ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣ: ಅಂತಿಮ ವಾದ ಮಂಡನೆ ಆರಂಭ
ಮುಂಬೈ, ಡಿಸೆಂಬರ್ 03: ದೇಶದ ಗಮನ ಸೆಳೆದಿರುವ 'ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣ' ಎಂದೇ ಹೆಸರಾಗಿರುವ ಸೊಹ್ರಾಬುದ್ದೀನ್ ಶೇಖ್ ಹಾಗೂ ತುಳಸೀರಾಮ್ ಪ್ರಜಾಪತಿ ಎನ್ಕೌಂಟರ್ ಪ್ರಕರಣದ ಅಂತಿಮ ವಾದ ನ್ಯಾಯಾಲಯದಲ್ಲಿ ಇಂದಿನಿಂದ ಆರಂಭವಾಗಿದೆ.
ಸಿಬಿಐ ವಿಶೇಷ ನ್ಯಾಯಾಲಯವು ಅಂತಿಮ ವಾದವನ್ನು ಡಿಸೆಂಬರ್ 3 ರಿಂದ ಆಲಿಸುವುದಾಗಿ ಡಿಸೆಂಬರ್ 1 ರಂದು ಹೇಳಿತ್ತು. ಆರೋಪಿಗಳ ಹೇಳಿಕೆ ದಾಖಲು ಮಾಡುವ ಕಾರ್ಯ ಮುಗಿದಿದ್ದು, ಆರೋಪಿಗಳ ಮೇಲೆ ಐಪಿಸಿ 313 ಕೇಸು ದಾಖಲಿಸಲಾಗಿದೆ.
ಸೊಹ್ರಾಬುದ್ದೀನ್ಗೆ ಲಕ್ಷರ್-ಎ-ತೊಯಿಬಾ ಜೊತೆ ನಂಟು ಇತ್ತು ಎಂದು ಎಂದು ಆರೋಪಿಗಳ ಪರ ವಕೀಲರ ವಾದವಾಗಿದೆ. ಆದರೆ ಇದೊಂದು ನಕಲಿ ಎನ್ಕೌಂಟರ್ ಎಂದು ಸೊಹ್ರಾಬುದ್ದೀನ್ ಕುಟುಂಬದವರ ವಾದವಾಗಿದೆ. ಪ್ರಕರಣದಲ್ಲಿ 32 ಮಂದಿ ಆರೋಪಿಗಳನ್ನಾಗಿ ಮಾಡಲಾಗಿತ್ತು. ಅದರಲ್ಲಿ 16 ಜನರ ಹೆಸರನ್ನು ಕೈಬಿಡಲಾಗಿದೆ.

ಇದೇ ಪ್ರಕರಣದಲ್ಲಿ ಅಮಿತ್ ಶಾ ಹೆಸರು ಸಹ ತಳುಕು ಹಾಕಿಕೊಂಡಿದೆ. ಎನ್ಕೌಂಟರ್ ಸಂಚಿನಲ್ಲಿ ಅಮಿತ್ ಶಾ ಕೈವಾಡ ಇತ್ತು ಎಂದು ತನಿಖಾಧಿಕಾರಿ ಒಬ್ಬರು ವರದಿ ಮಾಡಿದ್ದರು. ಇದೇ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಜಡ್ಜ್ ಲೋಯಾ ಅಕಾಲಿಕ ಸಾವಿನ ವಿಚಾರದಲ್ಲಿಯೂ ಅಮಿತ್ ಶಾ ಅವರ ಹೆಸರು ಕೇಳಿಬಂದಿತ್ತು.











Click it and Unblock the Notifications