ಮಂಗಳೂರಿನ ಸೆಂಟ್ರಲ್ ರೈಲ್ವೆ ಆವರಣದಲ್ಲಿ ಓಡಾಡಲು ಅಡ್ಡಿಯಿಲ್ಲ

ಮಂಗಳೂರು, ಅಕ್ಟೋಬರ್, 03: ನಗರದ ಸೌತ್ ಕೆನರಾ ಜಿಲ್ಲಾ ಕೋಆಪರೇಟಿವ್ ಹಾಸ್ಪಿಟಲ್ ಅಂಡ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಸೊಸೈಟಿ ಅಕ್ಟೋಬರ್ 2ರ ಗಾಂಧಿ ಜಯಂತಿ ಅಂಗವಾಗಿ ನಗರದ ಸೆಂಟ್ರಲ್ ರೈಲ್ವೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾಕಾರ್ಯ ಯಶಸ್ವಿಯಾಗಿ ನೆರವೇರಿದೆ.

ನಗರದ ಸೆಂಟ್ರಲ್ ರೈಲ್ವೆ ಆವರಣದಲ್ಲಿ ಆರಂಭಿಸಿದ್ದ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ರೈಲ್ವೇ ಸೀನಿಯರ್ ಎಂಜಿನಿಯರ್ ರಾಜ್ ಗೋಪಾಲ್, ಕೋ ಆಪರೇಟಿವ್ ಆಸ್ಪತ್ರೆಯ ಅಧ್ಯಕ್ಷ ಹರಿದಾಸ್, ಉಪಾಧ್ಯಕ್ಷ ಮಾಧವ ಸುವರ್ಣ ಹಾಗೂ ನಿರ್ದೇಶಕರಾದ ಯಶವಂತ ಮರೋಳಿ ಮುಂತಾದ ಗಣ್ಯರು ಚಾಲನೆ ನೀಡಿದರು.[ಗಾಂಧೀಜಿ ಅವರ ಕನಸು ಕರ್ನಾಟಕದಲ್ಲಿ ನನಸು]

Mangaluru South canara District Co-Operative Research Society clean Central Railway place

ಸ್ವಚ್ಛತಾ ಕಾರ್ಯಕ್ಕೆ ದಕ್ಷಿಣ ರೈಲ್ವೇ ಪಾಲ್ಘಾಟ್ ಡಿವಿಜನ್ ಸದಸ್ಯರು, ಅಧಿಕಾರಿಗಳು ಕೂಡ ಸಂಪೂರ್ಣ ಸಹಕಾರ ನೀಡಿದ್ದು ಇವರ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾದರು.

ಸ್ವಚ್ಛತಾ ಕಾರ್ಯ ಸಂದರ್ಭದಲ್ಲಿ ಬಹಳ ಶ್ರದ್ಧೆಯಿಂದ ಭಾಗವಹಿಸಿದ ಸೌತ್ ಕೆನರಾ ಜಿಲ್ಲಾ ಕೋ-ಆಪರೇಟಿವ್ ಹಾಸ್ಪಿಟಲ್ ಅಂಡ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಸೊಸೈಟಿ ಸದಸ್ಯರು ಜನರಲ್ಲಿ ಸ್ವಚ್ಛತೆಯ ಕಡೆ ಅರಿವು ಮೂಡಿಸಿದರು. ತಮ್ಮ ಸುತ್ತಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+