Get Updates
Get notified of breaking news, exclusive insights, and must-see stories!

ಶರತ್ ಹತ್ಯೆ ಪ್ರಕರಣದ ಸ್ಫೋಟಕ ಮಾಹಿತಿ ನನ್ನ ಬಳಿ ಇದೆ: ಸ್ವಾಮೀಜಿ

ಮಂಗಳೂರು, ಜುಲೈ 14: ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣದ ಷಡ್ಯಂತ್ರದ ಬಗೆಗಿನ ಸ್ಫೋಟಕ ಮಾಹಿತಿಯನ್ನು ತನಿಖಾ ದಳಕ್ಕೆ ನೀಡುವುದಾಗಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಶರತ್ ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಈ ಸಂಬಂಧ ನನ್ನ ಬಳಿ ಸ್ಫೋಟಕ ಮಾಹಿತಿಯಿದ್ದು, ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದೇ ಆದಲ್ಲಿ ಆ ಮಾಹಿತಿಯನ್ನು ತನಿಖಾ ಸಂಸ್ಥೆಗೆ ನೀಡುತ್ತೇನೆ ಎಂದು ಹೇಳಿದರು.

I have explosive details of Sharath murder case: seer

ಐಪಿಎಸ್ ಅಧಿಕಾರಿಯೊಬ್ಬರನ್ನು ನನ್ನ ಸಹಚರರ ಮುಂದೆ ನಿಲ್ಲಿಸಿ, ವ್ಯಕ್ತಿಯೊಬ್ಬರ ಮೇಲೆ ಆ ಸೆಕ್ಷನ್ - ಈ ಸೆಕ್ಷನ್ ಹಾಕಿ ಎನ್ನುವಂತಹ ಜನಪ್ರತಿನಿಧಿ ಇದ್ದಾರೆ. ಹೀಗಿರುವಾಗ ರಾಜ್ಯ ಪೊಲೀಸರಿಗೆ ನನ್ನ ಬಳಿಯಿರುವ ಮಾಹಿತಿಯನ್ನು ನೀಡಿದ್ದೇ ಆದಲ್ಲಿ, ಅದನ್ನು ತಿರುಚುವ ಅಥವಾ ಮುಚ್ಚಿಡುವ ಪ್ರಯತ್ನವನ್ನು ನಡೆಸಬಹುದು ಎಂಬ ಅನುಮಾನ ವ್ಯಕ್ತಪಡಿದರು.

ಆ ಕಾರಣಕ್ಕೆ ನನ್ನ ಬಳಿಯಿರುವ ಮಾಹಿತಿಯನ್ನು ಪೊಲೀಸರಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಂದಿನ ದಿನಗಳಲ್ಲಿ ಈ ಸಂಬಂಧ ಕೇಂದ್ರ ಗ್ರಹಸಚಿವರು ಹಾಗೂ ಪ್ರಧಾನಿ ಬಳಿಗೆ ತೆರಳುವುದಾಗಿಯೂ ಇದೇ ಸಂದರ್ಭದಲ್ಲಿ ಹೇಳಿದರು.

I have explosive details of Sharath murder case: seer

ಶರತ್ ಶವಯಾತ್ರೆಯ ಮೆರವಣಿಗೆಯಲ್ಲಿ ನನ್ನ ವಾಹನಕ್ಕೂ ಹಾನಿಯಾಗಿದ್ದು, ಘಟನೆಗೆ ನಾನು ಸಾಕ್ಷಿಯಾಗಿದ್ದರೂ ಏಕಾಏಕಿ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಗಂಭೀರ ಪ್ರಕರಣ ದಾಖಲಿಸುವುದು ಷಡ್ಯಂತ್ರವಾಗಿದೆ ಎಂದು ಅವರು ಆರೋಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+