ಕರಾವಳಿಯಲ್ಲಿ ಅವಧಿಗೂ ಮುನ್ನ ಫಲ ನೀಡಿದ ಮರಗಳು, ತಜ್ಞರ ಅಭಿಪ್ರಾಯವೇನು?
ಮಂಗಳೂರು, ಡಿಸೆಂಬರ್ 07: "ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು..." ಎಂಬ ಹಾಡನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ ಈಗ ಕರಾವಳಿಯಲ್ಲಿ ಮಾವಿನ ಮರ ಫಲ ನೀಡಲು ವಸಂತ ಕಾಲದ ತನಕ ಕಾಯಬೇಕಾಗಿಲ್ಲ. ಹೌದು, ಮಂಗಳೂರಿನಲ್ಲಿ ಈಗಾಗಲೇ ಹೂ ಅರಳಿದೆ. ಮೊಗ್ಗು ಕಾಯಿಯಾಗಿದೆ. ಇದಕ್ಕೆಲ್ಲಾ ಪ್ರಾಕೃತಿಕ ಅಸಮತೋಲನ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಡಿಸೆಂಬರ್ ಆರಂಭದಲ್ಲೇ ಮರಗಳು ಫಲ ನೀಡಲು ಆರಂಭಿಸಿವೆ. ಏಪ್ರಿಲ್ ನಲ್ಲಿ ಅರಳಬೇಕಾದ ಹೂವುಗಳು ಈಗಲೇ ಅರಳಿ ನಿಂತಿವೆ. ಈ ಪೃಕೃತಿಯ ಅಸಮತೋಲನ ಮುಂದೆ ನಡೆಯಲಿರುವ ಗಂಡಾಂತರದ ಮುನ್ಸೂಚನೆಯಾ? ಅನ್ನುವ ಅನುಮಾನ ಜನರನ್ನು ಕಾಡತೊಡಗಿದೆ.
ಏಪ್ರಿಲ್ ತಿಂಗಳಲ್ಲಿ ಅರಳಬೇಕಾದ ಯೆಲ್ಲೊ ಕಾಟನ್ ಹೂವು ಮಂಗಳೂರಿನಲ್ಲಿ ಈಗಲೇ ಅರಳಿವೆ. ಮಾವಿನ ಮರದಲ್ಲಿ ಮಿಡಿ ಮಾವಿನಕಾಯಿ ಬಿಟ್ಟಿದೆ. ಮಾರ್ಚ್, ಏಪ್ರಿಲ್ ನಲ್ಲಿ ಕಾಣಸಿಗಬೇಕಾಗಿದ್ದ ಈ ದೃಶ್ಯಗಳು ಕರಾವಳಿಯಲ್ಲಿ ಈ ಬಾರಿ ಮಾತ್ರ ಡಿಸೆಂಬರ್ ಆರಂಭದಲ್ಲೇ ಕಾಣಸಿಗುತ್ತಿವೆ.
ಮಾರ್ಚ್ ಏಪ್ರಿಲ್ ನಲ್ಲಿ ರಸ್ತೆ ಬದಿಯ ಮರಗಳಲ್ಲಿ ಚಂದವಾಗಿ ಕಾಣುತ್ತಿದ್ದ ಯೆಲ್ಲೋ ಕಾಟನ್ ಹೂವುಗಳು ಈ ಬಾರಿ ಅತ್ಯಂತ ಬೇಗವಾಗಿ ಅರಳಿ ಉದುರಿ ಹೋಗಿದೆ. ಮುಂದೆ ಓದಿ...

ಫಲ ನೀಡತೊಡಗಿದ ಮರಗಳು
ಮಾರ್ಚ್ ತಿಂಗಳಲ್ಲಿ ಕಾಯಿ ಕೊಡಬೇಕಾಗಿದ್ದ ಮಾವಿನ ಮರಗಳು ಈಗಾಗಲೇ ಹೂಬಿಟ್ಟು ಫಲ ನೀಡತೊಡಗಿವೆ. ಹವಾಮಾನ ವೈಪರೀತ್ಯದಿಂದಾಗಿ ಈ ಬದಲಾವಣೆ ಆಗುತ್ತಿದೆಯಾದರೂ ಇಷ್ಟು ವೇಗದ ಬದಲಾವಣೆ ಹಿಂದೆ ಭಾರೀ ಪ್ರಾಕೃತಿಕ ಅಸಮತೋಲನದ ಎಚ್ಚರಿಕೆದೆ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ಬರಗಾಲಕ್ಕೆ ತುತ್ತಾಗುವ ಎಚ್ಚರಿಕೆ
ಹವಾಮಾನ ವೈಪರೀತ್ಯದಿಂದ ಈ ಘಟನೆಗಳು ಸಂಭವಿಸುತ್ತಿವೆಯಾದರೂ ಈ ಬಾರಿ ಮಳೆಗಾಲದ ಅವಧಿ ಕಡಿಮೆಯಾಗಿ ಶಾಶ್ವತ ಜಲ ಸಮಸ್ಯೆಗೆ ತುತ್ತಾಗುವ ಹಾಗೂ ಭಾರೀ ಪ್ರಮಾಣದ ಭೂಕುಸಿತ, ಜಲ ಸ್ಫೋಟಗಳನ್ನು ಕಂಡಿದ್ದ ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶಗಳು ಬರಗಾಲಕ್ಕೆ ತುತ್ತಾಗುವ ಎಚ್ಚರಿಕೆಯನ್ನು ಪರಿಸರವಾದಿಗಳು ನೀಡುತ್ತಿದ್ದಾರೆ.

ಆಶ್ಚರ್ಯಕರ ರೀತಿ ಬದಲಾವಣೆ
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಹೊಳೆ-ನದಿಗಳು ಬತ್ತಿ ಹೋಗುತ್ತಿದ್ದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಆಶ್ಚರ್ಯಕರ ರೀತಿ ಬದಲಾವಣೆಯಾಗುತ್ತಿದೆ. ಬಿರು ಬೇಸಿಗೆಯಲ್ಲಿ ನದಿಗಳು ಬರಡಾಗುವ ಸಾಧ್ಯತೆಗಳಿವೆ.

ಜಲ ಮೂಲಗಳು ಬತ್ತಿ ಹೋಗಿವೆ
ಈಗಾಗಲೇ ಜಲಪಾತಗಳು, ಜಲ ಮೂಲಗಳು ಬತ್ತಿ ಹೋಗಿದ್ದು, ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶ ಒಣಗಿ ಹೋಗಿದೆ. ಶೀಘ್ರದಲ್ಲೇ ಕಾಡ್ಗಿಚ್ಚು ಭೂತ ಪಶ್ಚಿಮ ಘಟ್ಟವನ್ನು ಅಪೋಶನ ತೆಗೆದುಕೊಳ್ಳಬಹುದು ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications