ಮಂಗಳೂರು ದಸರಾ; ವಿದ್ಯುತ್ ದೀಪಗಳಿಂದ ಝಗಮಗಿಸಿದ ಕಡಲನಗರಿ
ಮಂಗಳೂರು, ಸೆಪ್ಟೆಂಬರ್, 25: ಮಂಗಳೂರಿನಲ್ಲೂ ದಸರಾ ಉತ್ಸವಕ್ಕೆ ಅದ್ದೂರಿಯಾಗಿ ಸಿದ್ಧತೆಗಳು ನಡೆದಿದೆ. ದಸರಾ ನಡೆಯಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಕಲ ಸಿದ್ದತೆಗಳು ನಡೆದಿದೆ. ನಾಳೆಯಿಂದ 9 ದಿನಗಳ ಕಾಲ ನವದುರ್ಗೆಯರ ಆರಾಧನೆ ಹಾಗೂ ದಸರಾಕ್ಕೆ ಅದ್ಧೂರಿ ಚಾಲನೆ ದೊರೆಯಲಿದೆ.
ನಾಡಹಬ್ಬ ದಸರಾಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಿದ್ಧಗೊಳ್ಳುತ್ತಿದೆ. ಅದರಂತೆಯೇ ಬಂದರು ನಗರಿ ಮಂಗಳೂರಿನಲ್ಲೂ ದಸರಾ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯಲಿರುವ ದಸರಾ ಮಹೋತ್ಸವಕ್ಕೆ ಈಗಾಗಲೇ ಎಲ್ಲಾ ತಯಾರಿಗಳು ಪೂರ್ಣಗೊಂಡಿದೆ. ಸುಣ್ಣ ಬಣ್ಣ ಬಳಿಯುವುದು, ವಿದ್ಯುತ್ ದೀಪಾಲಂಕಾರ ಸೇರಿದಂತೆ ಇತರ ಅಲಂಕಾರಗಳು ಪೂರ್ಣಗೊಂಡಿದೆ. ಸೆಪ್ಟೆಂಬರ್ 26ರ ಬೆಳಗ್ಗೆ 11.15ಕ್ಕೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಸುಂದರ ಕಲಾಕೃತಿಗಳೊಂದಿಗೆ ನಿರ್ಮಾಣವಾದ ಸಭಾಂಗಣದಲ್ಲಿ ಗಣಪತಿ, ಶಾರದಾಮಾತೆ, ನವದುರ್ಗೆಯರು, ಆದಿಮಾಯೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಇದರೊಂದಿಗೆ ನವರಾತ್ರಿ ಹಾಗೂ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಮಂಗಳೂರು ದಸರಾ; 300ರೂಪಾಯಿನಲ್ಲಿ ಮಂಗಳೂರಿನ ಒಂಭತ್ತು ದೇವಸ್ಥಾನಗಳ ದರ್ಶನ
ಮಂಗಳೂರಿನಲ್ಲೂ
ಕಳೆಗಟ್ಟಿದ
ದಸರಾ
ಉತ್ಸವ
ಕುದ್ರೋಳಿ
ಶ್ರೀ
ಗೋಕರ್ಣನಾಥ
ಕ್ಷೇತ್ರದ
ವತಿಯಿಂದ
ನಡೆಯುವ
ಮಂಗಳೂರು
ದಸರಾ-2022
ಉದ್ಘಾಟನೆ
ನಾಳೆ
ಬೆಳಗ್ಗೆ
11.15ಕ್ಕೆ
ಕೇಂದ್ರ
ಮಾಜಿ
ಸಹಾಯಕ
ವಿತ್ತ
ಸಚಿವ,
ಕ್ಷೇತ್ರದ
ಅಭಿವೃದ್ಧಿಯ
ರೂವಾರಿ
ಜನಾರ್ದನ
ಪೂಜಾರಿ
ಅವರಿಂದ
ನೆರವೇರಲಿದೆ.
ಪದ್ಮಶ್ರೀ
ಪ್ರಶಸ್ತಿ
ಪುರಸ್ಕೃತರಾದ
ಹರೇಕಳ
ಹಾಜಬ್ಬ,
ಮಹಾಲಿಂಗ
ನಾಯ್ಕ್
ಸೇರಿದಂತೆ
ವಿವಿಧ
ಗಣ್ಯರು
ಕಾರ್ಯಕ್ರಮಕ್ಕೆ
ಸಾಕ್ಷಿ
ಆಗಲಿದ್ದಾರೆ.
ಪೂಜಾರಿಯವರ
ಆಶಯದಂತೆ
ವರ್ಣರಂಜಿತ
ಅದ್ಧೂರಿ
ದಸರಾ
ದರ್ಬಾರ್
ಮಂಟಪ
ಸಿದ್ಧಗೊಂಡಿದ್ದು,
ಅತ್ಯಾಕರ್ಷಕ
ಹಾಗೂ
ಅದ್ದೂರಿ
ದಸರಾ
ಆಚರಣೆಗೆ
ಎಲ್ಲ
ಸಿದ್ಧತೆಗಳು
ಭರದಿಂದ
ನಡೆಯುತ್ತಿವೆ.
ಕ್ಷೇತ್ರದಲ್ಲಿ 9 ದಿನಗಳ ಕಾಲ ಗಣಪತಿ, ಶಾರದಾ ಮಾತೆ, ನವದುರ್ಗೆಯರು, ಆದಿಮಾಯೆಯ ಆರಾಧನೆ ನಡೆಯಲಿದೆ. ದೇವಸ್ಥಾನದಲ್ಲಿ ಹಾಗೂ ದಸರಾ ಮೆರವಣಿಗೆ ಸಾಗುವ ಏಳು ಕಿಲೋ ಮೀಟರ್ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರಗಳ ಸಿದ್ದತೆಯೂ ಪೂರ್ಣಗೊಂಡಿದೆ. ಗೋಕರ್ಣನಾಥ ಸೇವಾದಳದ ವತಿಯಿಂದ ಶಾರದಾ ಮಾತೆಗೆ ರಜತ ಪೀಠ ಸಮರ್ಪಣೆಯೂ ನಡೆಯಲಿದೆ. ವರ್ಷದಿಂದ ವರ್ಷಕ್ಕೆ ಪ್ರಸಿದ್ದಿ ಪಡೆಯುತ್ತಿರುವ ಮಂಗಳೂರು ದಸರಾಕ್ಕೆ ರಾಜ್ಯ, ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಕೊನೆಯ ದಿನವಾದ ಅಕ್ಟೋಬರ್ 5ರ ಸಂಜೆ 4 ಗಂಟೆಗೆ ಮಂಗಳೂರು ದಸರಾ ಮೆರವಣಿಗೆಯ ಶೋಭಾಯಾತ್ರೆ ನಡೆಯಲಿದೆ. ಈಗಾಗಲೇ ಮಂಗಳೂರಿನ ಎಲ್ಲಾ ಹೋಟೆಲ್ ರೂಂಗಳು ತುಂಬಿವೆ.