ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ನಂ. 1 ಸ್ಥಾನದತ್ತ ಕುಕ್ಕೆ ಸುಬ್ರಹ್ಮಣ್ಯ
2016-17ನೇ ಆರ್ಥಿಕ ವರ್ಷದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬರೋಬ್ಬರಿ 89.65 ಕೋಟಿ ರೂಪಾಯಿ ಆದಾಯ ಗಳಿಸಿದೆ. ಹೀಗಾಗಿ ಈ ವರ್ಷವೂ ಮುಜುರಾಯಿ ದೇವಸ್ಥಾನಗಳಲ್ಲಿ ನಂಬರ್ ವನ್ ಪಟ್ಟ ಕುಕ್ಕೆ ಸುಬ್ರಹ್ಮಣ ದೇವಸ್ಥಾನದ ಪಾಲಾಗುವ ಸಾಧ್ಯತೆ ಇದೆ.
ಮಂಗಳೂರು, ಮೇ 7: ಮುಜುರಾಯಿ ಇಲಾಖೆ ಅಡಿಯಲ್ಲಿ ಬರುವ ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನಗಳಲ್ಲಿ ಈ ವರ್ಷವೂ ನಂಬರ್ ವನ್ ಪಟ್ಟ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಾಲಾಗುವ ಸಾಧ್ಯತೆ ಇದೆ.
2016-17ನೇ ಆರ್ಥಿಕ ವರ್ಷದಲ್ಲಿ ಈ ದೇವಸ್ಥಾನ ಬರೋಬ್ಬರಿ 89.65 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದೇ ವೇಳೆ ದೇವಸ್ಥಾನದ ಹಣದಲ್ಲಿ 36.02 ಕೋಟಿ ಖರ್ಚಾಗಿದೆ.

ಹತ್ತು ವರ್ಷ ಹಿಂದಕ್ಕೆ ಹೋಲಿಸಿದರೆ ಅಂದರೆ 2006-07ರಲ್ಲಿ ದೇವಸ್ಥಾನ ಕೇವಲ 19.76 ಕೋಟಿ ಆದಾಯ ಪಡೆದಿತ್ತು. ಇದೀಗ ದೇವಸ್ಥಾನದ ಆದಯ 10 ವರ್ಷಗಳಲ್ಲಿ ನಾಲ್ಕು ಪಟ್ಟು ಏರಿಕೆಯಾಗಿದೆ. 2007-08ರಲ್ಲಿ ದೇವಸ್ಥಾನ 24.44 ಕೋಟಿ ಆದಾಯ ಪಡೆಯುವ ಮೂಲಕ ರಾಜ್ಯದ ನಂಬರ್ ವನ್ ದೇವಸ್ಥಾನವಾಗಿ ಮೂಡಿ ಬಂದಿತ್ತು. ಅಲ್ಲಿಂದ ಈ ಸ್ಥಾನವನ್ನು ಕುಕ್ಕೆ ಸುಬ್ರಹ್ಮಣ್ಯ ನಿರಂತರವಾಗಿ ಕಾಪಾಡುತ್ತಾ ಬಂದಿದೆ.
ಹಾಗೆ ನೋಡಿದರೆ ದೇವಸ್ಥಾನದ ಆದಾಯ ಈ ವರ್ಷ ಹೇಳಿಕೊಳ್ಳುವಷ್ಟು ಏರಿಕೆಯಾಗಿಲ್ಲ. ಬಹುಶಃ ಅಪನಗದೀಕರಣ ಕುಕ್ಕೆ ದೇವಸ್ಥಾನದ ಮೇಲೆಯೂ ಪರಿಣಾಮ ಬೀರಿರುವ ಸಾಧ್ಯತೆ ಇದೆ. 2013-14ರಲ್ಲಿ ದೇವಸ್ಥಾನ 68 ಕೋಟಿ ಆದಾಯ ಗಳಿಸಿತ್ತು. ಅದೇ 2014-15ರಲ್ಲಿ ಇದು 77.6 ಕೋಟಿಗೆ ಏರಿಕೆಯಾಗಿತ್ತು. 2015-16ರ ಹೊತ್ತಿಗೆ ಇದು 88ರ ಗಡಿ ಮುಟ್ಟಿತ್ತು. ಇದೇ ಏರಿಕೆಯಲ್ಲಿ ಸಾಗಿದ್ದರೆ ಈ ಬಾರಿ 100 ಕೋಟಿ ಆಸುಪಾಗೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಮುಟ್ಟಬೇಕಾಗಿತ್ತು. ಆದರೆ ಹಾಗಾಗಿಲ್ಲ.
ಯಾವ ಯಾವ ಮೂಲಗಳಿಂದ ಎಷ್ಟೆಷ್ಟು
2016-17ನೇ ವರ್ಷದಲ್ಲಿ ಕೃಷಿಕರು ನೀಡಿದ ಬೆಳೆಗಳಿಂದ ದೇವಸ್ಥಾನಕ್ಕೆ 2.12 ಕೋಟಿ ಆದಾಯ ಬಂದಿದ್ದರೆ, ಕಟ್ಟಡಗಳ ಬಾಡಿಗೆಯಿಂದ 44 ಲಕ್ಷ ರೂಪಾಯಿ ಆದಾಯ ಸಿಕ್ಕಿದೆ. ಇನ್ನು ಹರಕೆಗಳಿಂದ ದೇವಸ್ಥಾನ 1.68 ಕೋಟಿ ಆದಾಯ ಪಡೆದಿದ್ದರೆ, ಹುಂಡಿಯಲ್ಲಿ 17.65 ಕೋಟಿ ಹಣ ಸಂಗ್ರಹವಾಗಿದೆ. ಸೇವೆಗಳಿಂದ ಮತ್ತು ಪ್ರಸಾದ ಮಾರಾಟದಿಂದ 38.24 ಕೋಟಿ ಹಾಗೂ ಕೆಲವು ಅನುದಾನಗಳಿಂದ 1.22 ಲಕ್ಷ ಆದಾಯ ಪಡೆದುಕೊಂಡಿದೆ.
ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಪೂಜೆ ವಿಶೇಷವಾಗಿದ್ದು ಖ್ಯಾತ ಬಾಲಿವುಡ್ ತಾರೆಗಳು, ಕ್ರಿಕೆಟ್ ಆಟಗಾರರೆಲ್ಲಾ ಇಲ್ಲಿಗೆ ಬಂದು ಈ ಸೇವೆ ನೆರವೇರಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಪೂಜೆ ಸೇವೆಗಳಿಂದಲೇ ದೇವಸ್ಥಾನ 30.56 ಕೋಟಿ ಆದಾಯ ಪಡೆದಿರುವುದು ಇಲ್ಲಿಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯ ಏರಿಕೆಗೆ ಕೈಗನ್ನಡಿ ಹಿಡಿದಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications