ಪೊಲೀಸ್ ತನಿಖಾ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮ
ಪೊಲೀಸ್ ಇಲಾಖೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾದ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ ಸುದ್ದಿ ಪ್ರಕಟವಾಗುತ್ತಿರುತ್ತದೆ. ಈ ಸುದ್ದಿ ಪ್ರಕಟವಾದಾಗ ಸಾಮಾನ್ಯ ಜನರಿಗೆ ಪೊಲೀಸ್ ಇಲಾಖೆಯಿಂದ ಮಾನವ ಹಕ್ಕಿನ ಉಲ್ಲಂಘನೆ ಹೇಗೆ ಆಗುತ್ತದೆ ಎನ್ನುವ ಪ್ರಶ್ನೆ ಮೂಡುವುದು ಸಹಜ.
ಈ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಪೊಲೀಸರು ಅಪರಾಧಿಗಳೆಂದು ಕೆಲವೊಂದು ವ್ಯಕ್ತಿಗಳನ್ನು ಬಂಧಿಸಬೇಕಾದಲ್ಲಿ ಮಾನವ ಹಕ್ಕು ಕಾಯ್ದೆ ಪ್ರಕಾರ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎನ್ನುವುದರ ಬಗ್ಗೆ ಇಲ್ಲಿ ಇನ್ಫೋಗ್ರಾಫಿಕ್ನಲ್ಲಿ ಮಾಹಿತಿ ನೀಡಲಾಗಿದೆ.
ಈ ಇನ್ಫೋಗ್ರಾಫಿಕ್ನ್ನು ಮಂಗಳೂರಿನ ಹ್ಯೂಮನ್ ರೈಟ್ ಫೆಡರೇಷನ್ ಆಫ್ ಇಂಡಿಯಾ ಸಿದ್ದಪಡಿಸಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಇನ್ಫೋಗ್ರಾಫಿಕ್ ಮಾಹಿತಿಯನ್ನು ಓದಿಕೊಂಡು ಹೋಗಿ.

ಪೊಲೀಸ್ ಸಿಬ್ಬಂದಿ ಹೌದೋ? ಅಲ್ಲವೋ?
ದಸ್ತಗಿರಿ ಮಾಡುವ ಹಾಗೂ ದಸ್ತಗಿರಿಯಾದ ವ್ಯಕ್ತಿಯನ್ನು ವಿಚಾರಣೆ ಮಾಡುವ ಪೊಲೀಸ್ ಸಿಬ್ಬಂದಿ ಸ್ಪಷ್ಟವಾದ, ಖಚಿತವಾದ ಗುರುತಿನ ಚೀಟಿ ಮತ್ತು ನಾಮಫಲಕವನ್ನು ಹೊಂದಿರಬೇಕು.ವಿಚಾರಣೆ ನಡೆಸುವ ಪೊಲೀಸ್ ಸಿಬ್ಬಂದಿಯ ವಿವರಗಳನ್ನು ನೋಂದಣಿ ಪುಸ್ತಕದಲ್ಲಿ ದಾಖಲೆ ಮಾಡಬೇಕು.

ಸಾಕ್ಷಿದಾರ ಸಹಿ ಹಾಕಬೇಕು:
ದಸ್ತಗಿರಿ ಸಮಯದಲ್ಲಿ ಸಂಬಂಧಿತ ಪೊಲೀಸ್ ಅಧಿಕಾರಿ ದಸ್ತಗಿರಿ ಜ್ಞಾಪನವನ್ನು ಸಿದ್ಧಪಡಿಸಬೇಕು. ಆ ಜ್ಞಾಪನವನ್ನು ಒಬ್ಬ ಸಾಕ್ಷಿದಾರ ದೃಢೀಕರಿಸಬೇಕು. ಸಾಕ್ಷಿದಾರ ದಸ್ತಗಿರಿಯಾಗುತ್ತಿರುವ ವ್ಯಕ್ತಿಯ ಸಂಬಂಧಿಯಾಗಿರಬಹುದು ಅಥವಾ ದಸ್ತಗಿರಿ ನಡೆದ ಪ್ರದೇಶದ ವ್ಯಕ್ತಿ ಯಾಗಿರಬಹುದು. ದೃಢೀಕರಿಸಿದ ಪತ್ರಕ್ಕೆ ದಸ್ತಗಿರಿಯಾದವನು ಮೇಲು ರುಜು ಹಾಕಬೇಕು. ಪತ್ರದಲ್ಲಿ ಸಮಯ ಹಾಗೂ ದಿನಾಂಕವನ್ನು ನಮೂದಿಸುವುದು.

ಮಾಹಿತಿ ನೀಡುವುದು ಹೇಗೆ?
ಜ್ಞಾಪನ ಪತ್ರವನ್ನು ದೃಢೀಕರಿಸುವ ಸಾಕ್ಷಿದಾರ, ದಸ್ತಗಿರಿಯಾದ ವ್ಯಕ್ತಿಯ ಸಂಬಂಧಿ ಅಥವಾ ಪರಿಚಯದ ವ್ಯಕ್ತಿಯಾಗಿಲ್ಲದಿದ್ದಲ್ಲಿ, ದಸ್ತಗಿರಿಯಾಗಿರುವ/ಬಂಧನಕ್ಕೊಳಗಾಗಿರುವ ವ್ಯಕ್ತಿಯು ತನ್ನ ಕಲ್ಯಾಣದ ಬಗ್ಗೆ ಆಸಕ್ತಿಯುಳ್ಳ ಯಾವುದೇ ಒಬ್ಬ ವ್ಯಕ್ತಿಗೆ ತನ್ನ ದಸ್ತಗಿರಿ/ಬಂಧನ ಕುರಿತಂತೆ ಮಾಹಿತಿ ನೀಡುವ ಹಕ್ಕನ್ನು ಹೊಂದಿರುತ್ತಾನೆ.

ದೂರದ ವ್ಯಕ್ತಿಗಳಿಗೆ ಮಾಹಿತಿ ನೀಡುವುದು
ದಸ್ತಗಿರಿಯಾದ ವ್ಯಕ್ತಿಯ ಸಂಬಂಧಿ ಅಥವಾ ಸ್ನೇಹಿತ/ತೆ ದಸ್ತಗಿರಿಯಾದ ನಗರ ಅಥವಾ ತಾಲ್ಲೂಕಿನ ಹೊರಗಡೆ ವಾಸಿಸುತ್ತಿದ್ದ ಸಂದರ್ಭದಲ್ಲಿ, ಅವರಿಗೆ ಸಂಬಂಧಿತ ಪೊಲೀಸ್ ಸಿಬ್ಬಂದಿ ದಸ್ತಗಿರಿ ವಿಷಯವನ್ನು ದಸ್ತಗಿರಿ ಮಾಡಿದ 8 ರಿಂದ 12 ಗಂಟೆಯ ಅವಧಿಯೊಳಗೆ ತಿಳಿಸುವುದು.

ದೈಹಿಕ ಪರೀಕ್ಷೆ ಹೇಗೆ?
ದಸ್ತಗಿರಿಗೊಳಪಟ್ಟ ವ್ಯಕ್ತಿ ತನ್ನನ್ನು ದೈಹಿಕ ಪರೀಕ್ಷೆಗೊಳಪಡಿಸ ಬೇಕೆಂದು ಕೋರಿದಲ್ಲಿ, ಆತನನ್ನು ಪರೀಕ್ಷಿಸಬೇಕು. ದೇಹದ ಮೇಲೆ ಯಾವುದೇ ದೊಡ್ಡ ಮತ್ತು ಸಣ್ಣ ಗಾಯದ ಗುರುತುಗಳಿದ್ದರೆ, ಅವುಗಳನ್ನು ದಾಖಲು ಮಾಡಬೇಕು. ಪರೀಕ್ಷಾ ಜ್ಞಾಪನ ಪತ್ರಕ್ಕೆ ದಸ್ತಗಿರಿಯಾದ ವ್ಯಕ್ತಿ ಮತ್ತು ದಸ್ತಗಿರಿ ಮಾಡಿರುವ ಪೊಲೀಸ್ ಅಧಿಕಾರಿ ಇಬ್ಬರು ಸಹಿ ಹಾಕಬೇಕು. ಅದರ ಪ್ರತಿಯನ್ನು ದಸ್ತಗಿರಿಯಾದ ವ್ಯಕ್ತಿಗೆ ನೀಡುವುದು.

48 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆ
ದಸ್ತಗಿರಿಗೊಳಪಟ್ಟಿರುವ ವ್ಯಕ್ತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ನಿರ್ದೇಶಕರಿಂದ ನೇಮಕವಾದ ಅನುಮೋದಿತ ಪಟ್ಟಿಯಲ್ಲಿರುವ ಒಬ್ಬ ವೈದ್ಯರಿಂದ ಪ್ರತಿ 48 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆಗೊಳಪಡಿಸುವುದು.
ದಸ್ತಗಿರಿಯ ಜ್ಞಾಪನವು ಸೇರಿದಂತೆ ಸಂಬಂಧಿತ ಎಲ್ಲಾ ದಾಖಲೆಗಳನ್ನು ಮ್ಯಾಜಿಸ್ಟ್ರೇಟ್ ಅವರಿಗೆ ಕಳುಹಿಸಿ ಕೊಡುವುದು.

ವಕೀಲರಿಗೆ ಭೇಟಿಗೆ ಅವಕಾಶ
ಬಂಧನಕ್ಕೊಳಗಾದ ವ್ಯಕ್ತಿಯನ್ನು ಭೇಟಿ ಮಾಡಲು ಬರುವ ವಕೀಲರಿಗೆ ಭೇಟಿ ಮಾಡಲು ಅವಕಾಶ ಮಾಡಿಕೊಡುವುದು.

ಅನುಮತಿ ನೀಡುವುದು:
ಬಂಧನಕ್ಕೊಳಗಾದ ವ್ಯಕ್ತಿಯನ್ನು ಪ್ರಶ್ನಿಸುವ ಸಮಯದಲ್ಲಿ ಆತ/ಆಕೆ ತನ್ನ ವಕೀಲರನ್ನು ಜೊತೆಯಲ್ಲಿ ಭಾಗಶಃ ಹೊಂದಿರಲು ಅನುಮತಿ ನೀಡುವುದು.

ನಿಯಂತ್ರಣ ಕೊಠಡಿಗೆ ಮಾಹಿತಿ
ನಿಯಂತ್ರಣ ಕೊಠಡಿಗೆ ದಸ್ತಗಿರಿಯಾದ / ಬಂಧನದಲ್ಲಿಟ್ಟಿರುವ ವ್ಯಕ್ತಿಯ ವಿವರ ಹಾಗೂ ಇಟ್ಟಿರುವ ಸ್ಥಳ ಕುರಿತ ಮಾಹಿತಿಯನ್ನು ದಸ್ತಗಿರಿ ಮಾಡಿರುವ ಪೊಲೀಸ್ ಅಧಿಕಾರಿ ದಸ್ತಗಿರಿ / ಬಂಧನ ಮಾಡಿದ ೧೨ ಗಂಟೆಗಳೊಳಗೆ ತಿಳಿಸಬೇಕು. ಈ ಮಾಹಿತಿಯನ್ನು ಪೊಲೀಸ್ ನಿಯಂತ್ರಣ ಕೊಠಡಿ ಯಲ್ಲಿ ಎದ್ದು ಕಾಣುವಂತಹ ಸೂಚನಫಲಕದಲ್ಲಿ ಪ್ರದರ್ಶಿಸಬೇಕು.

ವಿಚಾರಣೆ ಹೇಗೆ?
* ಬಂಧಿತ ವ್ಯಕ್ತಿಯನ್ನು ಪ್ರಶ್ನಿಸುವಾಗ, ಆತನಿಗೆ/ಆಕೆಗೆ ಇರುವ ಜೀವನದ, ಸ್ವಾತಂತ್ರ್ಯದ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳ ಹಾಗೂ ಚಿತ್ರಹಿಂಸೆ ಮತ್ತು ಅವಹೇಳನದ ವಿರುದ್ಧ ಇರುವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು.
* ಯಾವುದೇ ವ್ಯಕ್ತಿಯನ್ನು ಅಧಿಕೃತ ಬಂಧನಕ್ಕೆ ಒಳಪಡಿಸದೆ ಪೊಲೀಸ್ ಠಾಣೆಯಲ್ಲಿ ಇರಲು ಒತ್ತಾಯಿಸಲಾಗದು.
* ಬಂಧಿತ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡ ಸಮಯದಿಂದ 24 ಗಂಟೆಯೊಳಗೆ ಸಂಬಂಧಪಟ್ಟ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು.
*ಯಾವುದೇ ವ್ಯಕ್ತಿಯನ್ನು ದಸ್ತಗಿರಿಗೊಳಪಡಿಸುವ ಸಮಯದಲ್ಲಿ ಆ ವ್ಯಕ್ತಿಯ ಮೇಲೆ ಗಾಯಗಳು ಇದ್ದಲ್ಲಿ, ಅವುಗಳನ್ನು ಬಂಧನದ ನೋಂದಣಿ ಪುಸ್ತಕದಲ್ಲಿ ನಮೂದಿಸಲಾಗುವುದು.
* ಅವಶ್ಯಕತೆಯಿಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸುವಾಗ ಮಾಡುವಾಗ ಬಲಪ್ರಯೋಗ ಮಾಡುವಂತಿಲ್ಲ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications