ಬಾಂಬೆ ಐಐಟಿ ಆಸ್ಥಾಗೆ 2 ಕೋಟಿ ರು ಸಂಬಳ ಆಫರ್
ಜೈಪುರ, ಡಿ.10: ಐಐಟಿ ಬಾಂಬೆ ವಿದ್ಯಾರ್ಥಿನಿಯೊಬ್ಬಳಿಗೆ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಸುಮಾರು 2 ಕೋಟಿ ರು ಸಂಬಳ ಆಫರ್ ನೀಡಿದೆ.
ಮುಂಬೈನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಓದುತ್ತಿರುವ 20 ವರ್ಷದ ವಿದ್ಯಾರ್ಥಿನಿ ಆಸ್ಥಾ ಅಗರ್ವಾಲ್ ಗೆ ಈ ಭಾರಿ ಮೊತ್ತದ ಉದ್ಯೋಗ ಅವಕಾಶ ಸಿಕ್ಕಿದೆ.
ಕಂಪ್ಯೂಟರ್ ಸೈನ್ಸ್ ವಿಭಾಗದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ಆಸ್ಥಾ ಅಗರ್ವಾಲ್ ಗೆ ಫೇಸ್ಬುಕ್ ನಿಂದ 2 ಕೋಟಿ ಭತ್ಯೆ ಮತ್ತು ಉದ್ಯೋಗದ ಆಫರ್ ಬಂದಿರುವುದನ್ನು ಐಐಟಿ ಬಾಂಬೆ ದೃಢಪಡಿಸಿದೆ.
ವಿದ್ಯಾರ್ಥಿನಿ ಆಸ್ಥಾ ಅಗರ್ವಾಲ್ ಅವರು ಮೂರನೇ ವರ್ಷದ ಪದವಿ ವ್ಯಾಸಂಗದ ವೇಳೆ ಅವರು ಕ್ಯಾಲಿಫೋರ್ನಿಯಾದಲ್ಲಿರುವ ಫೇಸ್ಬುಕ್ ಪ್ರಧಾನ ಕಚೇರಿಯಲ್ಲಿ 2 ತಿಂಗಳ ತರಬೇತಿ ಪಡೆದುಕೊಂಡಿದ್ದರು. ಕಳೆದ ಮೇ ಮತ್ತು ಜೂನ್ ತಿಂಗಳಿನಲ್ಲಿ ಆಸ್ಥಾ ಅಗರ್ವಾಲ್ ಅವರು ತರಬೇತಿ ಪಡೆದಿದ್ದು, ಈ ಸಂದರ್ಭದಲ್ಲಿನ ಅವರ ಕಠಿಣ ಪರಿಶ್ರಮವನ್ನು ಗುರುತಿಸಿರುವ ಫೇಸ್ಬುಕ್ ಅವರಿಗೆ ಉದ್ಯೋಗದ ಆಫರ್ ನೀಡಿದೆ ಎಂದು ಐಐಟಿ ಹೇಳಿದೆ.

8ನೇ ಸೆಮಿಸ್ಟರ್ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಉದ್ಯೋಗಕ್ಕೆ ಸೇರಿಕೊಳ್ಳುತ್ತೇನೆ. ಫೇಸ್ ಬುಕ್ ಆಫರ್ ನಿಂದ ತುಂಬಾ ಖುಷಿಯಾಗಿದೆ ಎಂದು ಜೈಪುರ ಮೂಲದ ಐಐಟಿ ಬಿ ವಿದ್ಯಾರ್ಥಿನಿ ಆಸ್ಥಾ ಪ್ರತಿಕ್ರಿಯಿಸಿದ್ದಾಳೆ.
ಸದ್ಯ ಜೈಪುರದ ನಿವಾಸದಲ್ಲಿ ನೆಲೆಸಿರುವ ಆಸ್ಥಾ ಅಗರ್ವಾಲ್ ಅವರ ಪರೀಕ್ಷೆಗಳು ಮುಂದಿನ ವರ್ಷದ ಅಕ್ಟೋಬರ್ನಲ್ಲಿ ಪೂರ್ಣಗೊಳ್ಳಲಿದ್ದು, ಅದೇ ತಿಂಗಳಿನಲ್ಲಿ ಉದ್ಯೋಗಕ್ಕೆ ಸೇರುವುದಾಗಿ ಅವರು ಹೇಳಿದ್ದಾರೆ.
ಆಸ್ಥಾ ಅಗರ್ವಾಲ್ ಅವರ ತಂದೆ ಅಶೋಕ್ ಅಗರ್ವಾಲ್ ಅವರು ರಾಜಸ್ಥಾನ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಹಿರಿಯ ಕಾರ್ಯಕಾರಿ ಇಂಜಿನಿಯರ್ ಆಗಿದ್ದಾರೆ. ಆಸ್ಥಾ ಅವರ ಹಿರಿಯ ಸಹೋದರಿ ಕೂಡ ರಾಸಾಯನಿಕ ಇಂಜಿನಿಯರ್ ಆಗಿದ್ದಾರೆ. ಚಿಕ್ಕವಯಸ್ಸಿನಿಂದಲೂ ಓದಿನಲ್ಲಿ ತುಂಬಾ ಆಸಕ್ತಿ ಹೊಂದಿರುವ ಆಸ್ಥಾ ರಾಷ್ಟ್ರೀಯ ಮಟ್ಟ ಶಾಲಾ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ 7 ಶ್ರೇಯಾಂಕ ಗಳಿಸಿದ್ದರು ಜೊತೆಗೆ ಅಂತಾರಾಷ್ಟ್ರೀಯ ಕಿರಿಯರ ವಿಜ್ಞಾನ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು.
ಐಐಟಿ ಆಫರ್ ರಿಜೆಕ್ಟ್: ಈ ನಡುವೆ ಐಐಟಿ ಖಾನ್ ಪುರದ ವಿದ್ಯಾರ್ಥಿಯೊಬ್ಬ 1 ಕೋಟಿ ಸಂಬಳದ ಆಫರ್ ರಿಜೆಕ್ಟ್ ಮಾಡಿದ ಬೆನ್ನಲ್ಲೇ ಐಐಟಿ ದೆಹಲಿ ವಿದ್ಯಾರ್ಥಿಗಳು 76.25 ಲಕ್ಷ ರು ಸಂಬಳದ ಪ್ಯಾಕೇಜ್ ಒಪ್ಪಿಕೊಳ್ಳಲು ನಿರಾಕರಿಸಿದ ವರದಿಗಳು ಬಂದಿವೆ. (ಪಿಟಿಐ).
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications