ಸೈಫೀನಾ ಪುತ್ರ 'ತೈಮೂರ್' ಅಲಿ ಖಾನ್ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿ
ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಮಗುವಿಗೆ ತೈಮೂರ್ ಅಲಿ ಖಾನ್ ಪಟೌಡಿ ಎಂದು ಹೆಸರಿಟ್ಟಿದ್ದು ತಿಳಿದಿರಬಹುದು. ತೈಮೂರ್ ಎಂಬ ಹೆಸರು ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಹಿಡಿಶಾಪ ಹಾಕಲಾಗುತ್ತಿದೆ.
ಮುಂಬೈ, ಡಿಸೆಂಬರ್ 21: ಹಿಂದಿ ಚಿತ್ರರಂಗದ ಜನಪ್ರಿಯ ಜೋಡಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಗೆ ಮಗುವಾಗಿದ್ದು, ಮದುವಿಗೆ ತೈಮೂರ್ ಅಲಿ ಖಾನ್ ಪಟೌಡಿ ಎಂದು ಹೆಸರಿಟ್ಟಿದ್ದು ತಿಳಿದಿರಬಹುದು. ಈಗ ತೈಮೂರ್ ಎಂಬ ಹೆಸರು ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಹಿಡಿಶಾಪ ಹಾಕಲಾಗುತ್ತಿದೆ.
ದಕ್ಷಿಣ ಮುಂಬೈನ ಬ್ರೀಚ್ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ ಕರೀನಾ ಅವರು, ಅಭಿಮಾನಿಗಳು, ಮಾಧ್ಯಮ ಮಿತ್ರರಿಗೆ ಥ್ಯಾಂಕ್ಸ್ ಎಂದಿದ್ದಾರೆ. [ಘರ್ ವಾಪಸಿ, ಲವ್ ಜಿಹಾದ್, ಕರೀನಾ ಕಪೂರ್ ಚಿತ್ರ :ಸೈಫ್ ಗರಂ]
ಜತೆಗೆ ತೈಮೂರ್ ಟ್ರೆಂಡಿಂಗ್ ನಲ್ಲಿದ್ದು, ಸ್ಟಾರ್ ದಂಪತಿಯ ಪುತ್ರನಾಗಿ ಅಷ್ಟೇ ಅಲ್ಲ, ಹತ್ಯಾಕಾಂಡ ಮಾಡಿದ ಮಂಗೋಲಿಯಾದ ದೊರೆ ತೈಮೂರ್ ಹೆಸರಿಟ್ಟುಕೊಂಡ ತಪ್ಪಿಗೆ ಸಾರ್ವಜನಿಕರಿಂದ ಹಿಡಿಶಾಪ ಹಾಕಿಸಿಕೊಂಡಿದ್ದಾನೆ.
ಸೈಫ್ ಅಲಿ ಖಾನ್ ಅವರಿಗೆ ಮಾಜಿ ಪತ್ನಿ ಅಮೃತಾ ಸಿಂಗ್ನಿಂದ ಸಾರಾ ಹಾಗೂ ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದಾರೆ. ಈಗ ಕರೀನಾರಿಂದ ಗಂಡು ಮಗು ಪಡೆದುಕೊಂಡಿದ್ದಾರೆ. ಪಟೌಡಿ, ಠಾಗೋರ್ ಹಾಗೂ ಕಪೂರ್ ಕುಟುಂಬಗಳ ಸಮ್ಮಿಲನದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.

ಹಿಂದುತ್ವ ಸಂಘಟನೆಗಳು ಆಕ್ಷೇಪ
ಈ ಅಂತರ್ ಧರ್ಮೀಯ ಜೋಡಿಯ ಮಗುವಿಗೆ ತೈಮೂರ್ ಎಂದು ಹೆಸರಿಸಿರುವುದಕ್ಕೆ ಹಿಂದುತ್ವ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.ಕೆಲ ಮುಸ್ಲಿಮರು ಕೂಡಾ ತೈಮೂರ್ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
|
ನರಹಂತಕ ತೈಮೂರ್ ಹೆಸರಿಟ್ಟಿದ್ದೇಕೆ?
ದಿಲ್ಲಿಯಲ್ಲಿ ಒಂದೇ ದಿನ 1,00,000 ಮಂದಿ ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ತೈಮೂರ್ ಹೆಸರನ್ನು ಕರೀನಾ ಪುತ್ರನಿಗೆ ಇಟ್ಟಿರುವುದು ದುರಂತ.
|
ಯುರೋಪಿಯನ್ನರು ಹಿಟ್ಲರ್ ಹೆಸರಿಟ್ಟಂತೆ
ಕರೀನಾ ಹಾಗೂ ಸೈಫ್ ಅಲಿ ಖಾನ್ ಅವರು ತಮ್ಮ ಮಗುವಿಗೆ ತೈಮೂರು ಹೆಸರಿಡುವುದು, ಯುರೋಪಿಯನ್ನರು ತಮ್ಮ ಮಕ್ಕಳಿಗೆ ಹಿಟ್ಲರ್ ಹೆಸರಿಟ್ಟಂತೆ ಆಗಿದೆ.
|
ನವಜಾತ ಶಿಶುವಿಗೆ ಹಿಡಿಶಾಪ ಹಾಕಿದ್ದಾರೆ
ನವಜಾತ ಶಿಶುವಿಗೆ ಹಿಡಿಶಾಪ ಹಾಕಿದ್ದಾರೆ, ಕೆಲವರು ಕ್ಯಾನ್ಸರ್ ಬರಲಿ ಎಂದಿದ್ದಾರೆ. ಕೆಲವರು ಮತ್ತೊಬ್ಬ ಭಯೋತ್ಪಾದಕ ಹುಟ್ಟಿದ ಎಂದಿದ್ದಾರೆ, ಹೆಸರಿನಿಂದ ಏನೆಲ್ಲ ಅನರ್ಥವಾಗುತ್ತಿದೆ. ಇದು ಸಂಘ ಪರಿವಾರದವರ ಕುಮ್ಮಕ್ಕು.
|
ತೈಮೂರ್ ಗೆ ಸಾವು ಬರಲಿ
ತೈಮೂರ್ ಗೆ ಸಾವು ಬರಲಿ ಎಂದು ಶಾಪ ಹಾಕಿದ ಸುನಿಲ್ ಎಂಬವರ ಟ್ವೀಟ್
|
ಹಿಂದೂಗಳ ಹಂತಕ ತೈಮೂರ್ ಸಾಯಲಿ
ಹಿಂದೂಗಳ ಹಂತಕ ತೈಮೂರ್ ಸಾಯಲಿ ಎಂದು ಬಯಸಿದ ನಿಶಾ ಸಿಂಗ್.
|
ತೈಮೂರ್ ಸಾವರ್ತಿಕ ಹೆಸರೇ?
ತೈಮೂರ್ ಸಾವರ್ತಿಕ ಹೆಸರೇ? ಅಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಖುಸ್ರೋ, ಬುಲ್ಲಿ, ವಾರೀಸ್ ಎಂಬ ಹೆಸರು ಬಳಕೆಯಾಗಿದ್ದು ಯಾವಾಗ, ತೈಮೂರ್ ಬಳಕೆ ಏಕೆ?
|
ತೈಮೂರ್ ದಾಳಿ ನಡೆಸಿದ್ದರ ಬಗ್ಗೆ ಸತ್ಯಾಸತ್ಯತೆ
ತೈಮೂರ್ ದಾಳಿ ನಡೆಸಿದ್ದರ ಬಗ್ಗೆ ಸತ್ಯಾಸತ್ಯತೆ, ಎಲ್ಲಿ ದಾಳಿ ನಡೆಸಲಾಯಿತು, ಹಿಂದೂಗಳನ್ನು ಗುರಿಯಾಗಿಸಿದ್ದು ಏಕೆ? ತೈಮೂರ್ ಹೆಸರಿನ ಬಗ್ಗೆ ಚರ್ಚೆ ಜಾರಿಯಲ್ಲಿದೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications