ಏರ್ ಪೆಗಾಸಸ್: ಬೆಂಗಳೂರಿನಿಂದ ಚೆನ್ನೈ, ಮಂಗ್ಳೂರಿಗೆ ವಿಮಾನ
ಬೆಂಗಳೂರು, ಆಗಸ್ಟ್ 14: ದೇಶಿ ವಿಮಾನಯಾನದಲ್ಲಿ ಹೊಸ ಹುರುಪು ತುಂಬುತ್ತಿರುವ ಏರ್ ಪೆಗಾಸಸ್ ಸಂಸ್ಥೆ ಈಗ ಬೆಂಗಳೂರಿನಿಂದ ಚೆನ್ನೈ, ಮಂಗಳೂರಿಗೆ ನೇರ ವಿಮಾನಯಾನವನ್ನು ವಿಸ್ತರಿಸಿದೆ.
ಆಗಸ್ಟ್ 20ರಂದು ಬೆಂಗಳೂರಿನಿಂದ ಚೆನ್ನೈಗೆ ಪ್ರತಿನಿತ್ಯ ವಿಮಾನ ಸಂಚಾರ ಆರಂಭಿಸಲಿದೆ.ಆಗಸ್ಟ್ 21ರಿಂದ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಹಾರಲಿದೆ.
ಮಂಗಳೂರು
ಮಾರ್ಗದ
ವಿಮಾನಗಳು
ಪ್ರತಿನಿತ್ಯ
ಬೆಳಗ್ಗೆ
10.40ಕ್ಕೆ
ಬೆಂಗಳೂರಿನ
ಕೆಂಪೇಗೌಡ
ಅಂತಾರಾಷ್ಟ್ರೀಯ
ವಿಮಾನ
ನಿಲ್ದಾಣದಿಂದ
ಹೊರಟು
11.50
ರ
ಸುಮಾರಿಗೆ
ಮಂಗಳೂರಿನ
ಬಜ್ಪೆ
ವಿಮಾನ
ನಿಲ್ದಾಣ
ತಲುಪಲಿದೆ.
ಅಲ್ಲಿಂದ
ಮಧ್ಯಾಹ್ನ
12.15ಕ್ಕೆ
ಹೊರಟು
1.25ಕ್ಕೆ
ಬೆಂಗಳೂರಿಗೆ
ಬರಲಿದೆ.
ಚೆನೈ
ಮಾರ್ಗದ
ವಿಮಾನ
ಬೆಳಗ್ಗೆ
10.25ಕ್ಕೆ
ಬೆಂಗಳೂರಿನಿಂದ
ಹೊರಟು
11.25ಕ್ಕೆ
ಚೆನ್ನೈ
ತಲುಪಲಿದೆ.
ಚೆನ್ನೈನಿಂದ
11.50ಕ್ಕೆ
ಹೊರಟು
12.50ಕ್ಕೆ
ಬೆಂಗಳೂರು
ಸೇರಲಿದೆ
ಎಂದು
ಏರ್
ಪೆಗಾಸಸ್
ಸಂಸ್ಥೆ
ನಿರ್ದೇಶಕ
ಶೈಸನ್
ಥಾಮಸ್
ಹೇಳಿದ್ದಾರೆ.
ಇದರ
ಜೊತೆಗೆ
ಬೆಂಗಳೂರು-ಹುಬ್ಬಳ್ಳಿ
ವಿಮಾನಯಾನವನ್ನು
ದಿನಕ್ಕೆ
ಒಂದರಿಂದ
ಎರಡು
ಬಾರಿಗೆ
ವಿಸ್ತರಿಸಲಾಗಿದೆ.
ವಾರಕ್ಕೆ
ಮೂರು
ದಿನ
ಸಂಚರಿಸುತ್ತಿದ್ದ
ಬೆಂಗಳೂರು
-ಮದುರೈ
ವಿಮಾನ
ಪ್ರತಿನಿತ್ಯ
ಸಂಚಾರಕ್ಕೆ
ವಿಸ್ತಾರಗೊಂಡಿದೆ.
ಹುಬ್ಬಳ್ಳಿ,
ತಿರುವನಂತಪುರಂ,
ಮದುರೈ
ಹಾಗೂ
ಕಡಪ
ಮುಂದಿನ
ವಿಸ್ತರಣಾ
ನಿಲ್ದಾಣಗಳಾಗಿವೆ
ಎಂದು
ಸಂಸ್ಥೆ
ಪ್ರಕಟಿಸಿದೆ.