ಹಜ್ ಹೆಸರಿನಲ್ಲಿ ಟ್ರಾವೆಲ್ ಏಜೆನ್ಸಿಯಿಂದ ಲಕ್ಷಾಂತರ ರೂ. ವಂಚನೆ
ಮಂಗಳೂರು, ಆಗಸ್ಟ್ 27: ಹಜ್ ಯಾತ್ರೆಗೆ ವೀಸಾ ನೀಡುತ್ತೇವೆ ಎಂದು ಖಾಸಗಿ ಟ್ರಾವೆಲ್ಸ್ ಸಂಸ್ಥೆಯೊಂದು ಯಾತ್ರಿಗರನ್ನು ನಂಬಿಸಿ ತಲಾ 70 ಸಾವಿರ ರೂ.ನಂತೆ ಪಡೆದುಕೊಂಡು ವಂಚನೆ ನಡೆಸಿರುವ ಕೃತ್ಯ ಈಗ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಉಡುಪಿ ನಿವಾಸಿ ಎಂ.ಪಿ. ಮೊಯ್ದಿನಬ್ಬ ಎಂಬವರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ಸಂಸ್ಥೆಯ ಮಾಲಕರು ಹಾಗೂ ಏಜೆಂಟರಿಂದ ನನಗೆ ಹಾಗೂ ಇತರ ಹಲವರಿಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ತೊಂದರೆಯಾಗಿದೆ. ನಾನು ಹಜ್ ಯಾತ್ರೆಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ನಂತರ ವಿಚಾರಿಸಿದಾಗ ನನ್ನಂತೆಯೇ ಸುಮಾರು 95 ಮಂದಿಗೆ ಇದೇ ರೀತಿ ಅನ್ಯಾಯವಾಗಿರುವುದು ತಿಳಿದು ಬಂತು. ಅಲ್ಲದೆ ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಅವಮಾನ ಮಾಡುವ ಕೃತ್ಯವೂ ನಡೆದಿದೆ. ನಮ್ಮೆಲ್ಲರ ಪಾಸ್ಪೋರ್ಟ್ ಹಾಗೂ ಹಣ ಅವರ ಕೈಯ್ಯಲ್ಲಿದೆ

ಎಂದು ಮೊಯ್ದಿನಬ್ಬ ತಿಳಿಸಿದ್ದಾರೆ.
ಜನರನ್ನು ವಂಚಿಸುವ ಈ ಸಂಸ್ಥೆಯವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಎಂ.ಪಿ. ಮೊಯ್ದಿನಬ್ಬ ಮಂಗಳೂರು ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇವರಿಗೆ ಭಾರತದ ಹಜ್ ಕಮಿಟಿಯ ಪದಾಧಿಕಾರಿಗಳು, ರಾಜಕೀಯ ನಾಯಕರ ಬೆಂಬಲವೂ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.
2017ರ ಹಜ್ ಯಾತ್ರೆಗೆ ಸಂಬಂಧಿಸಿದಂತೆ, ಮಂಗಳೂರಿನ ಮಿಶನ್ಸ್ಟ್ರೀಟ್ನ ರೀಗಲ್ ಪ್ಲಾಝಾದಲ್ಲಿ ಕಾರ್ಯಾಚರಿಸುತ್ತಿರುವ ಶಹದಾ ಟ್ರಾವೆಲ್ಸ್ ಸಂಸ್ಥೆಯು ಕಳೆದ ಜೂನ್ ತಿಂಗಳಲ್ಲಿ ಹಜ್ಗೆ ಹೋಗುವವರ ವೀಸಾಗಳು ನಾನಾ ಕಾರಣಗಳಿಂದಾಗಿ ಉಳಿಕೆಯಾಗಿವೆ ಎಂದು ತಿಳಿಸಿತ್ತು. ಮೊದಲು 35,000 ರೂ. ಮತ್ತು ನಂತರ 35,000 ರೂ. ನೀಡುವಂತೆ ತಿಳಿಸಿ ಪಾಸ್ಪೋರ್ಟ್ಗಾಗಿ ಸಂಸ್ಥೆಯವರು ಒತ್ತಾಯಿಸಿದ್ದರು.
ಅದರಂತೆ ನಾನು ನನ್ನ ಪಾಸ್ಪೋರ್ಟ್ ಹಾಗೂ 35,000 ರೂ. ಜೂನ್ 21ರಂದು ಮತ್ತು ಆಗಸ್ಟ್ 16ರಂದು ಮತ್ತೆ 35,000 ರೂ. ಸೇರಿದಂತೆ ಒಟ್ಟು 70 ಸಾವಿರ ರೂ. ಪಾವತಿ ಮಾಡಿರುತ್ತೇನೆ. ಆ. 25ರೊಳಗೆ ವೀಸಾ ನೀಡಿ ಹಜ್ ಯಾತ್ರೆಗೆ ತಯಾರಾಗುವಂತೆ ನನಗೆ ತಿಳಿಸಲಾಗಿತ್ತು. ಆದರೆ ಆ. 21ರಿಂದ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ನನಗೆ ಹಾಗೂ ಸುಮಾರು 95 ಮಂದಿಗೆ ಸುಳ್ಳು ಮಾಹಿತಿ ನೀಡಿದ್ದರು. ನಿನ್ನೆ 8 ಗಂಟೆಗೆ ಕರೆ ಮಾಡಿ ಎಲ್ಲಾ ವೀಸಾಗಳು ರದ್ದಾಗಿವೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ. ಈ ಮೂಲಕ ಮೋಸ ನಡೆದಿದೆ ಎಂದು ಶಾಫಿ ಎಂಬವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications