ಯೆರವಾಡ ಜೈಲಿನಿಂದ ಸಂಜಯ್ ದತ್ ಬಿಡುಗಡೆ
ಪುಣೆ, ಫೆಬ್ರವರಿ 25 : 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪ ಸಾಬೀತಾಗಿ ಜೈಲು ಸೇರಿದ್ದ ಬಾಲಿವುಡ್ ನಟ ಸಂಜಯ್ ದತ್ ಅವರು ಗುರುವಾರ ಬಿಡುಗಡೆಗೊಂಡರು. ನೂರಾರು ಅಭಿಮಾನಿಗಳು, ಆಪ್ತರು ಸಂಜಯ್ ದತ್ ಅವರನ್ನು ಬರಮಾಡಿಕೊಂಡರು.
ಪುಣೆಯ
ಯೆರವಾಡ
ಜೈಲಿನಿಂದ
ಗುರುವಾರ
ಬೆಳಗ್ಗೆ
8.30ರ
ಸುಮಾರಿಗೆ
ಹೊರಬಂದ
ಸಂಜಯ್
ದತ್
ಅವರನ್ನು
ಪತ್ನಿ
ಮಾನ್ಯತಾ
ಬರಮಾಡಿಕೊಂಡರು.
1993ರ
ಮಾರ್ಚ್
12ರಂದು
ಮುಂಬೈನಲ್ಲಿ
ನಡೆದ
ಸರಣಿ
ಬಾಂಬ್
ಸ್ಫೋಟ
ಪ್ರಕರಣದಲ್ಲಿ
ಅಪರಾಧಿಯಾಗಿದ್ದ
56
ವರ್ಷ
ವಯಸ್ಸಿನ
ಸಂಜಯ್
ದತ್
ಅವರು
42
ತಿಂಗಳು
ಶಿಕ್ಷೆ
ಅನುಭವಿಸಿದ್ದಾರೆ.
[ಸಂಜಯ್
ದತ್
ಗೆ
ಕ್ಷಮಾದಾನ
ಏಕೆ
ಸಿಗಲಿಲ್ಲ?]
ವಿಚಾರಣಾಧೀನ
ಕೈದಿಯಾಗಿ
ಸಂಜಯ್
ದತ್
ಅವರು
18
ತಿಂಗಳು
ಕಾಲ
ಜೈಲುವಾಸ
ಅನುಭವಿಸಿದ್ದರು.
ನಂತರ
2013ರಲ್ಲಿ
ಸುಪ್ರೀಂಕೋಟ್
ಆದೇಶದಂತೆ
ಜಾಮೀನಿನ
ಮೇಲೆ
ಬಿಡುಗಡೆಗೊಂಡಿದ್ದರು.
ನಂತರ
ಪುಣೆಯ
ಯೆರವಾಡ
ಜೈಲಿನಲ್ಲಿ
42
ತಿಂಗಳುಗಳ
ಕಾಲ
ಶಿಕ್ಷೆ
ಅನುಭವಿಸಿದ್ದಾರೆ.
[ಸಂಜಯ್
ದತ್
ಕೈಗೆ
ಬಾಂಬ್
ನೀಡಿರಲಿಲ್ಲ:
ಅಬು
ಸಲೇಂ]
Actor Sanjay Dutt released from Pune's Yerwada Jail. pic.twitter.com/u98HYmtX2D
— ANI (@ANI_news) February 25, 2016
ಜೈಲಿಗೆ
ಸೆಲ್ಯೂಟ್
:
ಜೈಲಿನಿಂದ
ಹೊರಬಂದ
ಸಂಜಯ್
ದತ್
ತಲೆಬಾಗಿ
ಜೈಲಿಗೆ
ನಮಸ್ಕರಿಸಿ
ಸೆಲ್ಯೂಟ್
ಹೊಡೆದರು.
ಯೆರವಾಡ
ಜೈಲಿನಿಂದ
ಪತ್ನಿ
ಮಾನ್ಯತಾ
ಜೊತೆ
ಪುಣೆ
ವಿಮಾನ
ನಿಲ್ದಾಣಕ್ಕೆ
ತೆರಳಿದ
ಸಂಜಯ್
ದತ್,
ಅಲ್ಲಿಂದ
ಮುಂಬೈಗೆ
ತೆರಳಿದ್ದಾರೆ.
ಮುಂಬೈನಲ್ಲಿ
ತಾಯಿ
ಸಮಾಧಿ
ಸ್ಥಳಕ್ಕೆ
ಭೇಟಿ
ನೀಡಲಿರುವ
ದತ್,
ನಂತರ
ದೇವರ
ದರ್ಶನ
ಪಡೆಯಲಿದ್ದಾರೆ.
WATCH: Actor Sanjay Dutt released from Pune's Yerwada Central Jail in the 1993 Mumbai bomb blasts casehttps://t.co/Rt5kH3VD4I
— ANI (@ANI_news) February 25, 2016
ಅವಧಿಗೆ ಮುನ್ನವೇ ಬಿಡುಗಡೆ : ಸಂಜಯ್ ದತ್ ಅವರ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಸನ್ನಡತೆ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ ದತ್ ಬಿಡುಗಡೆಗೊಳಿಸುವ ನಿರ್ಧಾರವನ್ನು ಕೈಗೊಂಡಿರುವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಭಾಲೇಕರ್ ಎಂಬುವವರು ಬಾಂಬೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಸಂಜಯ್ ದತ್ ಶಿಕ್ಷೆಯನ್ನು ಕಡಿಮೆ ಮಾಡಬಾರದು, ಅವರನ್ನು ವಶಕ್ಕೆ ಪಡೆದು 5ವರ್ಷಗಳ ಶಿಕ್ಷೆ ಅವಧಿ ಪೂರ್ಣಗೊಂಡ ನಂತರವೇ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.