ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಕೊನೆಯ ಇ- ಮೇಲ್ನಲ್ಲೇನಿದೆ?
Recommended Video
ಮಂಗಳೂರು, ಜುಲೈ 30: ಅನೇಕ ಯುವ ಉದ್ಯಮಿಗಳಿಗೆ ರೋಲ್ ಮಾಡೆಲ್ ಅನ್ನಿಸಿಕೊಂಡಿದ್ದ ಕಾಫಿ ಡೇ ಸಂಸ್ಥಾಪಕ ವಿ. ಜಿ. ಸಿದ್ಧಾರ್ಥ ತಮ್ಮ 60ನೇ ವಯಸ್ಸಿನಲ್ಲಿ ಬದಕನ್ನು ಕೈ ಚೆಲ್ಲಿದರಾ? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ಅವರು ಎರಡು ದಿನಗಳ ಹಿಂದಷ್ಟು ಹಂಚಿಕೊಂಡಿದ್ದ ಇ- ಮೇಲ್.
ಜುಲೈ 27ರಂದು ಕಾಫಿ ಡೇ ಗ್ರೂಪ್ನ ಮಂಡಳಿ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸಿದ್ಧಾರ್ಥ ತಮ್ಮ 37 ವರ್ಷಗ ಔದ್ಯಮಿಕ ಬದುಕು ದಾರಿ ತಪ್ಪಿತು ಎಂದು ತಿಳಿಸಿದ್ದಾರೆ. "ಕಠಿಣ ಪರಿಶ್ರಮದಿಂದ ನಮ್ಮ ಕಂಪನಿಯಲ್ಲಿ 30 ಸಾವಿರ ಉದ್ಯೋಗ (ಕಾಫಿ ಡೇ ಮತ್ತು ಸಬ್ಸಿಡರಿಗಳಲ್ಲಿ) ಹಾಗೂ ತಂತ್ರಜ್ಞಾನ ಕಂಪನಿಯಲ್ಲಿ 20 ಸಾವಿರ (ಮೈಂಡ್ ಟ್ರೀ?) ಸೃಷ್ಟಿ ಮಾಡಿದ್ದೆ. ಆದರೆ ಇವುಗಳಿಗೆ ಒಂದು ಸರಿಯಾದ ಬಿಜಿನೆಸ್ ಮಾಡೆಲ್ ಸೃಷ್ಟಿ ಮಾಡುವಲ್ಲಿ ಸೋತು ಹೋದೆ,'' ಎಂದು ಬರೆಯುತ್ತಾರೆ ಸಿದ್ಧಾರ್ಥ.
ಗಮನ ಸೆಳೆಯುವ ಅಂಶ ಏನೆಂದರೆ, ತಮ್ಮ ಸಂಕಷ್ಟಗಳನ್ನು ವಿವರಿಸುವ ಸಿದ್ಧಾರ್ಥ ತಮ್ಮ ಒಬ್ಬ ಸ್ನೇಹಿತನಿಂದ ಆಗುತ್ತಿರುವ ಒತ್ತಡವನ್ನು ಇಲ್ಲಿ ನಮೋದಿಸುತ್ತಾರೆ. "6 ತಿಂಗಳ ಹಿಂದೆ ನಡೆದ ವ್ಯವಹಾರವೊಂದರಲ್ಲಿ ಒಬ್ಬ ಸ್ನೇಹಿತ ತನ್ನ ಶೇರುಗಳನ್ನು ಬೈ ಬ್ಯಾಕ್ ಮಾಡುವಂತೆ ಒತ್ತಡ ಹಾಕುತ್ತಿದ್ದಾನೆ. ಇತರೆ ಸಾಲ ನೀಡಿದವರಿಂದಲೂ ತೀವ್ರ ಒತ್ತಡ ಸೃಷ್ಟಿಯಾಗಿದ್ದು ಇದರಲ್ಲೇ ನಾನು ಮುಳುಗಿ ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹಿಂದೆ ಇದ್ದ ತೆರಿಗೆ ಇಲಾಖೆ ಡಿಜಿಯಿಂದಲೂ ಒತ್ತಡ ಹೆಚ್ಚಾಗತ್ತಿದೆ. ಇದರಿಂದ ವ್ಯವಹಾರ ಕಷ್ಟವಾಗುತ್ತಿದೆ," ಎಂದು ಸಿದ್ಧಾರ್ಥ ತಮ್ಮ ಒತ್ತಡವನ್ನು ವಿವರಿಸಿದ್ದಾರೆ.

ಇದರ ಜತೆಗೆ ಕಂಪನಿ ಹೆಸರಿನಲ್ಲಿ ನಡೆದಿರುವ ವ್ಯವಹಾರಗಳನ್ನು ಅವರು ಇಲ್ಲಿ ಉಲ್ಲೇಖಿಸಿದ್ದಾರೆ. "ಎಲ್ಲಾ ತಪ್ಪುಗಳಿಗೆ ನಾನೊಬ್ಬನೇ ಹೊಣೆಗಾರ. ನನ್ನ ತಂಡವಾಗಲೀ, ನನ್ನ ಆಡಿಟರ್ಗಳಾಗಲೀ, ಹಿರಿಯ ವ್ಯವಸ್ಥಾಪಕರುಗಳಿಗಾಲೀ ಕೆಲವೊಂದು ಕೊಡು ಕೊಳ್ಳುವಿಕೆ ಬಗ್ಗೆ ಮಾಹಿತಿ ಇಲ್ಲ. ಕಾನೂನು ನನ್ನನ್ನು ಮಾತ್ರವೇ ಪ್ರಶ್ನಿಸಬೇಕು. ನನ್ನ ಕುಟುಂಬವನ್ನೂ ಈ ವ್ಯವಹಾರದಿಂದ ದೂರ ಇಟ್ಟಿದ್ದೆ,'' ಎಂದು ಸಿದ್ಧಾರ್ಥ ವಿವರಿಸಿದ್ದಾರೆ.
"ನನ್ನ ಉದ್ದೇಶ ತಪ್ಪು ದಾರಿಗೆ ಎಳೆಯುವುದಾಗಲೀ ಅಥವಾ ವಂಚಿಸುವುದಾಗಲೀ ಆಗಿರಲಿಲ್ಲ. ಒಬ್ಬ ಉದ್ಯಮಿಯಾಗಿ ನಾನು ವಿಫಲನಾಗಿದ್ದೆ. ಇದು ನನ್ನ ಪ್ರಾಮಾಣಿಕ ತಪ್ಪೊಪ್ಪುವಿಕೆಯಾಗಿದ್ದು ನೀವೆಲ್ಲ ನನ್ನ ಕ್ಷಮಿಸುತ್ತೀರಿ ಎಂದಿ ಭಾವಿಸಿದ್ದೇನೆ,'' ಎಂದು ಸಿದ್ಧಾರ್ಥ ತಿಳಿಸಿದ್ದರು.

ಇದರ ಜತೆಗೆ ತಮ್ಮ ಆಸ್ತಿಗಳ ವಿವರಗಳು ಹಾಗೂ ಸಾಲಗಳ ಮಾಹಿತಿಯನ್ನು ಪ್ರತ್ಯೇಕ ಅಟ್ಯಾಚ್ಮೆಂಟ್ನಲ್ಲಿ ನೀಡಿದ್ದಾಗಿಯೂ ಇ- ಮೇಲ್ನಲ್ಲಿ ತಿಳಿಸಿದ್ದರು ಸಿದ್ಧಾರ್ಥ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications