Get Updates
Get notified of breaking news, exclusive insights, and must-see stories!

ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಭರ್ಜರಿ ಜಯಭೇರಿ

ಉಳ್ಳಾಲ ಹಾಗೂ ಪುತ್ತೂರು ನಗರಸಭೆಗೆ ನಡೆದ ಉಪಚುನಾವಣೆಯ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಒಟ್ಟು 9 ಕ್ಷೇತ್ರಗಳಲ್ಲಿ 5ನ್ನು ಗೆದ್ದುಕೊಂಡಿದ್ದು, ಬಿಜೆಪಿ ಕೇವಲ 3ರಲ್ಲಷ್ಟೆ ಗೆಲುವು ಸಾಧಿಸಿದೆ.

ಮಂಗಳೂರು, ಫೆಬ್ರವರಿ 15 : ಉಳ್ಳಾಲ ಹಾಗೂ ಪುತ್ತೂರು ನಗರಸಭೆಗೆ ನಡೆದ ಉಪಚುನಾವಣೆಯ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ.

ಸಚಿವ ಯುಟಿ ಖಾದರ್ ತವರು ಉಳ್ಳಾಲ ನಗರಸಭೆಯ ಎರಡು ಸ್ಥಾನ ಹಾಗೂ ಪುತ್ತೂರು ನಗರಸಭೆಯ ಆರು ಸ್ಥಾನಕ್ಕೆ ಫೆ.12ರಂದು ನಡೆದ ಉಪಚುನಾವಣೆ ನಡೆದಿತ್ತು.[ಸಿನಿಮೀಯ ಶೈಲಿಯಲ್ಲಿ ರೌಡಿ ಕಾಲಿಯಾ ರಫೀಕ್ ಕೊಲೆ]

City Corporation By-Election: Congress won 5 out of 9 seats

ಉಳ್ಳಲಾದ ಚೆಂಬುಗುಡ್ಡೆ ವಾಡಿ೯ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಝಿಲ್ ಡಿಸೋಜಾ 600 ಮತಗಳನ್ನು ಪಡೆದು ಭಜ೯ರಿ ಜಯ ಗಳಿಸಿದ್ದಾರೆ. ಬಿಜೆಪಿಯ ಸತೀಶ್ ಕೇವಲ 178 ಮತಗಳನ್ನು ಪಡೆದು ಸೋಲನ್ನೊಪ್ಪಿಕೊಂಡಿದ್ದಾರೆ.

26ನೆ ವಾರ್ಡ್ ನಲ್ಲಿ ಕಾಂಗ್ರೆಸ್ ನ ಉಸ್ಮಾನ್ 510 ಮತಗಳನ್ನು ಪಡೆದು ಜಯ ಗಳಿಸಿದರೆ ಪಕ್ಷೇತರ ಅಭ್ಯರ್ಥಿ 240 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.[ಬಾಲಿವುಡ್ ನಟ ನಾನಾ ಪಾಟೇಕರ್ ಮಂಗಳೂರಿಗೆ ಬಂದಿದ್ದೇಕೆ?]

ಇನ್ನು ಪುತ್ತೂರು ನಗರಸಭೆಯ 6 ವಾರ್ಡ್ ಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 3 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.

City Corporation By-Election: Congress won 5 out of 9 seats

ಕಾಂಗ್ರೆಸ್ ನ ಅಭ್ಯರ್ಥಿಗಳಾದ ಶ್ಯಾಮಲಾ, ಸುವರ್ಣಲತಾ ಗೌಡ ಮತ್ತು ಝೊಹರಾ ನಿಸಾರ್ ವಿಜೇತರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಬಾಲಪ್ಪ ಯಾನೆ ಸುಂದರ ಪೂಜಾರಿ, ವಿಜಯಲಕ್ಷ್ಮೀ ಮತ್ತು ರಮೇಶ್ ರೈ ವಿಜೇತರು.

ಪುತ್ತೂರು ಮಿನಿ ವಿಧಾನಸೌಧದ ತಹಶೀಲ್ದಾರ್ ನ್ಯಾಯಾಲಯದ ಕಚೇರಿಯಲ್ಲಿ ಇಂದು (ಫೆ. 15) ಮತ ಎಣಿಕೆ ಕಾರ್ಯವು ನಡೆಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+