ಮುಂಬೈನ ಜಿಎಸ್ ಬಿ ಸಮಾಜದ 'ರಿಚ್' ಗಣೇಶ
ಮುಂಬೈ,ಆ.28: ಬೆಲೆಯೇರಿಕೆ, ಆರ್ಥಿಕ ಕುಸಿತದ ಬಿಸಿ ಗಣಪತಿಗೆ ಮಾತ್ರ ತಟ್ಟಿದಂತಿಲ್ಲ. ಇದಕ್ಕೆ ಪುರಾವೆಯೆಂಬಂತೆ ಈ ವರ್ಷ ಮುಂಬೈ ಕಿಂಗ್ ಸರ್ಕಲ್ಸ್ನ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸೇವಾ ಮಂಡಲದ ಗಣೇಶ ಚಿನ್ನ-ಬೆಳ್ಳಿಯಿಂದ ತಯಾರಿಸಿದ 96 ಲಕ್ಷ ರೂ. ಮೌಲ್ಯದ ಬೃಹತ್ ಹಾರದೊಂದಿಗೆ ಕಂಗೊಳಿಸಲಿದ್ದಾನೆ.
ವಿಶೇಷವೆಂದರೆ ಇದರ ತಯಾರಿ ಕೆಲಸ ಉಡುಪಿಯ ಸ್ವರ್ಣಾ ಜ್ಯುವೆಲ್ಲರಿಯಲ್ಲಿ ನಡೆಯಿತು.. ಸುಮಾರು 7.75 ಕೋಟಿ ರು ಪ್ರಾಯೋಜಕತ್ವ ಹಾಗೂ 259 ಕೋಟಿ ರು ವಿಮೆ ಮಾಡಿಸಿಕೊಂಡ ಈ ಮಂಡಲ ದಾಖಲೆ ಬರೆದಿದೆ.
2.5 ಕೆ.ಜಿ. ಚಿನ್ನ ಮತ್ತು 12 ಕೆ.ಜಿ. ಬೆಳ್ಳಿ ಬಳಸಿ ಹಾರ ನಿರ್ಮಿಸಲಾಗುತ್ತಿದೆ. ಚಿನ್ನಕ್ಕಾಗಿ 75 ಲಕ್ಷ ರೂ. ಮತ್ತು ಬೆಳ್ಳಿಗಾಗಿ 7 ಲಕ್ಷ ರೂ.ವೆಚ್ಚವಾಗಿದ್ದು ಹಾರದ ತಯಾರಿ ವೆಚ್ಚವೂ ಸೇರಿ 96 ಲಕ್ಷ ರೂ. ತನಕ ತಲುಪಲಿದೆ. ವೈಜಯಂತಿ ಮಾಲಾ ಎಂಬ ಹೆಸರಿನಲ್ಲಿ ಕರೆಯುವ ಹಾರ 14 ಅಡಿ ಉದ್ದವಿದೆ. ಈ ಹಾರದಲ್ಲಿ 16 ಸಣ್ಣಗಾತ್ರದ ಮತ್ತು 16 ದೊಡ್ಡ ಗಾತ್ರದ ಗಣಪತಿ ಪಡಿಯಚ್ಚುಗಳನ್ನು ಕೆತ್ತಲಾಗಿದೆ ಎಂದು ಜಿಎಸ್ ಬಿ ಸೇವಾ ಮಂಡಲದ ಪ್ರತಿನಿಧಿ ಸತೀಶ್ ನಾಯಕ್ ಹೇಳಿದ್ದಾರೆ. [ಬಣ್ಣದ ಗಣಪತಿಗೆ ಬೈ, ಮಣ್ಣಿನ ಗಣೇಶನಿಗೆ ಜೈ]
ಮುಂಬೈ ಜಿಎಸ್ಬಿ ಸೇವಾ ಮಂಡಲದ ಗಣಪತಿ ಜಗತ್ತಿನಲ್ಲೇ ಶ್ರೀಮಂತ ಎಂದು ಕೀರ್ತಿ ವಿಖ್ಯಾತನಾಗಿದ್ದು, ಸುಮಾರು 80 ಕೆ.ಜಿ.ಗೂ ಅಧಿಕ ಚಿನ್ನಾಭರಣಗಳಿಂದ ಗಣೇಶೋತ್ಸವ ಅವಧಿಯಲ್ಲಿ ಅಲಂಕೃತನಾಗಿ ಕಂಗೊಳಿಸುತ್ತಾನೆ.

ಆ.29ರಂದು ಪ್ರಾರಂಭವಾಗುವ ಗಣೇಶೋತ್ಸವ ಅವಧಿಯಲ್ಲಿ ಈ ಹಾರವನ್ನು ಗಣೇಶನಿಗೆ ಹಾಕಲಾಗುವುದು. ಪ್ರಸ್ತುತ ಉಡುಪಿಯ ಸ್ವರ್ಣಾ ಜ್ಯುವೆಲ್ಲರಿಯಲ್ಲಿ ಇದರ ಕೆಲಸ ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲೇ ಮಂಡಲಕ್ಕೆ ಬರಲಿದೆ. ಈ ಆಭರಣವನ್ನು, ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಭಕ್ತರೊಬ್ಬರು ಮಂಡಲದ ವಜ್ರ ಮಹೋತ್ಸವದಂಗವಾಗಿ ದೇಣಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಭಕ್ತರಿಗೂ ವಿಮೆ: ಲಕ್ಷಾಂತರ ಭಕ್ತರು ಭೇಟಿ ನೀಡುವ ಜಿಎಸ್ಬಿ ಸೇವಾ ಮಂಡಲದ ಗಣೇಶೋತ್ಸವ 5 ದಿನಗಳ ಕಾಲ ನಡೆಯುತ್ತಿದೆ. ಈ ಅವಧಿಯಲ್ಲಿ 6-7 ಕೋಟಿರೂ.ಗಳಿಗೂ ಅಧಿಕ ಮೊತ್ತದ ನಗದು, ಚಿನ್ನ ಮತ್ತು ಬೆಳ್ಳಿ ಹರಕೆಯ ರೂಪದಲ್ಲಿ ಮಂಡಲಕ್ಕೆ ಬರುತ್ತದೆ. ಸುಮಾರು 100 ಸಿಸಿಟಿವಿ ಕೆಮರಾ, 600 ಕ್ಕೂ ಅಧಿಕ ಸೆಕ್ಯುರಿಟಿ ಗಾರ್ಡ್, 6,000 ಪೊಲೀಸ್ ಪಹರೆ ನಡುವೆ ಗಣಪತಿ ಬಪ್ಪನನ್ನು ಜನ ಕಣ್ತುಂಬಿಸಿಕೊಳ್ಳಲಿದ್ದಾರೆ. ಸುಮಾರು 1.5 ಕೋಟಿ ಜನ 10 ದಿನಗಳ ಗಣೇಶ ಉತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications