ಕುಮಾರ್ ಬಂಗಾರಪ್ಪ ತಂದೆ ತಾಯಿಯನ್ನೇ ಹೊರ ಹಾಕಿದ್ದ -ಕಾಗೋಡು
'ರಾಜಕಾರಣದಲ್ಲಿ ಸಂತೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಕುಮಾರ್ ಬಂಗಾರಪ್ಪ ತಂದೆ ತಾಯಿಯನ್ನು ಹೊರ ಹಾಕಿದ್ದ ಎಂದು ಅವರಪ್ಪ (ಎಸ್ ಬಂಗಾರಪ್ಪ) ನೇ ನನಗೆ ಹೇಳಿದ್ದ," ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು, ಮಾರ್ಚ್ 9:'ರಾಜಕಾರಣದಲ್ಲಿ ಸಂತೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಕುಮಾರ್ ಬಂಗಾರಪ್ಪ ತಂದೆ ತಾಯಿಯನ್ನು ಹೊರ ಹಾಕಿದ್ದ ಎಂದು ಅವರಪ್ಪ (ಎಸ್ ಬಂಗಾರಪ್ಪ) ನೇ ಹೇಳಿದ್ದ," ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕುಮಾರ್ ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಮಂಗಳೂರಿಗೆ ಆಗಮಿಸಿದ ಕಂದಾಯ ಸಚಿವರು, 'ಕಾಂಗ್ರೆಸ್ ನಲ್ಲಿ ಅನೇಕ ನಾಯಕರಿದ್ದಾರೆ. ಪಕ್ಷ ಸಿದ್ಧಾಂತದ ಆಧಾರದಲ್ಲಿ ರಾಜಕಾರಣ ಮಾಡಬೇಕು. ಕುಮಾರ್ ಬಂಗಾರಪ್ಪ ಪಕ್ಷ ತೊರೆದರೆ ಕಾಂಗ್ರೆಸ್ ಗೆ ಯಾವುದೇ ಹಿನ್ನಡೆ ಆಗಲ್ಲ' ಎಂದು ಹೇಳಿದ್ದಾರೆ.[ಕಾಂಗ್ರೆಸ್ ತೊರೆದ ಮಾಜಿ ಸಚಿವ ಕುಮಾರ ಬಂಗಾರಪ್ಪ]

ಇದೇ ವೇಳೆ ಎಸ್.ಎಂ. ಕೃಷ್ಣ ವಿಚಾರವಾಗಿ ಮಾತನಾಡಿದ ಅವರು, 'ಎಸ್. ಎಂ. ಕೃಷ್ಣ ಹಳಬರು. ಎಲ್ಲ ಅಧಿಕಾರಗಳನ್ನು ಅನುಭವಿಸಿದ ನಂತರ ಈಗ ಅದು ಕೊಳೆತು ಹೋಯಿತಾ..?' ಎಂದು ವ್ಯಂಗ್ಯವಾಡಿದ್ದಾರೆ.['ಕೈ' ಬಿಟ್ಟು 'ಕಮಲ' ಅಪ್ಪಿಕೊಳ್ಳಲು ಹೊರಟಿದ್ದಾರೆ ಕುಮಾರ್ ಬಂಗಾರಪ್ಪ!]
ಇತ್ತೀಚೆಗಷ್ಟೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷ ತೊರೆದಿದ್ದು ಸದ್ಯದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದೇ ರೀತಿ ಸದ್ಯದಲ್ಲೇ ಎಸ್.ಎಂ ಕೃಷ್ಣ ಕೂಡಾ ಬಿಜೆಪಿ ಸೇರಲಿದ್ದಾರೆ.












Click it and Unblock the Notifications