ರಸ್ತೆ ರಿಪೇರಿ ಮಾಡಿದ ಟ್ರಾಫಿಕ್ ಪೊಲೀಸ್ಗೆ ಇಲಾಖೆಯಿಂದ ಪ್ರಶಸ್ತಿ
ಮಂಗಳೂರು, ಫೆಬ್ರವರಿ 24: ಮಂಗಳೂರು ಟ್ರಾಫಿಕ್ ಪೊಲೀಸ್ ಒಬ್ಬರ ನಿಸ್ವಾರ್ಥ ಸೇವೆ ಈಗ ಎಲ್ಲರ ಮೆಚ್ಚುಗೆಗೆ ಪತ್ರವಾಗಿದೆ. ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಒಬ್ಬರು ರಸ್ತೆ ರಿಪೇರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಮ್ಮ ಕರ್ತವ್ಯದ ನಡುವೆ ಸಾಮಾಜಿಕ ಜವಾಬ್ದಾರಿ ಮೆರೆದ ಟ್ರಾಫಿಕ್ ಪೊಲೀಸ್ ಅವರಿಗೆ ಒಂದೆಡೆ ಧನ್ಯವಾದದ ಮಹಾಪೂರವೇ ಹರಿದು ಬರಿತಿದ್ದರೆ ಇನ್ನೊಂದೆಡೆ ಪೊಲೀಸ್ ಇಲಾಖೆ ಅವರನ್ನು ಸನ್ಮಾನಿಸಿ ನಗದು ಬಹುವಾನ ಕೂಡ ನೀಡಿದೆ.
ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ಕಾಂಕ್ರೀಟ್ ರಸ್ತೆಯಲ್ಲಿ ಕಬ್ಬಿಣ ಪಟ್ಟಿಯೊಂದು ರಸ್ತೆಯ ನಡುವೆ ಅಪಾಯಕಾರಿ ಯಾಗಿ ಮೇಲೆದ್ದಿತ್ತು. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಭಾರಿ ತೊಂದರೆ ಅನುಭವಿಸುತ್ತಿದ್ದರು. ಸುಗಮ ಸಂಚಾರಕ್ಕೂ ಈ ಕಬ್ಬಿಣದ ಪಟ್ಟಿ ತೊಡಕಾಗಿತ್ತು. ಈ ಬಗ್ಗೆ ಹಲವಾರು ಬಾರಿ ಮಂಗಳೂರು ಮಹಾನಗರಪಾಲಿಕೆಗೆ ದೂರು ನೀಡಿದ್ದರೂ ಯಾವುದೇ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಸ್ಪಂದನಕ್ಕೆ ಕಾಯದೇ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ, ತಾವೇ ರಸ್ತೆಯಿಂದ ಮೇಲ್ಲೆದ್ದ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಲು ಶ್ರಮಿಸಿದರು.
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ ಖದ್ದು ರಸ್ತೆ ರಿಪೇರಿ ಮಾಡುತ್ತಿದ್ದನ್ನು ಸ್ಥಳೀಯರುಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ರಸ್ತೆಯ ಮೇಲೆದ್ದ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿದ ರೇವಣ ಸಿದ್ದಪ್ಪ ಅವರ ಕಾರ್ಯಕ್ಕೆ ಸಾಮಾಜಿಕಲ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಈಗ ಪೊಲೀಸ್ ಇಲಾಖೆ ಕೂಡ ರೇವಣ್ಣ ಸಿದ್ದಪ್ಪ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸನ್ಮಾನಿಸಿದೆ. ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ರೇವಣ್ಣ ಸಿದ್ದಪ್ಪ ಅವರನ್ನು ಸನ್ಮಾನಿಸಿದ್ದು 5 ಸಾವಿರ ರೂಪಾಯಿ ನಗದು ಬಹುಮಾನ ಕೂಡ ನೀಡಿದ್ದಾರೆ.