ದ.ಕ ಜಿಲ್ಲೆಯ ಆಕ್ಸಿಜನ್ ಸಮಸ್ಯೆ, ಚಂಡಮಾರುತ ಹಾನಿ ವಿಚಾರ; ಸಿಎಂ ಮೊರೆ ಹೋದ ಸಚಿವ
ಮಂಗಳೂರು, ಮೇ 20: ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ ಕಂಡುಬಂದಿದ್ದು, ಇದೀಗ ಈ ಸಮಸ್ಯೆಯನ್ನು ನಿವಾರಿಸಬೇಕೆಂದು ಸ್ವತಃ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾದ ಕೋಟಾ ಶ್ರೀನಿವಾಸ ಪೂಜಾರಿ ನಿಯೋಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿದ್ದು, ಆಕ್ಸಿಜನ್ ಟ್ಯಾಂಕರ್ನ್ನು ತಕ್ಷಣ ಆದ್ಯತೆಯ ಮೇರಗೆ ಒದಗಿಸಿಕೊಡಬೇಕೆಂದು ಮನವಿ ಮಾಡಿದರು. ಅಲ್ಲದೆ ಆರೋಗ್ಯ ಇಲಾಖೆಯಲ್ಲಿ ನೌಕರರ ಕೊರತೆಯಿಂದ ಬಹಳ ಸಮಸ್ಯೆ ಎದುರಾಗುತ್ತಿದ್ದು, 40 ಜನ ಆರೋಗ್ಯ ಮಿತ್ತ ಕಾರ್ಯನಿರ್ವಾಹಕರನ್ನು ಹೆಚ್ಚುವರಿ ನೇಮಕ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ದ.ಕ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯಲ್ಲಿ ನಿರೀಕ್ಷೆಯ ಪ್ರಮಾಣದಲ್ಲಿ ಸರಬರಾಜು ಆಗದೆ ಜನ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಪ್ರತಿದಿನ ಲಸಿಕೆಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ 1 ಲಕ್ಷ ಲಸಿಕೆಗಳನ್ನು ಸರಬರಾಜು ಮಾಡುವಂತೆ ಕೋಟಾ ಶ್ರೀನಿವಾಸ ಪೂಜಾರಿ ವಿನಂತಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ವೈದ್ಯರ ಕೊರತೆಯಿದ್ದು, ಇದರಿಂದಾಗಿ ಬೇರೆ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ತಕ್ಷಣವೇ ವೈದ್ಯರು ಮತ್ತು ದಾದಿಯರ ನೇಮಕ ಮಾಡಬೇಕು. ಈಗಾಗಲೇ ಸರ್ಕಾರದ ಸೇವೆಯಲ್ಲಿರುವವರಿಗೆ ವೇತನ ನೀಡಬೇಕೆಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.
ಕೋಟಾ ಶ್ರೀನಿವಾಸ ಪೂಜಾರಿ ನಿಯೋಗದಲ್ಲಿ, ಮೀನುಗಾರಿಕಾ ಸಚಿವ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಇದ್ದರು.
ಚಂಡಮಾರುತದಿಂದ
126
ರೂ.ಕೋಟಿ
ನಷ್ಟ
ಇನ್ನು,
ತೌಕ್ತೆ
ಚಂಡಮಾರುತದಿಂದ
ದಕ್ಷಿಣ
ಕನ್ನಡದಲ್ಲಿ
ಹಾನಿಯಾದ
ವಿಚಾರವಾಗಿ
ಸಚಿವ
ಕೋಟಾ
ಶ್ರೀನಿವಾಸ್
ಪೂಜಾರಿ
ಪ್ರತಿಕ್ರಿಯಿಸಿದ್ದು,
ಸಚಿವ
ಎಸ್.ಅಂಗಾರ
ಜೊತೆ
ಸಿಎಂ
ಭೇಟಿ
ಮಾಡಿದ್ದೇವೆ.
ಮೊನ್ನೆಯ
ಚಂಡಮಾರುತದಿಂದ
126
ರೂ.ಕೋಟಿ
ನಷ್ಟವಾಗಿದೆ.
ರಸ್ತೆ,
ಮೀನುಗಾರಿಕೆ
ದಾರಿ,
ಸೇತುವೆಗಳು
ಹಾನಿಯಾಗಿವೆ
ಎಂದರು.
ಮುಖ್ಯಮಂತ್ರಿಗಳ ಬಳಿ ಪರಿಹಾರಕ್ಕೆ ಮನವಿ ಮಾಡಿದ್ದು, ಈ ಬಗ್ಗೆ ಗಮನಹರಿಸುವುದಾಗಿ ಸಿಎಂ ಹೇಳಿದ್ದಾರೆ. ದ.ಕ ಜಿಲ್ಲೆಯಲ್ಲಿ ಕೋವಿಡ್ನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿದ್ದೇವೆ. ಲಸಿಕೆ, ಆಕ್ಸಿಜನ್ ಟ್ಯಾಂಕ್ಗೆ ಬೇಡಿಕೆ ಇಟ್ಟಿದ್ದೇವೆ, ವೆಂಟಿಲೇಟರ್ಗೂ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಬುಧವಾರದ ಆರ್ಥಿಕ ಪ್ಯಾಕೇಜ್ನಲ್ಲಿ ಅರ್ಚಕರಿಗೆ ನೆರವು ಘೋಷಿಸಿಲ್ಲವೆಂಬ ವಿಚಾರವಾಗಿ ಮಾತನಾಡಿ, ತಸ್ತಿಕ್ ಹೆಚ್ಚಳ ಮಾಡುವಂತೆ ಅರ್ಚಕರು ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅರ್ಚಕರು ಹಾಗೂ ಮೀನುಗಾರರ ಬೇಡಿಕೆಗಳನ್ನು ಸಿಎಂಗೆ ತಿಳಿಸಿದ್ದೇವೆ. ಸಿಎಂ ಕೂಡ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಸಿಎಂ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.