ಮಂಗಳೂರಿಗೆ ಮಹಾರಾಷ್ಟ್ರ ಮೂಲದ ಕ್ರಿಕೆಟ್ ಬ್ಯಾಟ್ ಗಳು ಲಗ್ಗೆ
ಮಂಗಳೂರು, ಜನವರಿ. 03 : ನಗರದಾದ್ಯಂತ ಇನ್ನಷ್ಟೇ ಕ್ರಿಕೆಟ್ ಟೆನ್ನಿಸ್ ಬಾಲ್ ಟೂರ್ನಿಗಳು ಆರಂಭವಾಗಿದೆ. ಇದರಿಂದ ಕ್ರಿಕೆಟ್ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದ್ದರೇ, ಇತ್ತ ನಗರದಲ್ಲಿ ಮಹಾರಾಷ್ಟ್ರದ ಉತ್ತಮ ದರ್ಜೆಯ ಕಡಿಮೆ ದರದಲ್ಲಿ ಬಣ್ಣ ಬಣ್ಣದ ಬ್ಯಾಟುಗಳು ಕ್ರಿಕೆಟ್ ಪ್ರಿಯರಿಗಾಗಿ ಸಿದ್ದಗೊಂಡಿವೆ.
ಹೌದು. ನಗರದ ಕೆ.ಪಿ.ಟಿ ವೃತ್ತದಿಂದ ನಂತೂರು ಕಡೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 66ರ ಎಡಬದಿಯಲ್ಲಿ ಬ್ಯಾಟ್ ತಯಾರಿಕೆ ಹಾಗೂ ಮಾರಾಟ ಭರದಿಂದ ಸಾಗುತ್ತಿದೆ.
ಮಹಾರಾಷ್ಟ್ರದ ಧುಲೆ ಜಿಲ್ಲೆಯಿಂದ ಆಗಮಿಸಿದ ಎರಡು ಕುಟುಂಬಗಳು ಜೋಪಡಿ ರಚಿಸಿ ಬ್ಯಾಟ್ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಸುಮಾರು ಹತ್ತು ದಿನಗಳಿಂದ ಈ ಕುಟುಂಬ ನಗರದಲ್ಲಿ ನೆಲೆಸಿದ್ದು, ಕ್ರಿಕೆಟ್ ಬ್ಯಾಟುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಹೊತ್ತಿನ ಊಟ ಕಂಡುಕೊಳ್ಳುತ್ತಿವೆ.

ಈ ಕುಟುಂಬಗಳು ಮಹಾರಾಷ್ಟ್ರದಿಂದ ಬ್ಯಾಟ್ ನಿರ್ಮಾಣಕ್ಕೆ ಬೇಕಾದ ಮರದ ಸಣ್ಣ ಸಣ್ಣ ದಿಮ್ಮಿಗಳೊಂದಿಗೆ ಮಂಗಳೂರಿಗೆ ಬಂದಿವೆ. ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ದೊರೆಯುವ ವಾರೂಲ್ ಎಂಬ ಮರದಿಂದ ಈ ಬ್ಯಾಟ್ ನಿರ್ಮಿಸುತ್ತಿದ್ದಾರೆ.
ತಾವು ತಯಾರಿಸುವ ಬ್ಯಾಟ್ ಗೆ ಕನಿಷ್ಠ 150ರಿಂದ 450ರೂ. ವರೆಗೆ ಬೆಲೆ ನಿಗದಿ ಮಾಡಿದ್ದಾರೆ. ಮಕ್ಕಳಿಗಂತೂ ಬಣ್ಣ ಬಣ್ಣದ ಬ್ಯಾಟ್ ಗಳು ಆಕರ್ಷಿಸುತ್ತಿವೆ.
ಚಿಕ್ಕ ಮಕ್ಕಳು ಆಡಲು ಯೋಗ್ಯವಾದ ಸಣ್ಣ ಸಣ್ಣ ಬ್ಯಾಟುಗಳು ಮಾತ್ರವಲ್ಲದೆ ದೊಡ್ಡವರು ಉಪಯೋಗಿಸುವ ದೊಡ್ಡ ಗಾತ್ರದ ಬ್ಯಾಟುಗಳನ್ನು ಇವರು ತಯಾರಿಸುತ್ತಾರೆ. ಇದಲ್ಲದೆ ಜಾಯಿಂಟ್ ವಿಕೆಟ್(ಸ್ಟಂಪ್) ಕೂಡಾ ತಯಾರಿಸುತ್ತಾರೆ.
ಕಾರ್ಯವೈಖರಿ ಗಮನಾರ್ಹ: ಬ್ಯಾಟ್ ನಿರ್ಮಾಣ ಇವರ ಕುಲಕಸಾಬಾಗಿರುವುದರಿಂದ ಒಂದು ಬ್ಯಾಟ್ ತಯಾರಿಸಲು ಕನಿಷ್ಠ ಒಂದು ಗಂಟೆ ತಗುಲುತ್ತದೆ. ಆ ಒಂದು ಗಂಟೆಯಲ್ಲಿ ಬ್ಯಾಟ್ ನ ಮೇಲೆ ಬಣ್ಣ ಬಣ್ಣದ ಟೇಪ್ ಗಳನ್ನು ಹಚ್ಚಿ ಅದರ ಅಂದ ಹೆಚ್ಚಿಸಲಾಗುತ್ತಿದೆ.
ಸಿಂಗಲ್ ವುಡ್ ನಿಂದ ಬ್ಯಾಟ್ ತಯಾರಿಸುವುದರಿಂದ ಹೆಚ್ಚಿನ ಬಾಳಿಕೆ ಬರುತ್ತದೆ. ಈ ಕುರಿತು ಒನ್ ಇಂಡಿಯಾ ಜತೆ ಬ್ಯಾಟ್ ತಯಾರಕ ಸಂದೀಪ್ ಠಾಕ್ರೆ ಮಾತನಾಡಿ ,
ಟೆನ್ನಿಸ್ ಬಾಲ್ನಲ್ಲಿ ಕ್ರಿಕೆಟ್ ಆಡುವವರಿಗೆ ಈ ಬ್ಯಾಟ್ ಬಹಳ ಯೋಗ್ಯವಾಗಿದೆ. ಮಿತಬೆಲೆಗೆ ಸ್ಥಳದಲ್ಲೇ ಬ್ಯಾಟ್ ನಿರ್ಮಿಸುತ್ತೇವೆ. ಮಳೆಗಾಲ ಬಿಟ್ಟು ಉಳಿದ ಆರು ತಿಂಗಳು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಬ್ಯಾಟ್ ನಿರ್ಮಿಸಿ ಮಾರಾಟ ಮಾಡುತ್ತಿದ್ದೇವೆ.
ಮಂಗಳೂರಿಗೆ ಮೊದಲ ಬಾರಿಗೆ ಬಂದಿದ್ದೇವೆ. ಮಂಗಳೂರಿನಲ್ಲಿ ವ್ಯಾಪಾರ ಉತ್ತಮವಾಗಿದೆ'' ಎಂದರು.
-
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026: ಕರ್ನಾಟಕ ಚಾಂಪಿಯನ್, ಆತಿಥೇಯ ಛತ್ತೀಸ್ಗಢಕ್ಕೆ 9ನೇ ಸ್ಥಾನ -
ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಲಕ್ಷದ್ವೀಪದ ಮೀನುಗಾರ ಯುವಕ ಅಬ್ದುಲ್ ಫತ್ತಾ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications