ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಬಿಜೆಪಿ ಹೇಳಹೆಸರಿಲ್ಲದಂತೆ ಆಗುವ ಕಾಲ ದೂರವಿಲ್ಲ: ರಾಹುಲ್

|
Google Oneindia Kannada News

ಮುಂಬೈ, ಜೂನ್ 12 : "ಬಿಜೆಪಿಯವರು ಈಚೆಗೆ ಕರ್ನಾಟಕದಲ್ಲಿ ಸೋತಿದ್ದಾರೆ ಮತ್ತು ಗುಜರಾತ್ ನಲ್ಲಿ ಹೇಗೋ ಕಷ್ಟಪಟ್ಟು ಗೆದ್ದರು. ಇನ್ನು ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಹೇಳಹೆಸರಿಲ್ಲದಂತೆ ಆಗುತ್ತಾರೆ. ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲಿವೆ".

- ಹೀಗೆ ಮುಂಬೈನಲ್ಲಿ ಮಂಗಳವಾರ ಆತ್ಮವಿಶ್ವಾಸದಿಂದ ಮಾತನಾಡಿದವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ.

ನನ್ನ ಸಿದ್ಧಾಂತಕ್ಕಾಗಿ ನಿರಂತರವಾಗಿ ಹೋರಾಡುತ್ತೇನೆ: ರಾಹುಲ್ ಗಾಂಧಿ ನನ್ನ ಸಿದ್ಧಾಂತಕ್ಕಾಗಿ ನಿರಂತರವಾಗಿ ಹೋರಾಡುತ್ತೇನೆ: ರಾಹುಲ್ ಗಾಂಧಿ

ನಾವು ವಾಜಪೇಯಿ ಜೀ ವಿರುದ್ಧ ಕೂಡ ಸ್ಪರ್ಧಿಸಿದ್ದೆವು. ಆದರೆ ಅವರಿಗೆ ಅನಾರೋಗ್ಯ ಅಂತಾದಾಗ ಆದ್ಯತೆ ಮೇಲೆ ನೋಡಿಕೊಂಡು ಬರಲು ಆಸ್ಪತ್ರೆಗೆ ಹೋದೆ. ಏಕೆಂದರೆ ನಾನೊಬ್ಬ ಕಾಂಗ್ರೆಸ್ ನ ಸೈನಿಕ. ವಾಜಪೇಯಿ ಅವರು ನಮ್ಮ ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಮತ್ತು ಮಾಜಿ ಪ್ರಧಾನಿಯಾಗಿ ಅವರನ್ನು ಗೌರವಿಸುತ್ತೇವೆ. ಇದು ನಮ್ಮ ಸಂಸ್ಕೃತಿ ಎಂದು ಅವರು ಹೇಳಿದರು.

BJP will be wiped out in Rajasthan, MP, Chhatisgarh & Congress

ಎಲ್.ಕೆ.ಅಡ್ವಾಣಿ ಅವರು ಪ್ರಧಾನಿ ನರೇಂದ್ರ ಮೋದಿಯ ಗುರು. ಆದರೆ ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇನೆ: ಪ್ರಧಾನಿ ಮೋದಿ ತಮ್ಮ ಗುರುವಿಗೆ ಗೌರವ ನೀಡಲ್ಲ. ಅಡ್ವಾಣಿ ಅವರ ಇಂದಿನ ಸ್ಥಿತಿಗೆ ನನಗೆ ಮರುಕವಿದೆ. ಕಾಂಗ್ರೆಸ್ ಪಕ್ಷವೇ ಅಡ್ವಾಣಿ ಅವರಿಗೆ ಪ್ರಧಾನಿಗಿಂತ ಹೆಚ್ಚಿನ ಗೌರವ ನೀಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಮಾನಹಾನಿ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಆರೋಪ ನಿಗದಿ ಮಾನಹಾನಿ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಆರೋಪ ನಿಗದಿ

ಕಳೆದ ಐವತ್ತು ವರ್ಷಗಳಿಂದ ಕಾಂಗ್ರೆಸ್ ವಿರುದ್ಧವಾಗಿ ಹಿರಿಯ ರಾಜಕಾರಣಿಯೊಬ್ಬರು ಹೋರಾಟ ಮಾಡುತ್ತಿದ್ದಾರೆ. ಅವರೇ ಹೇಳಿದ್ದರು: ಐವತ್ತು ವರ್ಷಗಳ ನಂತರ ಅವರಿಗೆ ಗೊತ್ತಾಗಿದ್ದು ಏನೆಂದರೆ, ಈ ದೇಶವನ್ನು ಯಾರಾದರೂ ಸುರಕ್ಷಿತವಾಗಿ ಇರಿಸಿಕೊಳ್ಳಲು ಸಾಧ್ಯವಾದರೆ ಅದು ಕಾಂಗ್ರೆಸ್. ಬಿಜೆಪಿ ಮತ್ತು ಆರೆಸ್ಸೆಸ್ ನ ಸಿದ್ಧಾಂತಗಳನ್ನು ಸೋಲಿಸಲು ಸಾಧ್ಯವಿದ್ದರೆ ಅದು ಕಾಂಗ್ರೆಸ್ಸಿಗೆ ಮಾತ್ರ ಎಂದು ರಾಹುಲ್ ಹೇಳಿದರು.

ಹೇಗೆ ಕಾಂಗ್ರೆಸ್ ಪಕ್ಷವು ಸಮಾಜದ ಎಲ್ಲ ವರ್ಗದವರನ್ನು ಒಟ್ಟು ಮಾಡಿಕೊಂಡು ಮುನ್ನಡೆಸುತ್ತಿದೆಯೋ ಅದೇ ರೀತಿ ಮುಂಬೈ ನಗರ ಕೂಡ ಎಲ್ಲ ರೀತಿಯ ಜನರನ್ನು ಒಳಗೊಂಡಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

English summary
hey (BJP) have recently lost in #Karnataka & have barely saved themselves in Gujarat, they will be wiped out in Rajasthan, MP & Chhatisgarh & Congress & other opposition parties will defeat them in the General Elections of 2019: Congress President Rahul Gandhi in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X