರೆ.
ಈಗಾಗೇ ರಿಪಬ್ಲಿಕ್ ಚಾನೆಲ್ನ ಬ್ಯಾಂಕ್ ಖಾತೆಗಳು ಹಾಗೂ ವ್ಯವಹಾರಗಳ ಮೇಲೆ ಮುಂಬೈ ಪೊಲೀಸರು ಕಣ್ಣಿರಿಸಿದ್ದು, ಅಗತ್ಯ ಬಿದ್ದರೆಎ ರಿಪಬ್ಲಿಕ್ ಟಿವಿ ಸಿಬ್ಬಂದಿ , ನಿರ್ದೇಶಕರು, ಹೂಡಿಕೆದಾರರನ್ನು ಕರೆದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಮುಂಬೈ ಪೊಲೀಸ್ ಬಾರ್ಕ್ ಯಂತ್ರಗಳನ್ನು ಅಳವಡಿಸಿರುವವರ ಮನೆಯಲ್ಲಿ ನಿರ್ದಿಷ್ಟ ಒಂದು ಚಾನೆಲ್ನ್ನು ನಿರಂತರವಾಗಿ ಹಾಕಿಡುತ್ತಿರುವುಉ ಗಮನಕ್ಕೆ ಬಂದಿದೆ. ಮನೆಯ ಸದಸ್ಯರು ಮನೆಯ ಒಳಗಿರಲಿ ಅಥವಾ ಹೊರಗಿರಲಿ ಟಿವಿಯನ್ನು ನಿರಂತರವಾಗಿ ಹಾಕಿಡುವುದು ಬೆಳಕಿಗೆ ಬಂದಿದೆ.
ಹಾಗೆಯೇ ಅನಕ್ಷರಸ್ಥರ ಮನೆಯಲ್ಲೂ ಇಂಗ್ಲಿಷ್ ಸುದ್ದಿವಾಹಿನಿಗಳನ್ನು ನಿರಂತರವಾಗಿ ಹಾಕಿಡುತ್ತಿರುವುದು ತಿಳಿದಿದೆ. ಹೀಗಾಗಿ ಏಜೆಂಟ್ರಿಂದ ಹಣಬರುತ್ತಿತ್ತು ಎಂಬುದನ್ನು ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಟೆಲಿವಿಷನ್ ಲೋಕದಲ್ಲಿ ಸಾವಿರಾರು ಕೋಟಿ ಜಾಹೀರಾತು ಬರುತ್ತದೆ.
ಬಾರ್ಕ್ ಟಿಆರ್ಪಿ ರೇಟಿಂಗ್ ಆಧರಿಸಿಯೇ ಜಾಹೀರಾತುದಾರರು ವಾಹಿನಿಗಳಿಗೆ ಹಣ ಹಾಕುತ್ತಾರೆ. ಈ ಅಕ್ರಮದಲ್ಲಿ ಜಾಹೀರಾತುದಾರರು ಭಾಗಿಯೇ ಅಥವಾ ಅವರು ಸಂತ್ರಸ್ತರೇ ಎಂದು ತಿಳಿದುಕೊಳ್ಳಲು ನೋಟಿಸ್ ನೀಡಲಾಗುತ್ತಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications