ಮಂಗಳೂರಿನಲ್ಲಿ ನೀರೆಯರಿಗಾಗಿ ಸೀರೆಯಲ್ಲೇ ಓಡುವ ಸ್ಪರ್ಧೆ!
ಮಂಗಳೂರು, ಜುಲೈ 27: ಇತ್ತೀಚಿನ ದಿನಗಳಲ್ಲಿ ದೇಶದಲ್ಲೆಲ್ಲಾ ಫಿಟ್ ನೆಸ್ ನದ್ದೇ ಹವಾ. ಎಲ್ಲರೂ ಫಿಟ್ ನೆಸ್ ಕಾನ್ಶಿಯಸ್ ಆಗಿ ಬಿಟ್ಟಿದ್ದಾರೆ. ಪ್ರಧಾನಿ ಮೋದಿ ಆದಿಯಾಗಿ ಸಚಿವರು, ಕ್ರೀಡಾಪಟುಗಳು, ಚಿತ್ರ ತಾರೆಯರು ಫಿಟ್ ನೆಸ್ ಚಾಲೆಂಜ್ ಹಾಕುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.
ಆದರೆ ಸಾಮಾನ್ಯವಾಗಿ ಸೀರೆಯುಟ್ಟು ಮನೆಗೆಲಸದಲ್ಲೇ ತಲ್ಲೀನರಾಗಿರುವ ಮಹಿಳೆಯರಲ್ಲಿ ಫಿಟ್ ನೆಸ್ ಬಗ್ಗೆ ಜಾಗೃತಿ ಮೂಡುವುದಾದರೂ ಯಾವಾಗ? ಈ ಹಿನ್ನೆಲೆಯಲ್ಲಿ ಆಗಸ್ಟ್ 12 ರಂದು ಮಂಗಳೂರಿನಲ್ಲಿ ಸೀರೆಯುಟ್ಟ ನಾರಿಯರಿಗಾಗಿ ಓಟ - ನಡಿಗೆ ಹಮ್ಮಿಕೊಳ್ಳಲಾಗಿದೆ. ಮಂಗಳೂರು ಮಹಿಳಾ ರನ್ ತಂಡ ನಗರದಲ್ಲಿ ಮೊದಲ ಬಾರಿಗೆ ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಸೀರೆಯ ನಾರಿಯರಿಗೆ ಜಾಗಿಂಗ್ , ವಾಕಿಂಗ್ ಸ್ಥೈರ್ಯ ತುಂಬಲು ಓಟ ಹಮ್ಮಿಕೊಳ್ಳಲಾಗಿದೆ.
ಈಗ ಮಹಿಳೆಯರು ಕೂಡ ಪುರುಷರ ರೀತಿ ದೈಹಿಕ ಫಿಟ್ ನೆಸ್ ಕಾಪಾಡಿಕೊಳ್ಳಲು ಜಾಂಗಿಂಗ್, ವಾಕಿಂಗ್ ಮಾಡುತ್ತಿದ್ದಾರೆ. ಆದರೆ ಜಾಂಗಿಂಗ್ ಮತ್ತು ವಾಂಕಿಂಗ್ ತೆರಳುವ ಮಹಿಳೆಯರು ಆಧುನಿಕ ಟ್ರ್ಯಾಕ್ ಸೂಟ್, ಟಿ ಶರ್ಟ್ ಧರಿಸಿ ತೆರಳುತ್ತಾರೆ.

ಆದರೆ ಸೀರೆಯನ್ನು ಧರಿಸುವ ಮಹಿಳೆಯರು ಮಾತ್ರ ಇದೆಲ್ಲದರಿಂದ ವಿಮಖರಾಗಿದ್ದು, ಆಧುನಿಕ ದಿರಿಸು ಇಲ್ಲದಿದ್ದರೆ ಜಾಗಿಂಗ್ ತೆರಳಿದರೆ ಯಾರಾದರೂ ಕೀಳಾಗಿ ಭಾವಿಸಬಹುದು ಎನ್ನುವ ಮುಜುಗರವೂ ಮಹಿಳೆಯರಲ್ಲಿ ಇರುತ್ತದೆ. ಹೀಗಾಗಿ ಆನೇಕ ಮಹಿಳೆಯರು ಇಂತಹ ಓಟ ಅಥವಾ ನಡಿಗೆಯತ್ತ ಆಸಕ್ತಿ ತೋರುವುದಿಲ್ಲ.
ಇಂತಹ ಮಹಿಳೆಯರಿಗಾಗಿಯೇ ಮಂಗಳೂರು ಮಹಿಳಾ ರನ್ ತಂಡ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ಮಂಗಳೂರಿನಲ್ಲಿ ಆಗಸ್ಟ್ 12 ರಂದು ಸೀರೆ ತೊಟ್ಟ ಮಹಿಳೆಯರ ಓಟ ಅಥವಾ ನಡಿಗೆ ಆಯೋಜಿಸಲಾಗಿದೆ.
ನಗರದ ಮಹತ್ಮಾಗಾಂಧಿ ಉದ್ಯಾನವನದ ಸಮೀಪದ ಮಣ್ಣಗುಡ್ಡೆ ರಸ್ತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಮಹಿಳೆಯರ ಸೀರೆ ನಡೆ ಮತ್ತು ಸೀರೆ ಓಟಗಳಿಗೆ 2 ಕಿಲೋ ಮೀಟರ್ ದೂರ ನಿಗದಿ ಮಾಡಲಾಗಿದೆ. ಸೀರೆ ನಡೆ ಮತ್ತು
ಓಟದಲ್ಲಿ ಪಾಲ್ಗೊಂಡು ಉತ್ತಮ ಪ್ರತಿಭೆ ತೋರಿಸಿದವರಿಗೆ ಆಕರ್ಷಕ ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಪಾಲ್ಗೊಂಡ ಎಲ್ಲಾ ಸ್ಪರ್ಧಾಳುಗಳಿಗೆ ಪದಕ ಹಾಗು ಪ್ರಮಾಣ ಪತ್ರ ನೀಡಲು ಆಯೋಜಕರು ತೀರ್ಮಾನಿಸಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications