ಮುಂಬೈನ ಜಿಎಸ್ ಬಿ ಸಮಾಜದ 'ರಿಚ್' ಗಣೇಶ
ಮುಂಬೈ,ಆ.28: ಬೆಲೆಯೇರಿಕೆ, ಆರ್ಥಿಕ ಕುಸಿತದ ಬಿಸಿ ಗಣಪತಿಗೆ ಮಾತ್ರ ತಟ್ಟಿದಂತಿಲ್ಲ. ಇದಕ್ಕೆ ಪುರಾವೆಯೆಂಬಂತೆ ಈ ವರ್ಷ ಮುಂಬೈ ಕಿಂಗ್ ಸರ್ಕಲ್ಸ್ನ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸೇವಾ ಮಂಡಲದ ಗಣೇಶ ಚಿನ್ನ-ಬೆಳ್ಳಿಯಿಂದ ತಯಾರಿಸಿದ 96 ಲಕ್ಷ ರೂ. ಮೌಲ್ಯದ ಬೃಹತ್ ಹಾರದೊಂದಿಗೆ ಕಂಗೊಳಿಸಲಿದ್ದಾನೆ.
ವಿಶೇಷವೆಂದರೆ ಇದರ ತಯಾರಿ ಕೆಲಸ ಉಡುಪಿಯ ಸ್ವರ್ಣಾ ಜ್ಯುವೆಲ್ಲರಿಯಲ್ಲಿ ನಡೆಯಿತು.. ಸುಮಾರು 7.75 ಕೋಟಿ ರು ಪ್ರಾಯೋಜಕತ್ವ ಹಾಗೂ 259 ಕೋಟಿ ರು ವಿಮೆ ಮಾಡಿಸಿಕೊಂಡ ಈ ಮಂಡಲ ದಾಖಲೆ ಬರೆದಿದೆ.
2.5 ಕೆ.ಜಿ. ಚಿನ್ನ ಮತ್ತು 12 ಕೆ.ಜಿ. ಬೆಳ್ಳಿ ಬಳಸಿ ಹಾರ ನಿರ್ಮಿಸಲಾಗುತ್ತಿದೆ. ಚಿನ್ನಕ್ಕಾಗಿ 75 ಲಕ್ಷ ರೂ. ಮತ್ತು ಬೆಳ್ಳಿಗಾಗಿ 7 ಲಕ್ಷ ರೂ.ವೆಚ್ಚವಾಗಿದ್ದು ಹಾರದ ತಯಾರಿ ವೆಚ್ಚವೂ ಸೇರಿ 96 ಲಕ್ಷ ರೂ. ತನಕ ತಲುಪಲಿದೆ. ವೈಜಯಂತಿ ಮಾಲಾ ಎಂಬ ಹೆಸರಿನಲ್ಲಿ ಕರೆಯುವ ಹಾರ 14 ಅಡಿ ಉದ್ದವಿದೆ. ಈ ಹಾರದಲ್ಲಿ 16 ಸಣ್ಣಗಾತ್ರದ ಮತ್ತು 16 ದೊಡ್ಡ ಗಾತ್ರದ ಗಣಪತಿ ಪಡಿಯಚ್ಚುಗಳನ್ನು ಕೆತ್ತಲಾಗಿದೆ ಎಂದು ಜಿಎಸ್ ಬಿ ಸೇವಾ ಮಂಡಲದ ಪ್ರತಿನಿಧಿ ಸತೀಶ್ ನಾಯಕ್ ಹೇಳಿದ್ದಾರೆ. [ಬಣ್ಣದ ಗಣಪತಿಗೆ ಬೈ, ಮಣ್ಣಿನ ಗಣೇಶನಿಗೆ ಜೈ]
ಮುಂಬೈ ಜಿಎಸ್ಬಿ ಸೇವಾ ಮಂಡಲದ ಗಣಪತಿ ಜಗತ್ತಿನಲ್ಲೇ ಶ್ರೀಮಂತ ಎಂದು ಕೀರ್ತಿ ವಿಖ್ಯಾತನಾಗಿದ್ದು, ಸುಮಾರು 80 ಕೆ.ಜಿ.ಗೂ ಅಧಿಕ ಚಿನ್ನಾಭರಣಗಳಿಂದ ಗಣೇಶೋತ್ಸವ ಅವಧಿಯಲ್ಲಿ ಅಲಂಕೃತನಾಗಿ ಕಂಗೊಳಿಸುತ್ತಾನೆ.

ಆ.29ರಂದು ಪ್ರಾರಂಭವಾಗುವ ಗಣೇಶೋತ್ಸವ ಅವಧಿಯಲ್ಲಿ ಈ ಹಾರವನ್ನು ಗಣೇಶನಿಗೆ ಹಾಕಲಾಗುವುದು. ಪ್ರಸ್ತುತ ಉಡುಪಿಯ ಸ್ವರ್ಣಾ ಜ್ಯುವೆಲ್ಲರಿಯಲ್ಲಿ ಇದರ ಕೆಲಸ ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲೇ ಮಂಡಲಕ್ಕೆ ಬರಲಿದೆ. ಈ ಆಭರಣವನ್ನು, ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಭಕ್ತರೊಬ್ಬರು ಮಂಡಲದ ವಜ್ರ ಮಹೋತ್ಸವದಂಗವಾಗಿ ದೇಣಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಭಕ್ತರಿಗೂ ವಿಮೆ: ಲಕ್ಷಾಂತರ ಭಕ್ತರು ಭೇಟಿ ನೀಡುವ ಜಿಎಸ್ಬಿ ಸೇವಾ ಮಂಡಲದ ಗಣೇಶೋತ್ಸವ 5 ದಿನಗಳ ಕಾಲ ನಡೆಯುತ್ತಿದೆ. ಈ ಅವಧಿಯಲ್ಲಿ 6-7 ಕೋಟಿರೂ.ಗಳಿಗೂ ಅಧಿಕ ಮೊತ್ತದ ನಗದು, ಚಿನ್ನ ಮತ್ತು ಬೆಳ್ಳಿ ಹರಕೆಯ ರೂಪದಲ್ಲಿ ಮಂಡಲಕ್ಕೆ ಬರುತ್ತದೆ. ಸುಮಾರು 100 ಸಿಸಿಟಿವಿ ಕೆಮರಾ, 600 ಕ್ಕೂ ಅಧಿಕ ಸೆಕ್ಯುರಿಟಿ ಗಾರ್ಡ್, 6,000 ಪೊಲೀಸ್ ಪಹರೆ ನಡುವೆ ಗಣಪತಿ ಬಪ್ಪನನ್ನು ಜನ ಕಣ್ತುಂಬಿಸಿಕೊಳ್ಳಲಿದ್ದಾರೆ. ಸುಮಾರು 1.5 ಕೋಟಿ ಜನ 10 ದಿನಗಳ ಗಣೇಶ ಉತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications