ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 22ನೇ ಸ್ಥಾನ
ಮಂಗಳೂರು, ಜೂನ್ 14: ಪ್ರತಿಷ್ಠಿತ 'ವೀಕ್' ನಿಯತಕಾಲಿಕೆಯು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಭಾರತದ ಅತ್ಯುನ್ನತ ವಿಜ್ಞಾನ ಕಾಲೇಜುಗಳ ಪೈಕಿ 22ನೇ ಸ್ಥಾನವನ್ನು ನೀಡಿದೆ. ರಾಷ್ಟ್ರಮಟ್ಟದಲ್ಲಿ 317 ಸಂಯೋಜಿತ ಅಂಕಗಳಿಂದ 22ನೇ ಸ್ಥಾನವನ್ನು ಕಾಲೇಜು ತನ್ನದಾಗಿಸಿಕೊಂಡಿದೆ. ಮಾನವಶಾಸ್ತ್ರ ವಿಭಾಗದಲ್ಲಿ 274 ಸಂಯೋಜಿತ ಅಂಕಗಳೊಂದಿಗೆ 44ನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ ರಾಜ್ಯಕ್ಕೆ 4ನೇ ಅತ್ಯುನ್ನತ ವಿಜ್ಞಾನ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದೆ.
ಭಾರತದಲ್ಲಿ ಉನ್ನತ ಕಾಲೇಜುಗಳಿಗೆ ಸಂಬಂಧಿಸಿದಂತೆ ನಡೆಯುವ ಸಮೀಕ್ಷೆ 'ವೀಕ್- ಹನ್ಸ್ ಸರ್ವೆ ಫಾರ್ ಬೆಸ್ಟ್ ಕಾಲೇಜಸ್ ಇನ್ ಇಂಡಿಯಾ'ದಲ್ಲಿ ನಿರಂತರವಾಗಿ ಐದು ವರ್ಷಗಳಿಂದ ಸಂತ ಅಲೋಶಿಯಸ್ ಕಾಲೇಜು ಉನ್ನತ ಶ್ರೇಣಿಯನ್ನು ಕಾಯ್ದುಕೊಂಡು ಬಂದಿದೆ.
ವಿದ್ಯಾರ್ಥಿ-ಅಧ್ಯಾಪಕರ ಅನುಪಾತ, ವಿದ್ಯಾರ್ಥಿಗಳ ಗುಣಮಟ್ಟ, ಕಾಲೇಜಿನ ಮೂಲ ಸೌಕರ್ಯ, ಪ್ರಾಧ್ಯಾಪಕರ ಶೈಕ್ಷಣಿಕ ಅರ್ಹತೆ, ನೇಮಕ ಮತ್ತು ಸಂಶೋಧನಾ ಅನುಭವ ಮೊದಲಾದ ಮಾನದಂಡಗಳನ್ನು ಪರಿಗಣಿಸಿ ಸ್ಥಾನಮಾನ ನೀಡಲಾಗುತ್ತದೆ. ವಾಸ್ತವಿಕ ಹಾಗೂ ಗ್ರಹಿಕಾ ಅಂಕದ ಮೇಲೆ ಸ್ಥಾನವು ಅವಲಂಬಿತವಾಗಿರುತ್ತದೆ. ಕಾಲೇಜಿನ ಮಾಹಿತಿಯನ್ನು ಕಲೆ ಹಾಕಿ, ವಾಸ್ತವಿಕ ಅಂಕ ನೀಡಿದರೆ, ಶೈಕ್ಷಣಿಕ ತಜ್ಞರು, ಉನ್ನತ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಅಭಿಪ್ರಾಯದ ಮೇರೆಗೆ ಗ್ರಹಿಕಾ ಅಂಕಗಳನ್ನು ನಿರ್ಧರಿಸಲಾಗುತ್ತದೆ.

ಈ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಾದ ಹನ್ಸಾ ದಿ ವೀಕ್ ಮತ್ತು ಇಂಡಿಯಾ ಟುಡೇ ಮ್ಯಾಗಜಿನ್ ಸಹಯೋಗದೊಂದಿಗೆ ಕಾರ್ಯಚರಿಸುತ್ತಿರುವ ಎಂಡಿಆರ್ ಎ ಮತ್ತು ಎಂ ಎಚ್ಆರ್ ಡಿಯ ಎನ್ ಐಆರ್ ಎಫ್ ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಕುರಿತ ಬಹು ಮುಖ್ಯವಾದ ವಾರ್ಷಿಕ ಸರ್ವೆಗಳಲ್ಲಿ 40000ಕ್ಕೂ ಹೆಚ್ಚಿನ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಹೆಸರು ಸೇರಿರುವುದು ಸಂಸ್ಥೆಗೆ ಹಿರಿಮೆ.
ಇಂಡಿಯಾ ಟುಡೇ ನಡೆಸಿದ ಎಂಡಿಆರ್ ಎ ಸರ್ವೆಯಲ್ಲಿ ಕೂಡ ಅಲೋಶಿಯಸ್ ಕಾಲೇಜು ಹಲವು ವಿಭಾಗಗಳಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದೆ. ಅಖಿಲ ಭಾರತ ಮಟ್ಟದಲ್ಲಿ ಸಮಾಜ ಕಾರ್ಯದಲ್ಲಿ 19, ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ)ಗೆ 21, ಪತ್ರಿಕೋದ್ಯಮ ಮತ್ತು ಸಂವಹನದಲ್ಲಿ 33, ವ್ಯವಹಾರೋದ್ಯಮದಲ್ಲಿ 40, ವಿಜ್ಞಾನದಲ್ಲಿ 46, ಕಲಾ ವಿಭಾಗದಲ್ಲಿ 50, ವಾಣಿಜ್ಯ ವಿಭಾಗದಲ್ಲಿ 65ನೇ ಸ್ಥಾನವನ್ನು ಪಡೆದುಕೊಂಡಿದೆ.
ಹಾಗೆಯೇ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಡೆಸಿದ ಎನ್ ಐಆರ್ ಸಮೀಕ್ಷೆಯಲ್ಲೂ ಕಾಲೇಜು 100 ರಿಂದ 150ರ ನಡುವಿನ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಸ್ಥಾನ ಪಡೆದ ಏಕೈಕ ಕಾಲೇಜಾಗಿ ಹೆಸರು ಗಳಿಸಿತ್ತು. ಇಡೀ ಕರ್ನಾಟಕ ರಾಜ್ಯದಲ್ಲಿ ಉನ್ನತ ಸ್ಥಾನ ಪಡೆದ ಮೂರು ಕಾಲೇಜುಗಳಿಗೆ ಪೈಕಿ ಅಲೋಶೀಯಸ್ ಕೂಡ ಒಂದಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications