ಮಂಗಳೂರು ಪಾಲಿಕೆಗೆ ನೂತನ ಆಯುಕ್ತರ ನೇಮಕ
ಮಂಗಳೂರು, ಆಗಸ್ಟ್ 6 : ಸುಮಾರು ಎರಡು ತಿಂಗಳಿನಿಂದ ತೆರವಾಗಿದ್ದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಹುದ್ದೆ ಭರ್ತಿಯಾಗಿದೆ. ಕೆಎಎಸ್ ಅಧಿಕಾರಿ ಗೋಪಾಲಕೃಷ್ಣ ಅವರನ್ನು ನೂತನ ಆಯುಕ್ತರಾಗಿ ನೇಮಕ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಮಂಗಳೂರು
ಪಾಲಿಕೆ
ಆಯುಕ್ತರಾಗಿದ್ದ
ಹೆಫ್ಸಿಬಾ
ರಾಣಿ
ಕೊರ್ಲಪಾಟಿ
ಅವರನ್ನು
ಜೂನ್
12ರಂದು
ವಿಜಯಪುರದ
ಜಿಲ್ಲಾ
ಪಂಚಾಯತ್
ಸಿಇಒ
ಆಗಿ
ವರ್ಗಾವಣೆ
ಮಾಡಲಾಗಿತ್ತು.
ತೆರವಾದ
ಸ್ಥಾನಕ್ಕೆ
ಬೇರೆಯವರ
ನೇಮಕವಾಗಿರಲಿಲ್ಲ.
ಜಂಟಿ
ಆಯುಕ್ತ
ಗೋಕುಲ್
ದಾಸ್
ನಾಯಕ್
ಪ್ರಭಾರ
ಆಯುಕ್ತರಾಗಿ
ಹೆಚ್ಚುವರಿ
ಹೊಣೆ
ನಿಭಾಯಿಸುತ್ತಿದ್ದರು.
[ಮಂಗಳೂರು
ಪಾಲಿಕೆ
ಆಯುಕ್ತರಿಗೆ
ಗನ್
ಮ್ಯಾನ್
ಭದ್ರತೆ]
ಬುಧವಾರ 49 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಹಾಸನದ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಎಚ್.ಎನ್. ಗೋಪಾಲಕೃಷ್ಣ ಅವರನ್ನು ಪಾಲಿಕೆ ಆಯುಕ್ತರಾಗಿ ನೇಮಕ ಮಾಡಿದೆ.[6 ತಿಂಗಳಿನಿಂದ ಆಯುಕ್ತರ ಹುದ್ದೆ ಖಾಲಿ]
ವರ್ಗಾವಣೆಗೊಂಡ ಇತರ ಅಧಿಕಾರಿಗಳು : ದಕ್ಷಿಣ ಕನ್ನಡದ ಅಪರ ಜಿಲ್ಲಾಧಿಕಾರಿಯಾಗಿ ಕುಮಾರ್ ನೇಮಕಗೊಂಡಿದ್ದಾರೆ. ಉಡುಪಿ ಅಪರ ಜಿಲ್ಲಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಕುಮಾರ್ ಅವರಿಂದ ತೆರವಾದ ಅವರ ಸ್ಥಾನಕ್ಕೆ ದಕ್ಷಿಣ ಕನ್ನಡದ ಅಪರ ಜಿಲ್ಲಾಧಿಕಾರಿಯಾಗಿರುವ ಸದಾಶಿವ ಪ್ರಭು ಅವರನ್ನು ನೇಮಕ ಮಾಡಲಾಗಿದೆ. [49 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರ್ಕಾರ]
ಮಂಗಳೂರು ಪಾಲಿಕೆಯ ಕಂದಾಯ ವಿಭಾಗದ ಉಪ ಆಯಕ್ತರಾಗಿದ್ದ ಕೆ. ರಾಜು ಮೊಗವೀರ ಅವರು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.