ಕರಾವಳಿ ಭಾಗದ ಜನರಿಗೆ ಸಿಹಿ ಸುದ್ದಿ ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

ಮಂಗಳೂರು,

ಅ.
13:
ಮಂಗಳೂರು,
ಉಡುಪಿ
ಜಿಲ್ಲಾ
ಪ್ರವಾಸದಲ್ಲಿರುವ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಕರಾವಳಿ
ಭಾಗದ
ಜನರಿಗೆ
ಸಿಹಿ
ಸುದ್ದಿಯೊಂದನ್ನು
ಕೊಟ್ಟಿದ್ದಾರೆ.
ಕಾನೂನಿನ
ತೊಡಕುಗಳಿಂದಾಗಿ
ರಾಜ್ಯದಲ್ಲಿ
ಪ್ರವಾಸೋದ್ಯಮ
ನಿರೀಕ್ಷಿತ
ಮಟ್ಟದಲ್ಲಿ
ಅಭಿವೃದ್ಧಿ
ಆಗುತ್ತಿಲ್ಲ
ಎಂಬ
ಆರೋಪಗಳಿವೆ.
ಪಕ್ಕದ
ರಾಜ್ಯಗಳನ್ನು
ಗಮನಿಸಿದರೆ
ನಮ್ಮಲ್ಲಿ
ಅಷ್ಟು
ಪ್ರಮಾಣದಲ್ಲಿ
ಪ್ರವಾಸೋದ್ಯಮ
ಕ್ಷೇತ್ರ
ಬೆಳವಣಿಗೆ
ಆಗಿಲ್ಲ.
ಎಲ್ಲ
ರೀತಿಯ
ಪ್ರವಾಸಿ
ತಾಣಗಳಿದ್ದರೂ
ಪ್ರವಾಸಿಗರನ್ನು
ಆಕರ್ಷಿಸುವಲ್ಲಿ
ನಮ್ಮ
ರಾಜ್ಯ
ಹಿಂದಿದೆ
ಎಂಬ
ವರದಿಗಳಿವೆ.
ಹೀಗಾಗಿ
ಪ್ರವಾಸೋದ್ಯಮ
ನೀತಿಯಲ್ಲಿ
ಬದಲಾವಣೆ
ತರಲಾಗುತ್ತಿದೆ
ಎಂಬ
ಮಾಹಿತಿಯಿದೆ.

id="toptextpromo">
id='are-slot-1'
class='oiad
oi-axt
oiadv'>

ಮಂಗಳೂರು

ಪ್ರವಾಸದಲ್ಲಿರುವ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಅವರು
ಕರಾವಳಿ
ಭಾಗದಲ್ಲಿನ
ಜನರಿಗೆ
ಸಿಹಿ
ಸುದ್ದಿ
ಕೊಟ್ಟಿದ್ದಾರೆ.
ಮೀನುಗಾರಿಕೆ
ಹಾಗೂ
ಪ್ರವಾಸಿಗರನ್ನು
ಆಕರ್ಷಿಸುವುದರಿಂದ
ಭಾಗದ
ಅಭಿವೃದ್ಧಿ
ಆಗಲಿದೆ.
ಆದರೆ
ಭಾಗದಲ್ಲಿ
ಪ್ರವಾಸಿಗರನ್ನು
ಆಕರ್ಷಿಸಲು
ಹಲವು
ನಿಬಂಧನೆಗಳಿವೆ.
ಹೀಗಾಗಿ
ಪಕ್ಕದ
ರಾಜ್ಯಗಳಿಗೆ
ಪ್ರವಾಸಿಗರು
ತೆರಳುತ್ತಾರೆ.
ನಿಬಂಧನೆಗಳನ್ನು
ತೆರವುಗೊಳಿಸಲು
ಸರ್ಕಾರ
ಮುಂದಾಗಿದೆ.
ವಿಷಯವನ್ನು
ಸ್ವತಃ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಮಂಗಳೂರಿನಲ್ಲಿ
ತಿಳಿಸಿದ್ದಾರೆ.
ಮೂಲಕ
ಕರಾವಳಿ
ಭಾಗದ
ಜನರಿಗೆ
ಸಂತಸದ
ಸುದ್ದಿ
ಕೊಟ್ಟಿದ್ದಾರೆ.
ಸಿಎಂ
ಕೊಟ್ಟಿರುವ
ಭರವಸೆ
ಏನು?

id='are-slot-2'
class='oiad
oi-axt
oiadv'>

ಕರಾವಳಿ ಭಾಗಕ್ಕೆ ಸಿಎಂ ಕೊಟ್ಟ ಭರವಸೆ!

