ಮಂಗಳೂರು; ಮತ್ತೆ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ದುಷ್ಕರ್ಮಿಗಳು
ಮಂಗಳೂರು, ಫೆಬ್ರವರಿ 25: ದೇವಾಲಯದ ಪರಿಸರವನ್ನು ಅಪವಿತ್ರಗೊಳಿಸು ಕೃತ್ಯಗಳು ಮಂಗಳೂರಿನಲ್ಲಿ ಮುಂದುವರೆದಿದೆ. ಬಬ್ಬುಸ್ವಾಮಿ ದೇವಾಲಯದ ಮುಂದಿನ ಕಾಣಿಕೆ ಹುಂಡಿ ಹಣ ಕದ್ದು, ಅಪವಿತ್ರಗೊಳಿಸಿದ ಘಟನೆ ನಡೆದಿದೆ.
ದಡ್ಡಲ್ ಕಾಡ್ ಎಂಬಲ್ಲಿರುವ ಕೋಟೆದ ಬಬ್ಬುಸ್ವಾಮಿ ದೇವಾಲಯದ ಮುಂದಿನ ಕಾಣಿಕೆ ಹುಂಡಿಯನ್ನು ಬುಧವಾರ ರಾತ್ರಿ ಕಳವು ಮಾಡಲಾಗಿದೆ. ಬಳಿಕ ಅದಕ್ಕೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಲಾಗಿದೆ.
ದಾವಣಗೆರೆ; ದರ್ಗಾ ಕಾಣಿಕೆ ಹುಂಡಿಗೆ ಬೆಂಕಿ, ನೋಟುಗಳು ಭಸ್ಮ
ವಿಗ್ರಹಾರಾಧನೆ, ದೇವರ ಶಕ್ತಿಯನ್ನು ನಿಂದಿರುವ ಬರಹವಿರುವ ಚೀಟಿಗಳನ್ನು ದುಷ್ಕರ್ಮಿಗಳು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಗುರುವಾರ ಬೆಳಗ್ಗೆ ಸ್ಥಳೀಯರು ಇದನ್ನು ಗಮನಿಸಿದ್ದು, ಉರ್ವ ಪೊಲೀಸರ ಗಮನಕ್ಕೆ ತಂದರು.
ಕೊರಗಜ್ಜ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್, ಅವಹೇಳನಕಾರಿ ಬರಹ
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಸಹ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಜೊತೆ ಚರ್ಚೆ ನಡೆಸಿದರು.
ಹುಂಡಿ ಕಾಣಿಕೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದ ತಿರುಪತಿ!
ಮಂಗಳೂರಿನಲ್ಲಿ ಇಂತಹ ಕೃತ್ಯ ಇದೇ ಮೊದಲಲ್ಲ. ಕೊಟ್ಟಾರದ ಬಬ್ಬುಸ್ವಾಮಿ, ಅತ್ತಾವರದ ಕೊರಗಜ್ಜನ ಕಟ್ಟೆಯಲ್ಲಿ ಕಾಣಿಕೆ ಹುಂಡಿಗಳನ್ನು ಅಪವಿತ್ರಗೊಳಿಸಿದ ಪ್ರಕರಣಗಳು ಹಿಂದೆ ನಡೆಸಿದ್ದವು. ಇಂಹತ 4ನೇ ಪ್ರಕರಣವಿದಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.