ವೈರಲ್ ಆಯ್ತು ಮೋದಿ ಅವರ ಈ ಡಿಜಿಟಲ್ ಪೇಂಟಿಂಗ್ ಚಿತ್ರ
ಮಂಗಳೂರು ಮೇ 18: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರ ಕಪ್ಪು ಬಿಳುಪಿನ ಚಿತ್ರವೊಂದು ಭಾರೀ ವೈರಲ್ ಆಗಿದೆ. ಮೋದಿ ಅವರ ಈ ಡಿಜಿಟಲ್ ಪೇಂಟಿಂಗ್ ಚಿತ್ರ ಇಷ್ಟೊಂದು ವೈರಲ್ ಆಗಲು ಕಾರಣ ಕರಣ್ ಆಚಾರ್ಯ.
ಹೌದು, ಕರಣ್ ಆಚಾರ್ಯ ರಚಿಸಿದ್ದ ವಿರಾಟ್ ಬಜರಂಗ್ ಕೇಸರಿ-ಕಪ್ಪು ವರ್ಣದ ವಿಕ್ಟರ್ ಆರ್ಟ್ ಚಿತ್ರ ದೇಶಾದ್ಯಂತ ಭಾರೀ ಪ್ರಸಿದ್ದಿ ಪಡೆದಿತ್ತು. ಆ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಮೋದಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ ಕಲಾವಿದ ಕರಣ್ ಆಚಾರ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ವಿಚಾರದಿಂದ ಬಹಳ ಸಂತೋಷಗೊಂಡಿದ್ದ ಕರಣ್ ಆಚಾರ್ಯ ಇದೀಗ ಮೋದಿ ಅವರ ಭಾವಚಿತ್ರವನ್ನು ಕಪ್ಪು-ಬಿಳುಪು ವರ್ಣದಲ್ಲಿ ಡಿಜಿಟಲ್ ಆರ್ಟ್ ರಚಿಸಿದ್ದಾರೆ. ಈ ಚಿತ್ರವನ್ನು ಫೇಸ್ ಬುಕ್ ಹಾಗು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಪ್ರಧಾನಿ ಮೋದಿ ಅವರಿಗೂ ಶೇರ್ ಮಾಡಿದ್ದಾರೆ.

ಮುಖ್ಯವಾದ ಅಂಶವೆಂದರೆ ಈ ಚಿತ್ರವನ್ನು ಕರಣ್ ಆಚಾರ್ಯ ರಾಜ್ಯ ವಿಧಾನಸಭೆ ಫಲಿತಾಂಶದ ದಿನವೇ ಪ್ರಧಾನಿ ಅವರಿಗೆ ಶೇರ್ ಮಾಡಿದ್ದರು. ತಮ್ಮ ಪೋಸ್ಟ ನಲ್ಲಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿರುವ ಕರಣ್ ಆಚಾರ್ಯ 'ನನ್ನನ್ನು ಗಮನಿಸಿ, ನನ್ನ ಕೆಲಸ ಮೆಚ್ಚಿಕೊಂಡಿರುವುದಕ್ಕೆ ಧನ್ಯವಾದಗಳು. ಇದು ನಿಮಗೆ ನನ್ನ ಚಿಕ್ಕ ವಂದನಾ ರೂಪದ ಕೊಡುಗೆ' ಎಂದು ಬರೆದಿದ್ದಾರೆ.
ಕರಣ್ ಆಚಾರ್ಯ ಈ ಹಿಂದೆ ಆಡೋಬ್ ಫ್ಲಾಶ್ ನಲ್ಲಿ ವಿರಾಟ್ ಬಜರಂಗ್ , ಶಿವಾಜಿಯ ಕೇಸರಿ ಹಾಗು ಕಪ್ಪು ವರ್ಣದ ವಿಕ್ಟರ್ ಆರ್ಟ್ ಚಿತ್ರ ರಚಿಸಿದ್ದರು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications