ಇಂದಿನಿಂದ ಯಶವಂತಪುರ-ವಿಜಯಪುರ ವಿಶೇಷ ರೈಲು, ಹುಬ್ಬಳ್ಳಿಗೆ ಹೋಗಲ್ಲ! ವಾರಾಂತ್ಯದ ಪ್ರಯಾಣಿಕರಿಗೆ ಗುಡ್‌ನ್ಯೂಸ್

ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಅದೆಷ್ಟು ರೈಲುಗಳನ್ನು ಬಿಟ್ಟರು ಸಾಲದೆಂಬಂತಹ ಸ್ಥಿತಿ ಇದೆ. ಏಕೆಂದರೆ ಉತ್ತರ ಕರ್ನಾಟಕ ಹಾಗೂ ಮುಂಬೈ, ಮಹಾರಾಷ್ಟ್ರ, ಇನ್ನಿತರ ಕಡೆಗಳಿಂದ ಬೆಂಗಳೂರಿಗೆ ಓಡಾಡುವವರ ಪ್ರಮಾಣ ಹೆಚ್ಚಿದೆ. ಅಲ್ಲದೇ ಈ ಭಾಗಗಳಲ್ಲಿ ಹೊಸ ರೈಲು ಮಾರ್ಗಗಳು ಸಿದ್ಧಗೊಳ್ಳುತ್ತಿವೆ. ಇದರ ಮದ್ಯೆ ಬೆಂಗಳೂರಿನ ಯಶವಂತಪುರದಿಂದ ವಿಜಯಪುರಕ್ಕೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ತೀರ್ಮಾನಿಸಲಾಗಿದೆ. ಆದರೆ ಈ ರೈಲು ಹುಬ್ಬಳ್ಳಿ ಪ್ರವೇಶಿಸುವುದಿಲ್ಲ ಎಂಬುದನ್ನು ಪ್ರಯಾಣಿಕರ ಗಮನಿಸಬೇಕು.

ಉತ್ತರ ಕರ್ನಾಟಕಕ್ಕೆ ವೇಗದ ಸಂಪರ್ಕ ಹೆಚ್ಚುವರಿ ಸೇವೆ ಲಭ್ಯವಗುವಂತೆ ಮಾಡಲು ಬಹುದಿನಗಳಿಂದ ನೇರ ಸೇವೆಗೆ ಬೇಡಿಕೆ ಇತ್ತು. ಅದರಂತೆ ಯಶವಂತಪುರ-ವಿಜಯಪುರ ವಿಶೇಷ ರೈಲು ಸಂಚಾರ ಆರಂಭಿಸುವ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ಮಾಹಿತಿ ತಿಳಿಸಿದ್ದಾರೆ.

Yeshwantpur-Vijayapura Special Train

ಮೇ 16 ರಿಂದ ಆರಂಭವಾಗಿ ಮುಂದಿನ 7 ವಾರಾಂತ್ಯಗಳ ಕಾಲ ಈ ವಿಶೇಷ ರೈಲು ಸಂಚರಿಸಲಿದೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕದತ್ತ ತೆರಳುವವರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಜೂನ್ 28ರವರೆಗೆ ಯಶವಂತಪುರ-ವಿಜಯಪುರ ವಿಶೇಷ ರೈಲು ಸಂಚಾರ ಆರಂಭವಾಲಿದೆ ಎಂದು ಅವರು ತಿಳಿಸಿದರು.

SWR: ಹುಬ್ಬಳ್ಳಿ ವಿಭಾಗದಲ್ಲಿ ರೈಲು ಸಂಚಾರ ವ್ಯತ್ಯಯ; ಹಲವು ರೈಲುಗಳು ಭಾಗಶಃ ರದ್ದು
SWR: ಹುಬ್ಬಳ್ಳಿ ವಿಭಾಗದಲ್ಲಿ ರೈಲು ಸಂಚಾರ ವ್ಯತ್ಯಯ; ಹಲವು ರೈಲುಗಳು ಭಾಗಶಃ ರದ್ದು

ಈ ರೈಲು ಹುಬ್ಬಳ್ಳಿಗೆ ಪ್ರವೇಶಿಸಲ್ಲ

ಹುಬ್ಬಳ್ಳಿ ಪ್ರವೇಶವಿಲ್ಲದೆ ಸಂಚರಿಸಲಿರುವ ಈ ವಿಶೇಷ ರೈಲು, ತುಮಕೂರು, ದಾವಣಗೆರೆ ಸೇರಿದಂತೆ ಆಯ್ದ 9 ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಿರಲಿದೆ. ಇದರಿಂದ ಬೆಂಗಳೂರಿನಿಂದ ವಿಜಯಪುರಕ್ಕೆ ಕೇವಲ 11 ಗಂಟೆಗಳಲ್ಲಿ ತಲುಪಬಹುದಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಕುಟುಂಬಗಳ ಪ್ರಯಾಣ ಮತ್ತಷ್ಟು ಸುಗಮವಾಗಲಿದೆ. ವೇಗದ ಸೇವೆ ಸಹ ದೊರೆಯಲಿದೆ.

ಶನಿವಾರ ಯಶವಂತಪುರದಿಂದ ಹೊರಟು ಮಾರನೇ ದಿನ ಬೆಳಗ್ಗೆ ವಿಜಯಪುರ ತಲುಪುತ್ತದೆ. ಭಾನುವಾರ ಸಂಜೆ ವಿಜಯಪುರದಿಂದ ಹೊರಟು ಮಾರನೇ ದಿನ ಸೋಮವಾರ ಬೆಳಗ್ಗೆ ಯಶವಂತಪುರಕ್ಕೆ ಆಗಮಿಸಲಿದೆ. ಎರಡು ಬದಿಯಲ್ಲಿ ವಾರಾಂತ್ಯದಲ್ಲಿ ತೆರಳುವವರಿಗೆ ಹೆಚ್ಚಿನ ಸಾರಿಗೆ ಸೇವೆ ಸಿಕ್ಕಂತಾಗಲಿದೆ.

ತುಮಕೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಯಾಣಿಕರಿಗೆ ಸಹಾಯವಾಗಲಿದೆ. ಹುಬ್ಬಳ್ಳಿ ಜಂಕ್ಷನ್ ಪ್ರವೇಶಿಸಿದಲ್ಲಿ ಮತ್ತಷ್ಟು ಸಮಯ ಹಿಡಿಯಲಿದೆ. ಅಲ್ಲದೇ ಈಗಾಗಲೇ ಹಲವು ರೈಲುಗಳು ಹುಬ್ಬಳ್ಳಿಗೆ ಇವೆ. ಈ ಕಾರಣದಿಂದ ನೈಋತ್ಯ ರೈಲ್ವೆ ಹುಬ್ಬಳ್ಳಿ ಬಿಟ್ಟು ಕಾರ್ಯಾಚರಣೆ ನಡೆಸಲು ಮುಂದಾಗಿದೆ ಎನ್ನಲಾಗಿದೆ.

ಶಾಶ್ವತ ರೈಲು ಸಂಚಾರಕ್ಕೆ ಒತ್ತಾಯ

ಈ ಸೇವೆ ಪ್ರಾಯೋಗಿಕ ಹಂತಕ್ಕೆ ಮಾತ್ರ ಸೀಮಿತವಾಗದೆ, ಬೆಂಗಳೂರು-ವಿಜಯಪುರ ನಡುವಿನ ವೇಗದ ರೈಲು ಸಂಚಾರ ಶಾಶ್ವತ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು. ಕೇವಲ 10 ಗಂಟೆಗಳಲ್ಲಿ ವಿಜಯಪುರ-ಬೆಂಗಳೂರು ಸಂಪರ್ಕ ಕಲ್ಪಿಸುವ ವೇಗದ ರೈಲು ಸೇವೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ನಮ್ಮ ಒತ್ತಾಯ ಮುಂದುವರೆಯಲಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+