ಕರಾವಳಿಯಲ್ಲಿ ಅವಧಿಗೂ ಮುನ್ನ ಫಲ ನೀಡಿದ ಮರಗಳು, ತಜ್ಞರ ಅಭಿಪ್ರಾಯವೇನು?
ಮಂಗಳೂರು, ಡಿಸೆಂಬರ್ 07: "ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು..." ಎಂಬ ಹಾಡನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ ಈಗ ಕರಾವಳಿಯಲ್ಲಿ ಮಾವಿನ ಮರ ಫಲ ನೀಡಲು ವಸಂತ ಕಾಲದ ತನಕ ಕಾಯಬೇಕಾಗಿಲ್ಲ. ಹೌದು, ಮಂಗಳೂರಿನಲ್ಲಿ ಈಗಾಗಲೇ ಹೂ ಅರಳಿದೆ. ಮೊಗ್ಗು ಕಾಯಿಯಾಗಿದೆ. ಇದಕ್ಕೆಲ್ಲಾ ಪ್ರಾಕೃತಿಕ ಅಸಮತೋಲನ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಡಿಸೆಂಬರ್ ಆರಂಭದಲ್ಲೇ ಮರಗಳು ಫಲ ನೀಡಲು ಆರಂಭಿಸಿವೆ. ಏಪ್ರಿಲ್ ನಲ್ಲಿ ಅರಳಬೇಕಾದ ಹೂವುಗಳು ಈಗಲೇ ಅರಳಿ ನಿಂತಿವೆ. ಈ ಪೃಕೃತಿಯ ಅಸಮತೋಲನ ಮುಂದೆ ನಡೆಯಲಿರುವ ಗಂಡಾಂತರದ ಮುನ್ಸೂಚನೆಯಾ? ಅನ್ನುವ ಅನುಮಾನ ಜನರನ್ನು ಕಾಡತೊಡಗಿದೆ.
ಏಪ್ರಿಲ್ ತಿಂಗಳಲ್ಲಿ ಅರಳಬೇಕಾದ ಯೆಲ್ಲೊ ಕಾಟನ್ ಹೂವು ಮಂಗಳೂರಿನಲ್ಲಿ ಈಗಲೇ ಅರಳಿವೆ. ಮಾವಿನ ಮರದಲ್ಲಿ ಮಿಡಿ ಮಾವಿನಕಾಯಿ ಬಿಟ್ಟಿದೆ. ಮಾರ್ಚ್, ಏಪ್ರಿಲ್ ನಲ್ಲಿ ಕಾಣಸಿಗಬೇಕಾಗಿದ್ದ ಈ ದೃಶ್ಯಗಳು ಕರಾವಳಿಯಲ್ಲಿ ಈ ಬಾರಿ ಮಾತ್ರ ಡಿಸೆಂಬರ್ ಆರಂಭದಲ್ಲೇ ಕಾಣಸಿಗುತ್ತಿವೆ.
ಮಾರ್ಚ್ ಏಪ್ರಿಲ್ ನಲ್ಲಿ ರಸ್ತೆ ಬದಿಯ ಮರಗಳಲ್ಲಿ ಚಂದವಾಗಿ ಕಾಣುತ್ತಿದ್ದ ಯೆಲ್ಲೋ ಕಾಟನ್ ಹೂವುಗಳು ಈ ಬಾರಿ ಅತ್ಯಂತ ಬೇಗವಾಗಿ ಅರಳಿ ಉದುರಿ ಹೋಗಿದೆ. ಮುಂದೆ ಓದಿ...

ಫಲ ನೀಡತೊಡಗಿದ ಮರಗಳು
ಮಾರ್ಚ್ ತಿಂಗಳಲ್ಲಿ ಕಾಯಿ ಕೊಡಬೇಕಾಗಿದ್ದ ಮಾವಿನ ಮರಗಳು ಈಗಾಗಲೇ ಹೂಬಿಟ್ಟು ಫಲ ನೀಡತೊಡಗಿವೆ. ಹವಾಮಾನ ವೈಪರೀತ್ಯದಿಂದಾಗಿ ಈ ಬದಲಾವಣೆ ಆಗುತ್ತಿದೆಯಾದರೂ ಇಷ್ಟು ವೇಗದ ಬದಲಾವಣೆ ಹಿಂದೆ ಭಾರೀ ಪ್ರಾಕೃತಿಕ ಅಸಮತೋಲನದ ಎಚ್ಚರಿಕೆದೆ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ಬರಗಾಲಕ್ಕೆ ತುತ್ತಾಗುವ ಎಚ್ಚರಿಕೆ
ಹವಾಮಾನ ವೈಪರೀತ್ಯದಿಂದ ಈ ಘಟನೆಗಳು ಸಂಭವಿಸುತ್ತಿವೆಯಾದರೂ ಈ ಬಾರಿ ಮಳೆಗಾಲದ ಅವಧಿ ಕಡಿಮೆಯಾಗಿ ಶಾಶ್ವತ ಜಲ ಸಮಸ್ಯೆಗೆ ತುತ್ತಾಗುವ ಹಾಗೂ ಭಾರೀ ಪ್ರಮಾಣದ ಭೂಕುಸಿತ, ಜಲ ಸ್ಫೋಟಗಳನ್ನು ಕಂಡಿದ್ದ ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶಗಳು ಬರಗಾಲಕ್ಕೆ ತುತ್ತಾಗುವ ಎಚ್ಚರಿಕೆಯನ್ನು ಪರಿಸರವಾದಿಗಳು ನೀಡುತ್ತಿದ್ದಾರೆ.

ಆಶ್ಚರ್ಯಕರ ರೀತಿ ಬದಲಾವಣೆ
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಹೊಳೆ-ನದಿಗಳು ಬತ್ತಿ ಹೋಗುತ್ತಿದ್ದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಆಶ್ಚರ್ಯಕರ ರೀತಿ ಬದಲಾವಣೆಯಾಗುತ್ತಿದೆ. ಬಿರು ಬೇಸಿಗೆಯಲ್ಲಿ ನದಿಗಳು ಬರಡಾಗುವ ಸಾಧ್ಯತೆಗಳಿವೆ.

ಜಲ ಮೂಲಗಳು ಬತ್ತಿ ಹೋಗಿವೆ
ಈಗಾಗಲೇ ಜಲಪಾತಗಳು, ಜಲ ಮೂಲಗಳು ಬತ್ತಿ ಹೋಗಿದ್ದು, ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶ ಒಣಗಿ ಹೋಗಿದೆ. ಶೀಘ್ರದಲ್ಲೇ ಕಾಡ್ಗಿಚ್ಚು ಭೂತ ಪಶ್ಚಿಮ ಘಟ್ಟವನ್ನು ಅಪೋಶನ ತೆಗೆದುಕೊಳ್ಳಬಹುದು ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications