ಸ್ವಾತಂತ್ರ್ಯ ಸಂಭ್ರಮ: ದೇವಸ್ಥಾನದ ಮುಂದೆ ವರ್ಷಪೂರ್ತಿ ರಾಷ್ಟ್ರ ಧ್ವಜ ಹಾರಿಸಿದ 80ರ ವೃದ್ಧ
ಮಂಗಳೂರು, ಆಗಸ್ಟ್ 14: ಸಾಮಾನ್ಯವಾಗಿ ಎಲ್ಲರೂ ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಪ್ರೇಮ ಮೆರೆಯುತ್ತೇವೆ. ಆದರೆ ಮಂಗಳೂರಿನಲ್ಲಿ 80ರ ವಯೋವೃದ್ಧರೊಬ್ಬರು ದಿನಂಪ್ರತಿ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಪ್ರೇಮ ಮೆರೆದಿದ್ದಾರೆ. ತನಗೆ ಕೊಟ್ಟ ಹೊಣೆಗಾಗಿ ವರ್ಷದಲ್ಲಿ ಒಂದೇ ಒಂದು ದಿನವೂ ರಜೆ ಮಾಡದೆ ಕಾಯಕ ನಿಷ್ಠೆಯನ್ನು ತೋರಿದ್ದಾರೆ.
ಇದು ನಡೆದಿರುವುದು ಮಂಗಳೂರಿನ ಉರ್ವಸ್ಟೋರ್ ಬಳಿಯ ಅಶೋಕನಗರದ ದೇವಾಂಗ ಸಮುದಾಯದ ಶ್ರೀ ಭಗವತಿ ದೇವಸ್ಥಾನ ಹಾಗೂ ಕುಕ್ಕಾಡಿ ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ಆವರಣದಲ್ಲಿ. ಇದೇ ದೇವಾಂಗ ಸಮುದಾಯದ ಸಭಾಭವನದಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಾದಾಮಿ ಮೂಲದ ಶರಣಪ್ಪನವರು ಪ್ರತಿನಿತ್ಯ ಧ್ವಜಾರೋಹಣ ಮಾಡುತ್ತಾರೆ.

ಕಳೆದ ಬಾರಿ ನಾವೆಲ್ಲರೂ ಸ್ವಾತಂತ್ರ್ಯೋತ್ಸದ ಅಮೃತಮಹೋತ್ಸವ ಆಚರಿಸಿದ್ದೇವೆ. ಇದನ್ನು ಅರ್ಥಪೂರ್ಣವಾಗಿಸಲು ಮೂರು ದಿನಗಳ ಕಾಲ ದೇಶದ ಎಲ್ಲರ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದರು. ಈ ಕರೆಗೆ ಇಡೀ ದೇಶವೇ ಸ್ಪಂದಿಸಿತ್ತು. ಆದರೆ ದೇವಾಂಗ ಸಮುದಾಯವು ಮೂರು ದಿನಗಳಲ್ಲ ಒಂದಿಡೀ ವರ್ಷವೂ ರಾಷ್ಟ್ರಧ್ವಜದ ಹಾರಾಟಕ್ಕೆ ತೀರ್ಮಾನಿಸಿತ್ತು. ಆದರೆ ಧ್ವಜಾರೋಹಣ, ಅವರೋಹಣದ ಜವಾಬ್ದಾರಿ ಯಾರು ವಹಿಸುತ್ತಾರೆ ಎನ್ನುವಾಗ ಶರಣಪ್ಪ ಮುಂದೆ ಬಂದು ತಾನು ನೆರವೇರಿಸುತ್ತೇನೆ ಎಂದಿದ್ದಾರೆ.
ಹಾಗಾಗಿ ಶರಣಪ್ಪನವರು ಇಡೀ ವರ್ಷವೂ ಪ್ರತೀದಿನ ಬೆಳಗ್ಗೆ ಪ್ರತಿದಿನ ಬೆಳಗ್ಗೆ 7.30ಕ್ಕೆ ಸರಿಯಾಗಿ ಧ್ವಜಾರೋಹಣ ಮಾಡುತ್ತಾರೆ. ಸಂಜೆ ವೇಳೆಗೆ ಶಿಸ್ತುಬದ್ಧವಾಗಿ ಧ್ವಜ ವಂದನೆ ಮಾಡಿ ಧ್ವಜಾವರೋಹಣ ಮಾಡುತ್ತಾರೆ. ಬಳಿಕ ಯಥಾವತ್ತಾಗಿ ಧ್ವಜವನ್ನು ಮಡಚಿಡುತ್ತಾರೆ. ಮತ್ತೆ ಬೆಳಗ್ಗೆ ಧ್ವಜಾರೋಹಣ. ಹೀಗೆ ಒಂದು ವರ್ಷದಿಂದ ಇದು ಶರಣಪ್ಪರ ನಿರಂತರ ಕಾಯಕವಾಗಿದೆ.

ಧ್ವಜಾರೋಹಣದ ಹೊಣೆ ಇರೋದರಿಂದ ಅವರು ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರಂತೆ. ಎಲ್ಲೇ ಹೋದರೂ ರಾಷ್ಟ್ರಧ್ವಜಾರೋಹಣ ಹಾಗೂ ಅವರೋಹಣದ ವೇಳೆ ಶರಣಪ್ಪ ಹಾಜರಾಗುತ್ತಾರಂತೆ. ಸದ್ಯ ಮೂರು ವರ್ಷಗಳಿಂದ ದೇವಾಂಗ ಸಭಾಭವನದ ಸೆಕ್ಯೂರಿಟಿ ಗಾರ್ಡ್ ಆಗಿರುವ ಶರಣಪ್ಪ ಅಗಸ್ಟ್ 15ರ ಬಳಿಕ ರಜೆ ತೆಗೆದುಕೊಂಡು ಊರಿಗೆ ಹೋಗಲು ತೀರ್ಮಾನಿಸಿದ್ದಾರಂತೆ.
ಒಟ್ಟಿನಲ್ಲಿ ದೇವಾಂಗ ಸಮುದಾಯವು ಸದ್ದಿಲ್ಲದೆ ತಮ್ಮೊಳಗಿನ ರಾಷ್ಟ್ರಭಕ್ತಿ ಜಾಗೃತಿಗೊಳಿಸಿದ್ದು, ಶರಣಪ್ಪ ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಇವರ ಈ ರಾಷ್ಟ್ರಪ್ರೇಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications