5 ದಶಕದಿಂದ ದೋಣಿ ನಡೆಸುತ್ತಿರುವ ಮಂಗಳೂರಿನ 70ರ ನಾವಿಕ
ಒಂದರೆಡಲ್ಲ ಬರೋಬ್ಬರಿ 53 ವರ್ಷಗಳಿಂದ ಈ ಅಂಬಿಗನ ದೋಣಿ ನಿರಂತರವಾಗಿ ಸಾಗುತ್ತಲೇ ಇದೆ. ಅವರು ನಾಜೂಕಿನಿಂದ ಹಾಕುವ ಹುಟ್ಟು ಸಾವಿರಾರು ಜನರನ್ನು ದಡಕ್ಕೆ ಸೇರಿಸಿದೆ.
ಮಂಗಳೂರು, ಮೇ 20: ಒಂದರೆಡಲ್ಲ ಬರೋಬ್ಬರಿ 53 ವರ್ಷಗಳಿಂದ ಈ ಅಂಬಿಗನ ದೋಣಿ ನಿರಂತರವಾಗಿ ಸಾಗುತ್ತಲೇ ಇದೆ. ಅವರು ನಾಜೂಕಿನಿಂದ ಹಾಕುವ ಹುಟ್ಟು ಸಾವಿರಾರು ಜನರನ್ನು ದಡಕ್ಕೆ ಸೇರಿಸಿದೆ. 70 ವಸಂತಗಳು ಕಳೆದರೂ ಈ ವೃದ್ಧರ ಉತ್ಸಾಹ ಕುಂದಿಲ್ಲ.
ಇಳಿ ಹರೆಯದಲ್ಲೂ ಇವರ ಕಾಯಕ ನಿತ್ಯ- ನಿರಂತರ. ಇವರು ಮಂಗಳೂರು ಹೊರವಲಯದ ಪಾವೂರು ಗ್ರಾಮದ ಇನೋಳಿಯ ನಾಟರಗೋಲಿ ನಿವಾಸಿ ನಾರಾಯಣ ಸಪಲ್ಯ. ತಂದೆ ಓಮಯ್ಯ ಸಫಲ್ಯ ಸುಮಾರು 20 ವರ್ಷಗಳ ಕಾಲ ದೋಣಿ ನಡೆಸಿ, ಅಸೌಖ್ಯದ ಕಾರಣ ಈ ಕೆಲಸದಿಂದ ದೂರ ಸರಿದಾಗ ಮಗ ನಾರಾಯಣ ಸಫಲ್ಯ ಈ ಕಾಯಕವನ್ನು ಮುಂದುವರಿಸಿದರು.

ಆಗ ನಾರಾಯಣ ಸಫಲ್ಯರ ವಯಸ್ಸು 17 ವರ್ಷ. ಅಂದಿನಿಂದ ಇಂದಿನವರೆಗೆ ನದಿಯ ದಡದಿಂದ ದಡಕ್ಕೆ ಜನರನ್ನು ಸಾಗಿಸುವುದರಲ್ಲಿ ಅವರು ನಿರತರಾಗಿದ್ದಾರೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಚಾ ಎಲ್ಲವೂ ದೋಣಿಯಲ್ಲೇ!
ನೇತ್ರಾವತಿಯ ಫರಂಗಿಪೇಟೆಯಿಂದ ಇನೋಳಿ ಕಡೆಗೆ ತಮ್ಮ ದೋಣಿ ಮೂಲಕ ಪ್ರಯಾಣಿಕರನ್ನು ಸಾಗಿಸುವ ಮೂಲಕ ಅಲ್ಪಸ್ವಲ್ಪ ಸಂಪಾದನೆ ಮಾಡುತ್ತಿರುವ ಅವರು ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ತನ್ನ ದೋಣಿಯಲ್ಲಿ ಪ್ರಯಾಣಿಕರನ್ನು ತುಂಬಿಸಿ ನಗುಮೊಗದಿಂದ ಕೆಲಸ ಮಾಡುತ್ತಿದ್ದಾರೆ.[ಮಂಗಳೂರು: ಫಲ್ಗುಣಿಗೆ ಶುದ್ಧೀಕರಣ ಭಾಗ್ಯ]

ವರ್ಷಗಳ ಹಿಂದೆ ಇನೋಳಿ ಮೂಲಭೂತ ಸೌಕರ್ಯ ವಂಚಿತ ಹಳ್ಳಿಯಾಗಿತ್ತು. ಈ ಭಾಗದ ಬಹುತೇಕ ಜನರು ಕೃಷಿಯ ಮೇಲೆಯೇ ಅವಲಂಬಿತರಾಗಿದ್ದರು. ಇಲ್ಲಿನ ಜನ ಶಾಲೆ, ಕಾಲೇಜು, ಅಂಗಡಿ, ಚಿಕಿತ್ಸೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ಪಕ್ಕದ ಫರಂಗಿಪೇಟೆಯನ್ನೇ ಆಶ್ರಯಿಸಬೇಕು. ಆಗ ಅಲ್ಲಿನ ಜನರಿಗೆ ನದಿ ದಾಟಲು ಯಾವುದೇ ಸಾಧನವಿರಲಿಲ್ಲ. ಆಗ ನಾರಾಯಣ ಸಫಲ್ಯರ ತಂದೆ ಓಮಯ್ಯ ಸಪಲ್ಯ ಚಿಕ್ಕದೊಂದು ದೋಣಿಯನ್ನು ನದಿಗೆ ಇಳಿಸಿಯೇ ಬಿಟ್ಟರು.

'1974ರಲ್ಲಿ ಬಂದ ಪ್ರವಾಹ ಇಲ್ಲಿಯ ಜನರ ಬದುಕನ್ನೇ ಬರಿದುಗೊಳಿಸಿತ್ತು. ಅಂದು ಅದೆಷ್ಟೋ ಮನೆ, ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು. ಇನೋಳಿಯಿಂದ ಮಂಗಳೂರಿಗೆ ಇದೀಗ ಬಸ್ ಬಂದಿದೆ. ಹಾಗಿದ್ದರೂ ನನ್ನ ದೋಣಿಯಲ್ಲಿ ಜನ ಬರುವುದು ನಿಲ್ಲಿಸಿಲ್ಲ. ಸಂಖ್ಯೆ ಕಡಿಮೆಯಾಗಿದೆ. ನನಗಂತೂ ಈ ಕಾಯಕದಲ್ಲಿ ಖುಷಿ ಇದೆ. ಸಾಧ್ಯವಾದಷ್ಟು ಕಾಲ ನನ್ನ ಸೇವೆ ಪ್ರಯಾಣಿಕರಿಗೆ ಇರುತ್ತೆ' ಅಂತಾರೆ ನಾರಾಯಣ ಸಪಲ್ಯ.
ಮಳೆಗಾಲದಲ್ಲಿ ಬೀಸುವ ಗಾಳಿಗೆ ದೋಣಿ ನಡೆಸುವುದು ನಿಜಕ್ಕೂ ಸವಾಲು. ಆದರೆ, ಪ್ರಯಾಣಿಕರಿಗಾಗಿ ಈ ಸಾಹಸವನ್ನೂ ಸಂತೋಷದಿಂದಲೇ ನಿರ್ವಹಿಸುತ್ತಾರೆ ನಾರಾಯಣ ಸಫಲ್ಯ. ಆದರೆ, ಅವರನ್ನು ದಡ ಸೇರಿಸುವುದರಲ್ಲಿ ಅರ್ಧ ಜೀವವೇ ಹೋದ ಹಾಗೆ ಆಗುತ್ತದೆ ಎಂದು ತಮ್ಮ ಅನುಭವವನ್ನು ಬಿಚ್ಚಿಡುತ್ತಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications