ರೂಬಿಕ್ ಕ್ಯೂಬ್: ಗಿನ್ನೆಸ್ ದಾಖಲೆ ಬರೆದ ಎಸ್ಡಿಎಂ ವಿದ್ಯಾರ್ಥಿಗಳು
ಮಂಗಳೂರು, ಫೆಬ್ರವರಿ. 20 : ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿದ ರೂಬಿಕ್ ಫಜಲ್ ಕ್ಯೂಬ್ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ.
ರೂಬಿಕ್ ಕ್ಯೂಬ್ ರಚಿಸಿದ ಉಜಿರೆಯ ಎಸ್ ಡಿಎಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪೃಥ್ವಿಶ್ ಮತ್ತು ತಂಡಕ್ಕೆ ಗಿನ್ನಿಸ್ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ನೀಡಿ ಅಭಿನಂದಿಸಿದರು .[ಗಿನ್ನೆಸ್ ದಾಖಲೆ ಸೇರಲಿದೆ ಭವಿಷ್ಯತ್ತಿಗಾಗಿ ಯೋಗ ಪ್ರದರ್ಶನ!]
ಕಾಲೇಜಿನ 20 ವಿದ್ಯಾರ್ಥಿಗಳು ಸೇರಿ 14981 ಚದರ್ ಮೀ. ಅಳತೆಯ ಬೃಹತ್ ಜಾಲರಿ ಪರದೆಯ ಮೇಲೆ 4500 ರೂಬಿಕ್ ಫಜಲ್ ಕ್ಯೂಬ್ ಗಳನ್ನು ಮೊಸಾಯಿಕ್ ಶೈಲಿಯಲ್ಲಿ ಜೋಡಿಸಿ, ಒಂದು ಬದಿಯಲ್ಲಿ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಹಾಗೂ ಇನ್ನೊಂದು ಬದಿಯಲ್ಲಿ ಇನ್ನೋರ್ವ ಹಾಸ್ಯ ನಟ ಮಿಸ್ಟರ್ ಬಿನ್ ಚಿತ್ರಗಳನ್ನು ಮೂಡಿಸಿದ್ದರು.

ಈ ಸಾಧನೆಗೆ ಗಿನ್ನಿಸ್ ದಾಖಲೆಯ ಬಗ್ಗೆ 2017 ಜನವರಿ 13ಕ್ಕೆ ಅಂತಿಮ ಅಂಗೀಕಾರ ದೊರೆತಿದ್ದು, ಇದೀಗ ಅವರಿಂದ ಪ್ರಮಾಣ ಪತ್ರ ಬಂದಿದೆ.
ರೂಬಿಕ್ ಕ್ಯೂಬ್ ಸಮಸ್ಯೆ ಪರಿಹರಿಸುವುದೇ ಒಂದು ಹವ್ಯಾಸವಾಗಿ ಮಾಡಿಕೊಂಡಿರುವ ಈ ತಂಡ ಮಹಾನ್ ಸಾಧನೆಯನ್ನೇ ಮಾಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪ್ರಯತ್ನದಲ್ಲಿ ಪ್ರಥ್ವೀಶ್ ಅವರೊಂದಿಗೆ ವಿದ್ಯಾರ್ಥಿಗಳಾದ ಮುದ್ದೇಬಿಹಾಳದ ಪ್ರಜ್ವಲ್ ಪಾಟೀಲ, ಮೂಡಿಗೆರೆಯ ಶರತ್ ಕೃಷ್ಣ, ವಿಜಯಪುರದ ವಿರೇಶ್ ಎಸ್.ಬಿ., ಅಥಣಿಯ ಶಾಂತಿನಾಥ, ಮಿಯಾಪದವಿನ ಶಿವಕುಮಾರ್, ಬಳ್ಳಾರಿಯ ವಿನಯ್, ಸಾಂಗ್ಲಿಯ ಸ್ವಪ್ನಿಲ್, ಮಾವಿನಕರೆಯ ಪ್ರಹ್ಲಾದ್, ವೇತಡ್ಕದ ಹರಿಕೃಷ್ಣ, ಮುಂಡಾಜೆಯ ಸಾತ್ವಿಕ್, ಬಲಮುರಿಯ ಸ್ಟೀಫ್ನ್, ಗುಂಡ್ಮಿಯ ಮಧುರ್, ಬನಶಂಕರಿಯ ಕಾರ್ತಿಕ್, ವಿಜಯಪುರದ ಮಲ್ಲನಗೌಡ ಮೇಟಿ, ಶಿವಮೊಗ್ಗದ ಸುಜಯ್, ಉಜಿರೆಯ ಸಂಜಯ್ ಹೊಳ್ಳ, ನಿಪ್ಪಾಣಿಯ ರೋಹನ್, ಕಾರವಾರದ ಶಾಯಿಲ್ ನ್ಯಾಕ್, ಸಾಬರಕಟ್ಟೆಯ ಶಿವ ಕೈಜೋಡಿಸಿದ್ದರು.
ಈ ಬಗ್ಗೆ ಮಾತನಾಡಿದ ಪ್ರಥ್ವೀಶ್, ನಾವು ಕೆಲ ವರ್ಷಗಳಿಂದ ನಡೆಸಿದ ಪ್ರಯತ್ನಕ್ಕೆ ಇದೀಗ ಗಿನ್ನಿಸ್ ದಾಖಲೆಯ ಗೌರವ ದೊರೆತಿದೆ.
ಇದಕ್ಕೆ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಹಕಾರವೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications