ಶ್ರೀದೇವಿಯನ್ನು ಬೀಳ್ಕೊಡಲು ಸಾಲುಸಾಲಾಗಿ ಬಂದ ತಾರಾ ಬಳಗ
Recommended Video

ಲಕ್ಷಾಂತರ, ಕೋಟ್ಯಂತರ ಮಂದಿ ಕಣ್ಣಿಗೆ ಬೆರಗಿನಂತಿದ್ದ ಶ್ರೀದೇವಿ ಎಂಬ ಚೆಲುವೆ ತನ್ನ ನೆನಪನ್ನು ಉಳಿಸಿ ಹೊರಟಿದ್ದಾರೆ. ಮಿನುಗುತ್ತಿದ್ದ ತಾರೆಯೊಂದು ಕಳಾಹೀನವಾಗಿದೆ. ಆ ಕಣ್ಣುಗಳಲ್ಲಿ ತುಳುಕಿಸುತ್ತಿದ್ದ ಭಾವನೆಗಳು, ಅದ್ಭುತವಾದ ನಟನೆ, ಜೇನು ತುಂಬಿಕೊಂಡಂತೆ ಭಾಸವಾಗುತ್ತಿದ್ದ ಧ್ವನಿ ಇವೆಲ್ಲ ಇನ್ನು ಮುಂದೆ ಸಿನಿಮಾಗಳಲ್ಲಿ ಮಾತ್ರ ಕಾಣಲು ಸಿಗುತ್ತದೆ.
ಮುಭೈನಲ್ಲಿ ಬುಧವಾರ ಶ್ರೀದೇವಿಯ ಅಂತ್ಯಸಂಸ್ಕಾರ. ಬದುಕಿರುವಾಗ ಅಯಸ್ಕಾಂತದಂತೆ ಸೆಳೆಯುತ್ತಿದ್ದ ಆಕೆಯ ಅಂತಿಮ ದರ್ಶನ ಪಡೆಯುವ ಸಲುವಾಗಿ ಸಾಗರವನು ಅರಸಿ ಸಾಗುವ ನದಿಗಳಂತೆ ಅದೆಷ್ಟೋ ಮಂದಿ ಬರುತ್ತಿದ್ದಾರೆ. ಜತೆಗೆ ಹಿಂದಿ ಚಿತ್ರರಂಗವೂ ಸೇರಿದಂತೆ ವಿವಿಧ ಭಾಷೆಯ ನಟ-ನಟಿಯರು ಸಹ ಧಾವಿಸುತ್ತಿದ್ದಾರೆ.
ದುಬೈನ ಹೋಟೆಲ್ ವೊಂದರಲ್ಲಿ ತಂಗಿದ್ದಾಗ ಮೃತಪಟ್ಟ ಐವತ್ನಾಲ್ಕು ವರ್ಷದ ಬಹುಭಾಷಾ ನಟಿಯ ಪಾರ್ಥಿವ ಶರೀರ ಮಂಗಳವಾರ ರಾತ್ರಿ ಮುಂಬೈ ತಲುಪಿತು. ಆ ನಂತರ ಆಸ್ಪತ್ರೆಯಲ್ಲಿ ಇಟ್ಟಿದ್ದ ದೇಹವನ್ನು ಮರು ದಿನ ಅಂದರೆ ಬುಧವಾರ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಮಹಾನ್ ನಟಿಗೆ ಅಂತಿಮ ವಿದಾಯ ಹೇಳಲು ಯಾರು ಬಂದಿದ್ದರು ಎಂಬುದರ ಫೋಟೋ ಸಹಿತ ಲೇಖನ ಇಲ್ಲಿದೆ.

ಅತ್ತೆ-ಸೊಸೆ ಅಂತಿಮ ವಿದಾಯ
ಹಿರಿಯ ನಟಿ ಜಯಾ ಬಚ್ಚನ್ ಹಾಗೂ ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಶ್ರೀದೇವಿಗೆ ಅಂತಿಮ ವಿದಾಯ ಹೇಳಲು ಬಂದ ಕ್ಷಣದ ಚಿತ್ರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಕುಮಾರ ಮಂಗಲಂ ಬಿರ್ಲಾ
ಆದಿತ್ಯಾ ಬಿರ್ಲಾ ಗ್ರೂಪ್ ನ ಅಧ್ಯಕ್ಷ, ಉದ್ಯಮಿ ಕುಮಾರ ಮಂಗಲಂ ಬಿರ್ಲಾ ತಮ್ಮ ಮಗಳ ಜತೆಗೆ ಬಂದು ಸಂತಾಪ ಸೂಚಿಸಿದರು.

ನಟಿ ಟಬು
ಹಿರಿಯ ನಟಿ ಸುಲ್ಭಾ ಆರ್ಯಾ ಜತೆಗೆ ಬಂದು ಕೊನೆಯದಾಗಿ ಶ್ರೀದೇವಿ ದರ್ಶನ ಪಡೆದ ನಟಿ ಟಬು.

ತನಿಷಾ ಮುಖರ್ಜಿ
ನಟಿ ತನಿಷಾ ಮುಖರ್ಜಿ ಮತ್ತು ಆಕೆಯ ತಾಯಿ ತನುಜಾ ಸಂತಾಪ ಸೂಚಿಸುವ ಸಲುವಾಗ ಬಂದ ಕ್ಷಣ.

ಜಾಕ್ವೆಲಿನ್ ಫರ್ನಾಂಡಿಸ್
ಕೊನೆಯ ಬಾರಿಗೆ ಶ್ರೀದೇವಿ ಅವರಿಗೆ ಗೌರವ ಸೂಚಿಸಲು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಂದಿದ್ದು ಹೀಗೆ.

ಸುಭಾಷ್ ಘಾಯ್
ಸಿನಿಮಾ ನಿರ್ದೇಶಕ ಸುಭಾಷ್ ಘಾಯ್ ತಮ್ಮ ದುಃಖವನ್ನು ಸೂಚಿಸಲು ಬಂ ಕ್ಷಣ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು ಈ ಭಂಗಿಯಲ್ಲಿ.

ಅಜಯ್ ದೇವಗನ್ ಹಾಗೂ ಕಾಜೋಲ್
ಶ್ರೀದೇವಿ ಅಂತಿಮ ದರ್ಶನಕ್ಕಾಗಿ ಬಂದಿದ್ದ ತಾರಾ ದಂಪತಿ ಅಜಯ್ ದೇವಗನ್ ಹಾಗೂ ಕಾಜೋಲ್.

ಸುಷ್ಮಿತಾ ಸೇನ್
ಬಹುಭಾಷಾ ಸುಷ್ಮಿತಾ ಸೇನ್ ಅವರು ಶ್ರೀದೇವಿ ಪಾರ್ಥಿವ ಶರೀರದ ದರ್ಶನಕ್ಕಾಗಿ ಬಂದಿದ್ದು ಹೀಗೆ.

ಮಾಧುರಿ ದೀಕ್ಷಿತ್ ದಂಪತಿ
ನಟಿ ಮಾಧುರಿ ದೀಕ್ಷಿತ್ ಹಾಗೂ ಆಕೆಯ ಪತಿ ಶ್ರೀರಾಮ್ ಮಾಧವ್ ನೆನೆ ಅಂತಿಮ ದರ್ಶನಕ್ಕಾಗಿ ಬಂದ ಕ್ಷಣ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ












Click it and Unblock the Notifications