ಮಂಗಳೂರು: ಇ-ಮೇಲ್ ಗೆ ಹ್ಯಾಕರ್ಸ್ ಕನ್ನ, ಲಕ್ಷಗಟ್ಟಲೇ ಕದ್ದರು!
ಇ-ಮೇಲ್ ಮುಖಾಂತರ ವ್ಯವಹಾರ ನಡೆಸುತಿದ್ದ ಕಂಪೆನಿಗಳ ಖಾತೆಗೆ ಖದೀಮರು ಕನ್ನ ಹಾಕಿ ಬರೋಬ್ಬರಿ 11,95,216 ರುಗಳನ್ನು ಎಗರಿಸಿದ್ದಾರೆ. ಈ ಬಗ್ಗೆ ರಿಚರ್ಡ್ ಮೊಂತೆರೊ ಎಂಬುವವರು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು, ನವೆಂಬರ್. 04 : ವ್ಯವಹಾರದ ನೆಪದಲ್ಲಿ ಎರಡು ಕಂಪೆನಿಯ ಇ- ಮೇಲ್ ಖಾತೆಗಳನ್ನು ಹ್ಯಾಕ್ ಮಾಡಿ ಬರೋಬ್ಬರಿ 11,95,216 ರುಗಳನ್ನು. ಲಪಟಾಯಿಸಿದ ಪ್ರಕರಣ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ರಿಚರ್ಡ್ ಮೊಂತೆರೊ ಹಣ ಕಳೆದುಕೊಂಡ ವ್ಯಕ್ತಿ.
ರಿಚರ್ಡ್ ಮೊಂತೆರೊ ಎಂಬುವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಂಟ್ ಟೆಕ್ ಪವರ್ ಟೆಕ್ನಿಕಲ್ ಸರ್ವಿಸಸ್ ಸಂಸ್ಥೆಯನ್ನು ನಡೆಸುತ್ತಿದ್ದು, ಕಂಪೆನಿಯ ಪ್ರಾಜೆಕ್ಟ್ ವರ್ಕ್ಗೆ ಬೇಕಾದ ಸೀಲಿಂಗ್ ಎಲಿಮೆಂಟ್ ಎಂಬ ಬಿಡಿ ಭಾಗಗಳನ್ನು ಅಮೆರಿಕ ಮೂಲದ ಇಎನ್ಆರ್ ಮಷಿನಿಂಗ್ ಕಂಪನಿಯಿಂದ ಆಮದು ಮಾಡಿಕೊಳ್ಳುತ್ತಿದ್ದರು.
ಈ ಕಂಪನಿಯೊಂದಿಗೆ ಇ-ಮೇಲ್ ಸಂವಹನದ ಮೂಲಕ ವ್ಯವಹಾರ ನಡೆಸುತ್ತಿದ್ದನ್ನು ಮಾಹಿತಿ ತಿಳಿದು ಹ್ಯಾಕರ್ಸ್ ಗಳು ರಿಚರ್ಡ್ ಮೊಂತೆರೊ ಅವರ ಇ-ಮೇಲ್ ಖಾತೆಗೆ ಕನ್ನ ಹಾಕಿದ್ದಾರೆ.

ಅಕ್ಟೋಬರ್. 7 ರಂದು ಹಾಗೂ ಅ. 20ರಂದು ರಿಚರ್ಡ್ ಅವರು ಕಂಪೆನಿಯಿಂದ ಎರಡು ಖರೀದಿ ಆದೇಶಗಳನ್ನು ಕೊಟ್ಟಿದ್ದಾರೆ. ಷರತ್ತಿನಂತೆ ಅಕ್ಟೋಬರ್. 17ರಂದು 12,000 ಅಮೇರಿಕನ್ ಡಾಲರ್ ಹಾಗೂ ಅ.20ರಂದು 5,800 ಅಮೆರಿಕನ್ ಡಾಲರ್ ಮೊತ್ತದ ಹಣವನ್ನು ಇಎನ್ಆರ್ ಕಂಪೆನಿಗೆ ಇ-ಮೇಲ್ ಸಂವಹನದ ಮೂಲಕ ಪಾವತಿಸಿದ್ದರು ಎನ್ನಲಾಗಿದೆ.
ಆದರೆ ಅಮೆರಿಕದ ಕಂಪೆನಿಯಿಂದ ಹಣ ಸ್ವೀಕೃತಿಯ ಯಾವುದೇ ಸಂದೇಶ ಬಾರದೆ ಇದ್ದುದರಿಂದ ಸಂಶಯಗೊಂಡು ಪರಿಶೀಲಿಸಿಸಲಾಗಿತ್ತು. ಆ ವೇಳೆ ಹಣವು ಇಎನ್ಆರ್ ಕಂಪೆನಿಯ ಖಾತೆಗೆ ಜಮಾ ಆಗದೇ ಇರುವುದು ತಿಳಿದಿದೆ.
ಒಟ್ಟು 11,95,216 ರು ಹಣವನ್ನು ಕಂಪನಿಯ ಇ-ಮೇಲ್ ಹ್ಯಾಕ್ ಮಾಡುವ ಮೂಲಕ ದುಷ್ಕರ್ಮಿಗಳು ವಂಚನೆ ಮಾಡಿರುವುದು ಪತ್ತೆಯಾಗಿದೆ. ಈ ಕುರಿತು ರಿಚರ್ಡ್ ಮೊಂತೆರೊ ಅವರು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನೀವೂ ಹ್ಯಾಕರ್ಸ್ ಗಳಿಂದ ಎಚ್ಚರದಿಂದ ಇರುವುದು ಒಳಿತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications