ಜೆಸಿಬಿ ಯಂತ್ರ ಚಲಾಯಿಸಿ ಅಚ್ಚರಿಗೆ ಕಾರಣರಾದ ಸಚಿವ ಖಾದರ್
ಮಂಗಳೂರು, ಆಗಸ್ಟ್ 14 : ಮುಡಿಪು ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಷೇತ್ರದ ಶಾಸಕರೂ ಅಹಾರ ಸಚಿವರೂ ಆದ ಯು.ಟಿ. ಖಾದರ್ ಅವರು ಬಂದಿದ್ದರು.
ಸಚಿವರ ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿ, ಅಲ್ಲಿದ್ದ ಮಾಧ್ಯಮದವರೊಂದಿಗೆ ಸಚಿವರಿಂದ ಸಂದೇಶ ನೀಡುವುದು ಅಲ್ಲಿನ ಕಾರ್ಯಕರ್ತರ ಪ್ಲಾನ್ ಅಗಿತ್ತು. ಅದರೆ ಸಚಿವರು ಮಾಡಿದ್ದೇ ಬೇರೆ!

ಸಚಿವರೇ ಜೆಸಿಬಿ ಯಂತ್ರ ಹತ್ತಿ ಸ್ವತಃ ತಾವೇ ಜೆ.ಸಿ.ಬಿ ವಾಹನ ಚಲಾಯಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಅಲ್ಲಿ ನೆರೆದಿದ್ದ ಜನರು ತಮ್ಮ ಶಾಸಕರ ಸರಳತೆಯನ್ನು ಕಂಡು ಖುಷಿಪಟ್ಟರು.
ದೂರದಿಂದ ಸಚಿವರ ಮುಖ ಪರಿಚಯ ಸ್ಪಷ್ಟವಾಗಿ ತಿಳಿಯದ ವ್ಯಕ್ತಿಯೊಬ್ಬರು, "ಇದೇನು? ಜೆ.ಸಿ.ಬಿ ವಾಹನ ಡ್ರೈವರ್ ಇಷ್ಟು ಟಿಪ್ ಟಾಪ್ ಆಗಿದ್ದಾರೆ ಅಲ್ವಾ?" ಎಂದು ಹೇಳಿದ್ದನ್ನು ಕಂಡು ಮತ್ತೊಬ್ಬರು ಹೇಳಿದರು: "ಅದು ಜೆ.ಸಿ.ಬಿ ಡ್ರೈವರ್ ಅಲ್ಲ, ನಮ್ಮ ಮಿನಿಸ್ಟರ್ ಖಾದರ್ ಸಾಹೇಬ್ರು".
ಯು.ಟಿ. ಖಾದರ್ ಅವರ ಸರಳತೆ ಇದೇ ಮೊದಲೇನಲ್ಲ. ಹಿಂದೆಯೂ ಹಲವು ಈ ರೀತಿಯ ಘಟನೆಗಳಿಗೆ ಸಚಿವರು ಉದಾಹರಣೆಯಾಗಿದ್ದರು. ರಾಜ್ಯದ ಸಚಿವರೊಬ್ಬರು ಜೆಸಿಬಿ ಯಂತ್ರ ವಾಹನ ಹತ್ತಿ ಕಾಮಗಾರಿಗೆ ಚಾಲನೆ ನೀಡಿದ್ದು ಅಚ್ಚರಿಗೆ ಕಾರಣವಾಯಿತು.











Click it and Unblock the Notifications