ಕರಾವಳಿ ಭಾಗಕ್ಕೆ ಸಿಎಂ ಕೊಟ್ಟ ಭರವಸೆ!

"ರಾಜ್ಯದ ಕರಾವಳಿ ದಂಡೆಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ನಡೆಸದಂತೆ ವಿಧಿಸಲಾಗಿರುವ ನಿರ್ಬಂಧವನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬುಧವಾರ ಉಡುಪಿ ಜಿಲ್ಲೆಯ ಕುಂತಲನಗರದಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘ ಆಯೋಜಿಸಿದ್ದ ಕನ್ವೆನ್ಷನ್ ಸೆಂಟರ್ ಮತ್ತು ತರಬೇತಿ ಕೇಂದ್ರ ಕೇಂದ್ರದ ಉದ್ಘಾಟನೆ ಮಾಡಿದ ಬಳಿಕ ಉದ್ಯಮಿಗಳೊಂದಿಗೆ ನಡೆಸಿದ 'ಚಾಯ್ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ್ದಾರೆ.

ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿ!

ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿ!

ನಮ್ಮ ಪಕ್ಕದ ರಾಜ್ಯಗಳಾದ ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲಾಗದೆ. ಆ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳುತ್ತಿವೆ. ಆದರೆ ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಎಷ್ಟು ಸದ್ಬಳಕೆ ಮಾಡಿಕೊಳ್ಳಬೇಕಿತ್ತೋ ಅಷ್ಟು ಆಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇದನ್ನು ಸರಿ ಮಾಡಲಾಗುವುದು. ಅದಕ್ಕಾಗಿ ಹಲವು ನೂತನ ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ. ಜೊತೆಗೆ ಕಾನೂನಿನಲ್ಲಿಯೂ ಬದಲಾವಣೆ ಮಾಡುತ್ತೇವೆ. ಆ ಮೂಲಕ ಕರಾವಳಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಮೂಲಕ ಆದಾಯ ಬರುವಂತೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿರುವ ಕಾನೂನು!

ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿರುವ ಕಾನೂನು!

ಕರಾವಳಿ ದಂಡೆಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಸದಂತೆ ನಿರ್ಬಂಧ ಹಾಕಿರುವ ಕಾನೂನು ರಾಜ್ಯದಲ್ಲಿ ಜಾರಿಯಲ್ಲಿದೆ. ಅದರಿಂದ ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕೆ ಅಡ್ಡಿಯಾಗುತ್ತದೆ ಎಂಬ ಆರೋಪವೂ ಇದೆ. ಹೀಗಾಗಿ ಈ ಕಾನೂನನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಪ್ರವಾಸೋದ್ಯಮ ನೀತಿಯಲ್ಲಿಯೂ ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗುವುದು. ಉದ್ಯೋಗ ಆಧಾರಿತ ಪ್ರೋತ್ಸಾಹ ನೀತಿಯನ್ನು ಜಾರಿ ಗೊಳಿಸಲು ಯುವ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ಪೂರಕವಾದ ವಾತಾವರಣ ಸೃಷ್ಟಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರವಾಸೋದ್ಯಮ ನೀತಿಯಲ್ಲಿ ಬದಲಾವಣೆ!

ಪ್ರವಾಸೋದ್ಯಮ ನೀತಿಯಲ್ಲಿ ಬದಲಾವಣೆ!

2020 ರಿಂದ 2025ರವರೆಗೆ ಅನ್ವಯವಾಗುವಂತೆ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಆಗ ಪ್ರವಾಸೋದ್ಯಮ ಸಚಿವರಾಗಿದ್ದರು. ಆದರೆ ಕೊರೊನಾ ವೈರಸ್ ಹಾವಳಿಯಿಂದ ನಿರೀಕ್ಷಿತ ಮಟ್ಟದಲ್ಲಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಜೊತೆಗೆ ಆದಾಯವು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಹೀಗಾಗಿ ಹಲವು ತಿದ್ದುಪಡಿ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂಬ ಮಾಹಿತಿಯಿದೆ. ಅದರೊಂದಿಗೆ ಪ್ರವಾಸಿ ತಾಣಗಳಲ್ಲಿನ ನಿಬಂಧನೆಗಳನ್ನು ಸುರಕ್ಷತೆಯೊಂದಿಗೆ ತೆರವುಗೊಳಿಸಲು ಸರ್ಕಾರ ತೀರ್ಮಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+