ಬಿರು ಬಿಸಿಲಿನ ನಡುವೆಯೇ ಮಹಾರಾಷ್ಟ್ರದಲ್ಲಿ ಕಾಲಿಟ್ಟ ಮುಂಗಾರು
ಮುಂಬೈ, ಜೂನ್ 11: ಬಿರು ಬಿಸಿಲಿನ ನಡುವೆಯೇ ಮಹಾರಾಷ್ಟ್ರದಲ್ಲಿ ಮುಂಗಾರು ಕಾಲಿಟ್ಟಿದೆ. ಥಾಣೆ ಮತ್ತು ಮುಂಬೈನ ಹಲವು ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಮುಂದಿನ ಮೂರ್ನಾಲ್ಕು ಗಂಟೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಬೆಳಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಥಾಣೆ ಪ್ರದೇಶದ ಹಲವೆಡೆ ಮರಗಳನ್ನು ಬುಡ ಸಮೇತ ಧರೆಗುರುಳಿದೆ.
ಮುಂದಿನ 3 ರಿಂದ 4 ಗಂಟೆಗಳಲ್ಲಿ ಥಾಣೆ, ರಾಯಗಢ, ಪಾಲ್ಘರ್, ರತ್ನಗಿರಿ, ಸಿಂಧುದುರ್ಗ ಮತ್ತು ಮುಂಬೈ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಮಧ್ಯಮದಿಂದ ಬಲವಾದ ಗಾಳಿಯ ವೇಗ ಗಂಟೆಗೆ 30-40 ಕಿಮೀ ವೇಗದಲ್ಲಿ ಬೀಸಲಿದೆ ಎಂದು IMD ಮುಂಬೈ ಶನಿವಾರ ಎಚ್ಚರಿಸಿದೆ. ಜೊತೆಗೆ ಇದರೊಂದಿಗೆ ಮಳೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ಶನಿವಾರ ಬೆಳಗ್ಗೆಯಿಂದಲೇ ಮುಂಬೈ ಮತ್ತು ಥಾಣೆ ನಗರದ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ವಡಾಲಾ ಪ್ರದೇಶದಲ್ಲಿ ರಸ್ತೆಗಳು ಜಲಾವೃತಗೊಂಡಿವೆ.
Maharashtra | A tree uprooted and fell on a tempo vehicle parked near it in Lodha Paradise, Majiwada area of Thane district due to strong winds and heavy rainfall. No injuries reported. pic.twitter.com/I9BPSTm8a9
— ANI (@ANI) June 11, 2022

ಥಾಣೆ ಜಿಲ್ಲೆಯ ಮಜಿವಾಡಾ ಪ್ರದೇಶದ ಲೋಧಾ ಪ್ಯಾರಡೈಸ್ನಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಮರವೊಂದು ಉರುಳಿ ಬಿದ್ದಿದೆ. ಇದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ, ಥಾಣೆ ಜಿಲ್ಲೆಯಲ್ಲಿ ಬಲವಾದ ಗಾಳಿಯಿಂದಾಗಿ ಮರಗಳು ಉರುಳಿದ ಆರು ಘಟನೆಗಳು ವರದಿಯಾಗಿವೆ. ಈ ಘಟನೆಗಳಲ್ಲಿ ಯಾವುದೇ ಗಾಯಗಳು ಅಥವಾ ಸಾವುಗಳು ವರದಿಯಾಗಿಲ್ಲ. ಇದೇ ವೇಳೆ ಮಳೆಯಿಂದಾಗಿ ವಡಾಲ ಪ್ರದೇಶದಲ್ಲಿ ಅಲ್ಪ ಪ್ರಮಾಣದ ನೀರು ನಿಂತಿದೆ. ಅಲ್ಲದೇ ಸಂಚಾರಕ್ಕೆ ತೊಂದರೆಯಾಗಿದೆ.











Click it and Unblock the Notifications