ಶಿರಡಿಯಲ್ಲಿ ಪತ್ನಿ ನಾಪತ್ತೆ: 3 ವರ್ಷದಿಂದ ಪತಿಯಿಂದ ಹುಡುಕಾಟ
ಮುಂಬೈ, ನವೆಂಬರ್ 23: ರಜೆ ದಿನ ಕಳೆಯಲು ಕುಟುಂಬದೊಂದಿಗೆ ಶಿರಡಿಗೆ ತೆರಳಿದ್ದ ಸಂದರ್ಭದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ಮನೋಜ್ ಸೋನಿ ಎಂಬುವವರ ಛಲಬಿಡದ ಪ್ರಯತ್ನದ ಬಳಿಕ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠವು ಇದೇ ರೀತಿಯ ನಾಪತ್ತೆ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.
2017ರ ಆಗಸ್ಟ್ ತಿಂಗಳಲ್ಲಿ ಮನೋಜ್ ಸೋನಿ ಅವರು 38 ವರ್ಷದ ಪತ್ನಿ ದೀಪ್ತಿ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರಸಿದ್ಧ ಸಾಯಿಬಾಬ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಶಿರಡಿಯ ಉತ್ಸವದಲ್ಲಿ ಭಾಗವಹಿಸಿದ್ದ ಬಳಿಕ ಕೆಲವು ಅಂಗಡಿಗಳಿಗೆಂದು ತೆರಳಿದ್ದ ದೀಪ್ತಿ ಮತ್ತೆ ಹಿಂದಿರುಗಿರಲಿಲ್ಲ.
ತಮ್ಮ ಪತ್ನಿ ಸಿಗಬಹುದು ಎಂಬ ಆಶಯದೊಂದಿಗೆ ಒಂದರ ಮೇಲೊಂದು ಕಚೇರಿಗಳು, ಪೊಲೀಸದ ಠಾಣೆಗಳು, ವಿವಿಧ ನಗರಗಳು ಮಾತ್ರವಲ್ಲ, ಕೊನೆಗೆ ರೆಡ್ ಲೈಟ್ ಪ್ರದೇಶಗಳಿಗೂ ಸತತ ಮೂರು ವರ್ಷಗಳಿಂದ ಅಲೆದಾಡಿ ಹುಡುಕಾಟ ನಡೆಸಿದರೂ ಮನೋಜ್ ಸೋನಿ ಅವರ ಪ್ರಯತ್ನಕ್ಕೆ ಯಶ ಸಿಗಲಿಲ್ಲ. ಕೊನೆಗೂ ಅವರ ಪ್ರಯತ್ನವನ್ನು ಪರಿಗಣಿಸಿದ ಔರಂಗಾಬಾದ್ ವಿಭಾಗೀಯ ಪೀಠ, ಪ್ರಸಿದ್ಧ ದೇವಾಲಯ ಪಟ್ಟಣವಾದ ಶಿರಡಿಯಲ್ಲಿನ ಇದೇ ರೀತಿಯ ನಾಪತ್ತೆ ಪ್ರಕರಣಗಳನ್ನು ವಿಚಾರಣೆ ಮಾಡುವಂತೆ ಮತ್ತು ಮಾನವ ಕಳ್ಳಸಾಗಣೆ ಆಯಾಮದಿಂದ ತನಿಖೆ ನಡೆಸುವಂತೆ ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.

ಮೂರು ವರ್ಷಗಳಿಂದ ಅವರು ಪತ್ನಿಯನ್ನು ಪತ್ತೆಹಚ್ಚಲು ವಿವಿಧ ಪ್ರಯತ್ನಗಳನ್ನು ಮಾಡಿದ್ದಾರೆ. ಅವರು ಇಂದೋರ್ನ ನಿವಾಸಿ. ಇಷ್ಟು ದೂರದಲ್ಲಿದ್ದರೂ ಅವರು ಇಂದಿಗೂ ಪತ್ನಿಯನ್ನು ಪತ್ತೆಮಾಡುವ ಸಲುವಾಗಿ ಪಟ್ಟುಬಿಡದೆ ಹುಡುಕಾಟ ನಡೆಸುತ್ತಿದ್ದಾರೆ. ಇಂತಹ ಪ್ರಕರಣಗಳು ಬಡಜನರಿಗೆ ಆದಾಗ, ಅವರ ಸಂಬಂಧಿಕರು ನಾಪತ್ತೆಯಾದಾಗ ಅವರು ಅಸಹಾಯಕರಾಗುತ್ತಾರೆ. ಹೆಚ್ಚಿನವರು ಪೊಲೀಸರನ್ನೇ ಸಂಪರ್ಕಿಸುವುದಿಲ್ಲ. ಅಂತಹ ಬಡ ಜನರು ನ್ಯಾಯಾಲಯದವರೆಗೂ ಬರುವುದೇ ಅತಿ ವಿರಳ ಎಂದು ನ್ಯಾಯಾಲಯ ಹೇಳಿದೆ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ












Click it and Unblock the Notifications