ಮಹಾಲಿಂಗೇಶ್ವರ ದೇವಸ್ಥಾನ ದರ್ಶನ ಪಡೆದ ಅನುಷ್ಕಾ ಶೆಟ್ಟಿ
ಮಂಗಳೂರು, ಜೂನ್ 6: 'ಮಂಗಳೂರು ಮಲ್ಲಿಗೆ', ಟಾಲಿವುಡ್ ನಾಯಕ ನಟಿ ಅನುಷ್ಕಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ್ದಾರೆ. ಸ್ವತಃ ಪುತ್ತೂರಿನವರೇ ಆದ ಅನುಷ್ಕಾ ಮಂಗಳವಾರ ಸಂಜೆ ಉರುವಾಲಿನ ತಮ್ಮ ಮನೆಯಲ್ಲಿ ನಡೆದ ದೈವವತಂಬಿಲ ಕಾರ್ಯದಲ್ಲಿ ಪಾಲ್ಗೊಂಡರು.
ಅಣ್ಣ ಗುಣರಂಜನ್ ಶೆಟ್ಟಿ, ತಾಯಿ ಪ್ರಪುಲ್ಲ ಶೆಟ್ಟಿ ಸೇರಿದಂತೆ ಬಂಧುಗಳು ಅನುಷ್ಕಾ ಶೆಟ್ಟಿ ಅವರಿಗೆ ಸಾಥ್ ನೀಡಿದರು. ತಮ್ಮ ಆರಾಧ್ಯ ದೇವರಾದ ಮಹಾಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಅನುಷ್ಕಾ ತನ್ನ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು.[ಬಪ್ಪನಾಡು ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಬಾಹುಬಲಿಯ 'ದೇವಸೇನಾ' ಅನುಷ್ಕಾ]
ಮಹಾಲಿಂಗೇಶ್ವರನ ದರ್ಶನದ ಬಳಿಕ ದೇವಸ್ಥಾನದ ನಂದಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಇನ್ನು ಇತೀಚೆಗಷ್ಟೇ ನಟಿ ಅನುಷ್ಕಾ ಶೆಟ್ಟಿ ನಟನೆಯ ಬಾಹುಬಲಿ-2 ಚಿತ್ರದ ಯಶಸ್ಸಿನ ನಂತರ ಅನುಷ್ಕಾ ತನ್ನ ಕುಟುಂಬಸ್ಥರ ಜತೆ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು.
ಅನುಷ್ಕಾ ಜತೆ ತಾಯಿ ಪ್ರಫುಲ್ಲ ರಾಜ್ ಶೆಟ್ಟಿ, ಸಹೋದರ ಗುರು ರಂಜನ್ ಶೆಟ್ಟಿ, ಮುತ್ತಪ್ಪ ರೈ ಹಾಗೂ ಪತ್ನಿ ಅನುರಾಧ ಇದ್ದರು.