ನ.30 ಕ್ಕೆ ವಿನೋದ್ ಆಳ್ವ ಜಾಮೀನು ಅರ್ಜಿ ತೀರ್ಪು
ಪುತ್ತೂರು, ನ.27: ಚಿತ್ರ ನಟ ವಿನೋದ್ ಆಳ್ವ ಅವರ ಜಾಮೀನು ಅರ್ಜಿ ಮತ್ತೆ ವಜಾಗೊಂಡಿದೆ. ಜಾಮೀನು ಅರ್ಜಿ ಹಾಗೂ ಪೊಲೀಸ್ ಕಸ್ಟಡಿ ತೀರ್ಪನ್ನು ನ.30ಕ್ಕೆ ಮುಂದೂಡಿ ಪುತ್ತೂರು ಜಿಲ್ಲಾ ಐದನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಮಾಜಿ ಕೆಲಸಗಾರನ ಕೊಲೆ ಯತ್ನ ಸಂಚು ನಡೆಸಿದ ಆರೋಪದ ಮೇಲೆ ವಿನೋದ್ ಆಳ್ವ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಶ್ವರಮಂಗಲದಲ್ಲಿ ಮಾಜಿ ಕೆಲಸಗಾರ ಸಚ್ಚಿದಾನಂದರ ಬೈಕ್ಗೆ ಜೀಪ್ ಢಿಕ್ಕಿ ಹೊಡೆಸಿ ಕೊಲೆ ನಡೆಸುವ ಸಂಚು ರೂಪಿಸಿದ ಆರೋಪದಲ್ಲಿ ವಿನೋದ್ ಆಳ್ವ ಅವರ ಬಂಧನವಾಗಿದೆ.

ಜಾಮೀನು ಅರ್ಜಿ ಮತ್ತು ಅವರನ್ನು ಪೋಲೀಸ್ ಕಸ್ಟಡಿಗೆ ನೀಡುವಂತೆ ಕೋರಿ ಪ್ರಾಸಿಕ್ಯೂಶನ್ ಸಲ್ಲಿಸಿದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಾಲಯವು ನ.30ಕ್ಕೆ ಮುಂದೂಡಿದೆ.
ಜಾಮೀನು ಅರ್ಜಿ ಹಾಗೂ ಪೊಲೀಸ್ ಕಸ್ಟಡಿ ಪ್ರಶ್ನಿಸಿ ಸಲ್ಲಿಸಲಾಗಿರುವ ಎರಡು ಅರ್ಜಿಗಳ ಕುರಿತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರ ಮತ್ತು ಆರೋಪಿ ಪರ ವಾದ ಮಂಡನೆಯಾಗಿತ್ತು. ಬಳಿಕ ಪ್ರಕರಣದ ತೀರ್ಪನ್ನು ಮುಂದೂಡಲಾಗಿದೆ.












Click it and Unblock the Notifications