ಅಪಘಾತಕ್ಕೀಡಾದ ಟ್ರಾಲ್ ಬೋಟ್ ನಲ್ಲಿದ್ದ 9 ಮೀನುಗಾರರ ರಕ್ಷಣೆ
ಮಂಗಳೂರು, ಆಗಸ್ಟ್ 30: ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ಒಂದು ಅಪಘಾತಕ್ಕೀಡಾಗಿ ಅಪಾಯದಲ್ಲಿದ್ದ 9 ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
Recommended Video
ಕೆಎಸ್ಆರ್ಟಿಸಿ ಹೋಟೆಲ್ ಗಳಲ್ಲಿ ಶೋಷಣೆ, ಫೇಸ್ಬುಕ್ ಪೋಸ್ಟ್ ವೈರಲ್
ಮಂಗಳೂರಿನ ಅಳಿವೆ ಬಾಗಿಲಿನಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ. ಪದ್ಮನಾಭ ಎಂಬುವರಿಗೆ ಸೇರಿದ ಸಿ ಮಾಸ್ಟರ್ ಟ್ರಾಲ್ ಬೋಟ್ ಮಂಗಳವಾರ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ದಡಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಬೋಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಮುದ್ರ ಮಧ್ಯೆ ಕೆಟ್ಟು ನಿಂತಿತ್ತು .
ಈ ಹಿನ್ನೆಲೆಯಲ್ಲಿ ಮತ್ತೊಂದು ಮೀನುಗಾರಿಕಾ ದೋಣಿಗೆ ಕೆಟ್ಟು ನಿಂತ ಮೀನುಗಾರಿಕಾ ಬೋಟನ್ನು ಹಗ್ಗದಿಂದ ಬಿಗಿದು ದಡಕ್ಕೆ ಎಳೆ ತರುವ ಪ್ರಯತ್ನ ಮಾಡಲಾಯಿತು. ಈ ಸಂದರ್ಭದಲ್ಲಿ ಬೋಟ್ ನ ಪ್ರೊಫೆಲ್ಲರ್ ಫ್ಯಾನ್ ಗೆ ಹಗ್ಗ ಸುತ್ತಿಕೊಂಡ ಪರಿಣಾಮ ಹಗ್ಗ ತುಂಡಾಗಿತ್ತು.
ಮಂಗಳೂರು- ಬೆಂಗಳೂರು ರೈಲು ಹಳಿಯ ಮೇಲೆ ಗುಡ್ಡ ಕುಸಿತ
ಹೀಗಾಗಿ ನಿಯಂತ್ರಣ ಕಳೆದುಕೊಂಡ ಮೀನುಗಾರಿಕಾ ಟ್ರಾಲ್ ಬೋಟ್ ಮರಳು ದಿಣ್ಣೆಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮೀನುಗಾರಿಕಾ ದೋಣಿ ಮುಳುಗಲು ಆರಂಭಿಸಿದೆ. ಈ ಸಂದರ್ಭದಲ್ಲಿ ಅಪಾಯದಲ್ಲಿದ್ದ 9 ಮಂದಿ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ .
ಘಟನೆ ಕುರಿತು ಮಾಹಿತಿ ಪಡೆದ ಪಣಂಬೂರು ಪೊಲೀಸ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ . ಅಪಘಾತಕ್ಕೀಡಾದ ಟ್ರಾಲ್ ಬೋಟ್ ಮುಳುಗಿದ ಹಿನ್ನೆಲೆಯಲ್ಲಿ 63 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